Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗೋದು :ಆಟೋ ಚಾಲಕನಿಗೆ ಸಿಕ್ತು ಪುಸ್ತಕ ಬಿಡುಗಡೆ ಭಾಗ್ಯ

Radhakrishna Anegundi by Radhakrishna Anegundi
April 23, 2019
in ಟ್ರೆಂಡಿಂಗ್
auto driver book
Share on FacebookShare on TwitterWhatsAppTelegram

ಅದು ಭಾನುವಾರ ಅಂದ್ ಏಪ್ರಿಲ್ ತಿಂಗಳ 21. ಬೆಂಗಳೂರು ಗಿರಿನಗರ ನಿವಾಸಿ ರಮೇಶ್ ಭಾನುವಾರವಾದ ಕಾರಣ ಮಾಲ್, ಸಿನಿಮಾ ಸುತ್ತಾಡುವ ಮಂದಿ ಸಾಕಷ್ಟಿರುತ್ತಾರೆ. ಆದಷ್ಟು ದುಡಿಯೋಣ ಎಂದು ಬೆಳಗ್ಗೆ ತಮ್ಮ ಆಟೋವನ್ನು ರಸ್ತೆಗಿಳಿಸಿದ್ದರು.

ಮಧ್ಯಾಹ್ನ ದೊಡ್ಡ ಬಾಕ್ಸ್ ಹತ್ತಿದ ವ್ಯಕ್ತಿಯೊಬ್ಬರು ಚಾಮರಾಜಪೇಟೆಯ ಸಾಹಿತ್ಯ ಪರಿಷತ್ ಇಳಿದು ಕಾಸು ಕೊಟ್ಟು ಹೊರಟು ಹೋಗಿದ್ದರು. ಆದರೆ ಬಾಕ್ಸ್ ಬಿಟ್ಟಿರೋದು ಪ್ರಯಾಣಿಕರಿಗೂ ಗೊತ್ತಿಲ್ಲ, ರಮೇಶ್ ಅವರಿಗೂ ಗೊತ್ತಾಗಲಿಲ್ಲ.

ಸಾಕಷ್ಟು ಸಮಯದ ನಂತ್ರ ಅರೇ ಆಟೋದಲ್ಲಿ ಬಾಕ್ಸ್ ಹಾಗೇ ಇದೆಯಲ್ಲ ಅನ್ನುವುದು ರಮೇಶ್ ಗಮನಕ್ಕೆ ಬಂದಿದೆ.

ಸರಿ ಆ ವ್ಯಕ್ತಿ ಯಾರು, ಎಲ್ಲಿಯವರು ಬಾಕ್ಸ್ ತಲುಪಿಸೋದು ಹೇಗೆ ಎಂದು ತಲೆಕೆಡಿಸಿಕೊಂಡ ರಮೇಶ್ ಬಾಕ್ಸ್ ತೆರೆದು ನೋಡಿದ್ರೆ ಒಂದಿಷ್ಟು ಪುಸ್ತಕಗಳು ಜೊತೆಗೊಂದಿಷ್ಟು ಆಮಂತ್ರಣ ಪತ್ರಿಕೆ ಇತ್ತು. ಸರಿಯಾಗಿ ನೋಡಿದ್ರೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಬಿಡುಗಡೆಯಾಗಬೇಕಾದ ಪುಸ್ತಕ ತನ್ನ ಆಟೋದಲ್ಲಿದೆ ಅನ್ನುವುದು ಗೊತ್ತಾಗಿದೆ.

ಏನೇ ಆಗ್ಲಿ ಎಂದು ರಮೇಶ್ ಸಾಹಿತ್ಯ ಪರಿಷತ್ ಕಡೆ ತನ್ನ ರಥದ ಚಕ್ರ ತಿರುಗಿಸಿದ್ದಾರೆ.

ಇತ್ತ ಸಾಹಿತ್ಯ ಪರಿಷತ್ ನಲ್ಲಿ ಬನಶಂಕರಿ ಬಳಿಯ ಕಾವೇರಿ ನಗರದ ವಿಶ್ವ ಮಾನವ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಹಾಸ್ಯ ಲೇಖಕ ನಾಗರಾಜ ಕೋಟೆ ಅವರ “ಕೋಟೆ ನಾಗನ ಕಾಮಿಡಿ ಕಗ’ ಪುಸ್ತಕ ಲೋಕಾರ್ಪಣೆ ಮತ್ತು “ನಾಗರಾಜ-54ರ ಅಭಿನಂದನೆ’ ಸಮಾರಂಭದ ಸಿದ್ಧತೆ ಭರ್ಜರಿಯಾಗಿ ಸಾಗಿತ್ತು.

ಇನ್ನೇನು ಕಾರ್ಯಕ್ರಮ ಶುರುವಾಗುವ ಹೊತ್ತು, ಅತಿಥಿಗಳು ಬಂದಾಗಿದೆ. ಕೆಲವೇ ಹೊತ್ತಿನಲ್ಲಿ ವೇದಿಕೆ ಹತ್ತುತ್ತಾರೆ. ಪುಸ್ತಕ ಬಿಡುಗಡೆ ಮಾಡಿಸಬೇಕು ಅನ್ನುವಷ್ಟರಲ್ಲಿ, ಪ್ರತಿಷ್ಠಾನದ ಅಧ್ಯಕ್ಷ ಪುಟ್ಟರಾಜು ಅವರಿಗೆ ಗೊತ್ತಾಗಿದೆ, ಪುಸ್ತಕದ ಬಾಕ್ಸ್ ಆಟೋದಲ್ಲಿ ಕಳೆದುಕೊಂಡಿದ್ದೇನೆ ಎಂದು.

