ಮುಂಬೈ : ಅಧಿಕಾರದ ಸಲುವಾಗಿ ತನ್ನ ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೂರಿರುವ ಶಿವಸೇನೆ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯಪಾಲರ ವಿರುದ್ಧವೇ ತೊಡೆ ತಟ್ಟಿದೆ.
ಈಗಾಗಲೇ ಕರ್ನಾಟಕದ ಗಡಿ ವಿಚಾರದಲ್ಲಿ ತಕರಾರು ಎತ್ತಿರುವ ಮಹಾ ಸರ್ಕಾರ ತಲೆ ತಗ್ಗಿಸುವ ಮತ್ತೊಂದು ಕಾರ್ಯಮಾಡಿದೆ.
ಸರ್ಕಾರದ ವಿಶೇಷ ವಿಮಾನದಲ್ಲಿ ಉತ್ತರಾಖಂಡಕ್ಕೆ ಹೊರಟಿದ್ದ ರಾಜ್ಯಪಾಲ ಭಗತ್ ಸಿಂಗ್ ಅವರನ್ನು ವಿಮಾನದಿಂದ ಕೆಳಗಿಳಿಸಿರುವ ಘಟನೆ ಗುರುವಾರ ನಡೆದಿದೆ.
ತಮ್ಮ ತವರು ರಾಜ್ಯಕ್ಕೆ ತೆರಳುವ ಸಲುವಾಗಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ವಿಮಾನ ಹತ್ತಿ ಕುಳಿತಿದ್ದರು. ಆದರೆ ವಿಮಾನ ಮಾತ್ರ ಟೇಕಾಫ್ ಆಗಲಿಲ್ಲ. ಕಾರಣದಿಂದ ಕೇಳಿದ್ರೆ ರಾಜ್ಯ ಸರ್ಕಾರ ಇನ್ನು ಅನುಮತಿ ಕೊಟ್ಟಿಲ್ಲ ಎಂದು ಪೈಲೆಟ್ ಹೇಳಿದ್ದಾನೆ.
ಹೀಗಾಗಿ ಅನಿವಾರ್ಯವಾಗಿ ಕೆಳಗಿಳಿದ ರಾಜ್ಯಪಾಲರು ಎರಡು ಗಂಟೆಗಳ ಕಾಲ ಕಾದು ಮತ್ತೊಂದು ಖಾಸಗಿ ವಿಮಾನದ ಮೂಲಕ ತವರಿಗೆ ತೆರಳಿದ್ದಾರೆ.
ನಿಯಮಗಳ ಪ್ರಕಾರ ಸರ್ಕಾರದ ವಿಶೇಷ ವಿಮಾನ ಬಳಸುವ ಸಂದರ್ಭದಲ್ಲಿ ಸರ್ಕಾರದಿಂದ ಅನುಮತಿ ಪಡೆಯಬೇಕು.
ಸಾಮಾನ್ಯವಾಗಿ ರಾಜ್ಯಪಾಲರು ಸರ್ಕಾರ ಅನುಮತಿಗೆ ಕಾಯುವುದಿಲ್ಲ. ಆದರೆ ರಾಜ್ಯಪಾಲರ ಜೊತೆಗೆ ಮುಸುಕಿನ ಗುದ್ದಾಟ ನಡೆಸುತ್ತಿರುವ ಶಿವಸೇನೆ ಸಂದರ್ಭಕ್ಕಾಗಿ ಕಾಯುತ್ತಿತ್ತು.
ಹೀಗಾಗಿ ರಾಜ್ಯಪಾಲರು ವಿಮಾನ ಹತ್ತಿ ಕುಳಿತ ಬಳಿಕ ಕೆಳಗಿಳಿಯುವಂತೆ ಮಾಡಿ ಅವಮಾನಿಸಿದೆ.
ಆದರೆ ನಿಯಮಗಳ ಪ್ರಕಾರವೇ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
Discussion about this post