ನವದೆಹಲಿ : ಬ್ರಿಟನ್ ಸೇರಿದಂತೆ ಚೀನಾ, ರಷ್ಯಾ, ಜರ್ಮನಿಯಲ್ಲಿ ಆತಂಕ ಸೃಷ್ಟಿಸಿರುವ ರೂಪೈಂತಿರಿ ತಳಿ ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಕೊರೋನಾ ಸೋಂಕಿನ ಅಬ್ಬರ ತಗ್ಗಿತು ಅನ್ನುವಷ್ಟರಲ್ಲಿ ಡೆಲ್ಟಾ ರೂಪಾಂತರಿಯ ಉಪ ಪ್ರಭೇದ ಎವೈ 4 ರ ಏಳು ಪ್ರಕರಣಗಳು ಮಧ್ಯಪ್ರದೇಶದ ಇಂದೋರ್ ನಲ್ಲಿ ಪತ್ತೆಯಾಗಿದೆ.
ಇಬ್ಬರು ಸೇನಾಧಿಕಾರಿಗಳು ಸೇರಿದಂತೆ 7 ಮಂದಿಯಲ್ಲಿ ಈ ಹೊಸ ವೈರಸ್ ಕಂಡು ಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ಡೆಲ್ಟಾಗಿಂತ ಹತ್ತು ಪಟ್ಟು ವೇಗದಲ್ಲಿ ಇದು ಹರಡುವ ತಾಕತ್ತು ಹೊಂದಿರುವುದೇ ಇದೀಗ ಕಳವಳಕಾರಿಯಾಗಿದೆ.
ಒಟ್ಟು ನಡೆಸಲಾದ ಪರೀಕ್ಷೆಯ ಪ್ರಮಾಣದಲ್ಲಿ ಶೇ 0.1ಕ್ಕಿಂತಲೂ ಕಡಿಮೆ ಎಂದು ಹೊಸ ತಳಿ ಪತ್ತೆ ಹಚ್ಚಿರುವ CSIR – Institute of Genomics and Integrative Biology ಹೇಳಿದೆ, ಈ ಮೂಲಕ ಇಂದೋರ್ ನಲ್ಲಿ ದಿಢೀರ್ ಎಂದು ಸಪ್ಟಂಬರ್ ತಿಂಗಳಲ್ಲಿ ಕೊರೋನಾ ಏರಿಕೆಗೆ ಇದೇ ಪ್ರಬೇಧ ಕಾರಣ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆ ಮೂಲಕ ಒಂದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ, ಡೋಸ್ ಎರಡೂ ಪಡೆದರೂ ಕೊರೋನಾ ಸೋಲಿಸಿದಂತಲ್ಲ. ಬದಲಾಗಿ ಕೊರೋನಾ ಸೋಲಿಸುವ ಶಕ್ತಿ ಪಡೆದಿದ್ದೇವೆ ಎಂದರ್ಥ. ಹೀಗಾಗಿಯೇ ಮರೆತಿರುವ ಮಾಸ್ಕ್, ಸ್ಯಾನಿಟೈಸರ್, ದೈಹಿಕ ಅಂತರವನ್ನು ಮತ್ತೆ ಪಾಲಿಸಬೇಕಾಗಿದೆ.
Discussion about this post