ಮುಂಬೈ : ನೀಲಿ ಚಿತ್ರ ವಿಷಯದಲ್ಲಿ ಜೈಲು ಸೇರಿರುವ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಶೀಘ್ರದಲ್ಲಿ ಬಿಡುಗಡೆ ಭಾಗ್ಯ ಕಾಣುವ ಲಕ್ಷಣಗಳಿಲ್ಲ. ಮುಂಬೈ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ವಿಚಾರಣೆ ತೀವ್ರಗೊಳಿಸಿದ್ದಾರೆ.
ಈ ನಡುವೆ ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ತಾಯಿ ಅಳಿಯ ಜೈಲಿಗೆ ಹೋದ ಬೆನ್ನಲ್ಲೇ ಜುಹು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾರೆ. ಹಾಗಂತ ಇದು ಅಳಿಯ ವಿಚಾರಕ್ಕಾಗಿ ಅಲ್ಲ. ಬದಲಾಗಿ ತನಗೆ ಮೋಸವಾಗಿದೆ ಎಂದು ಆರೋಪಿಸಿ ಸುನಂದಾ ಶೆಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ ವರ್ಷ ಸುನಂದಾ ಶೆಟ್ಟಿ ಆಸ್ತಿ ಖರೀದಿಸುವ ಕುರಿತಂತೆ ಸುಧಾಕರ್ ಘಾರೆ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಒಪ್ಪಂದ ಸಂದರ್ಭದಲ್ಲಿ ಘಾರೆ ಜಮೀನಿಗೆ ಸೇರಿದ್ದ ದಾಖಲೆ ಪತ್ರಗಳನ್ನು ಕೂಡಾ ನೀಡಿದ್ದ. ಹೀಗಾಗಿ 1 ಕೋಟಿ 60 ಲಕ್ಷ ಮೊತ್ತ ಹಣವನ್ನು ಕೂಡಾ ಸುನಾಂದ ಶೆಟ್ಟಿ ನೀಡಿದ್ದರು. ಆದರೆ ಈಗ ಗೊತ್ತಾಗಿರುವ ಮಾಹಿತಿ ಪ್ರಕಾರ ಸುಧಾಕರ್ ನೀಡಿದ್ದ ದಾಖಲೆಗಳೆಲ್ಲವೂ ನಕಲಿ.
ಈ ಬಗ್ಗೆ ಸುನಂದಾ ಶೆಟ್ಟಿ, ಸುಧಾಕರ್ ನನ್ನು ಪ್ರಶ್ನಿಸಿದ್ರೆ ನಾನು ರಾಜಕೀಯ ಲೀಡರ್ ಹಾಗೆಲ್ಲಾ ತೊಂದರೆ ಇದ್ರೆ ಕೋರ್ಟ್ ಗೆ ಹೋಗಿ ಅಂದಿದ್ದಾನೆ. ಅದೇ ಪ್ರಕಾರ ಸುನಂದಾ ಶೆಟ್ಟಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಇದೀಗ ಪ್ರಕರಣದ ತನಿಖೆ ನಡೆಸುವಂತೆ ಪೊಲೀಸರಿಗೆ ಕೋರ್ಟ್ ಆದೇಶ ನೀಡಿದೆ.
Discussion about this post