ಗಡಿಬಿಡಿಯಲ್ಲಿ ಪುಸ್ತಕಗಳನ್ನು ವಾಹನದಲ್ಲೇ ಮರೆತಾಗಿದೆ. ಇನ್ನೇನು ಮಾಡುವುದು ಎಂದು ಲೇಖಕರ ಕಡೆಯಿಂದ ಬೈಸಿಕೊಂಡು, ಬಂದ ಅತಿಥಿಗಳ ಕೈಗೆ ಪುಸ್ತಕದ ಕವರ್ ಪೇಜ್ ಕೊಟ್ಟು ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸೋದು ಎಂದು ನಿರ್ಧರಿಸಿದ್ದಾರೆ. ಅದು ಇರೋದು ಒಂದೇ ಕವರ್ ಪೇಜ್ ಹೇಗೆಪ್ಪ ಅನ್ನುವ ತಲೆ ನೋವು ಸಂಘಟಕರದ್ದು. ಪುಸ್ತಕ ಬಿಡುಗಡೆಯನ್ನು ಮಾತಿನಲ್ಲೇ ಮುಗಿಸಲು ನಿರ್ಧರಿಸಿದ್ದಾರೆ.

ಕಾರ್ಯಕ್ರಮ ಉದ್ಘಾಟನೆಯಾಯ್ತು, ಮುಖ್ಯ ಅತಿಥಿಯ ಭಾಷಣ ಮುಗಿಯಿತು, ಆದರೆ ಪುಸ್ತಕ ಬಿಡುಗಡೆ ಲಕ್ಷಣ ಕಾಣಿಸಲಿಲ್ಲ. ಸಭಿಕರೇ ಈ ಬಗ್ಗೆ ಪ್ರಶ್ನಿಸಿದಾಗ, ಆಯೋಜಕರು ಗಡಿಬಿಡಿಯಲ್ಲಿ ಪುಸ್ತಕಗಳನ್ನು ಆಟೋದಲ್ಲಿ ಬಿಟ್ಟು ಬಂದಿರುವ ವಿಚಾರ ಬಹಿರಂಗವಾಗಿದೆ.

ಅಷ್ಟು ಹೊತ್ತಿಗೆ ಬಾಕ್ಸ್ ಹಿಡಿದ ಆಟೋ ಚಾಲಕ ರಮೇಶ್ ಸಭಾಂಗಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಟೋ ಹತ್ತಿದ ವ್ಯಕ್ತಿಗಾಗಿ ಕಣ್ಣಾಡಿಸಿದ್ದಾರೆ.

ಅಷ್ಟು ಹೊತ್ತಿಗೆ ಕಳೆದು ಹೋದ ಪುಸ್ತಕ ಸಿಕ್ಕಿದೆ ಅನ್ನುವ ಸುದ್ದಿ ಸಂಘಟಕರಿಗೆ ಗೊತ್ತಾಗಿದೆ. ಕೊನೆಗೆ ಅತಿಥಿಗಳು ಆಟೋ ಚಾಲಕನಿಂದಲೇ ಕೃತಿ ಲೋಕಾರ್ಪಣೆ ಮಾಡಿಸಿ ಗೌರವಿಸಿದರು.

ಸಮಯ ಪ್ರಜ್ಞೆಯಿಂದ ಸಕಾಲಕ್ಕೆ ಕೃತಿಗಳನ್ನು ಹೊತ್ತು ತಂದ ಆಟೋ ಚಾಲಕ ರಮೇಶ್‌ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಮಾತ್ರವಲ್ಲದೇ ಕೃತಿ ಬಿಡುಗಡೆಗೊಳಿಸಿದ ಹಿರಿಮೆಗೂ ಪಾತ್ರರಾದರು.

ಈ ಘಟನೆ ಕುರಿತಂತೆ ಹರ್ಷ ವ್ಯಕ್ತಪಡಿಸಿರುವ ಪುಸ್ತಕ ಬಿಡುಗಡೆ ಮಾಡಬೇಕಾಗಿದ್ದ ಲೇಖಕ ಮಲ್ಲೇಪುರಂ ಜಿ. ವೆಂಕಟೇಶ್‌, ರಮೇಶ್ ಅವರ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರಮೇಶ್ “ನನ್ನ ಆಟೋದಲ್ಲಿ ಬಿಟ್ಟು ಹೋಗಿದ್ದ ಪುಸ್ತಕಗಳನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬಂದೆ. ನನ್ನ ಪ್ರಾಮಾಣಿಕತೆಗೆ ಪುಸ್ತಕ ಬಿಡುಗಡೆ ಸುಯೋಗ ಸಿಕ್ಕಿತು. ಜತೆಗೆ ಸನ್ಮಾನ ಭಾಗ್ಯವೂ ದೊರೆಯಿತು,’ ಎಂದು ಸಂತಸ ವ್ಯಕ್ತಪಡಿಸಿದರು.

ShareTweetSendShare

Discussion about this post

Related News

man-puts-rs-100-crore-cheque-simhachalam-temple-hundi

ದೇವರಿಗೆ ಚೆಕ್ ಕೊಟ್ಟು ಯಾಮಾರಿಸಿದ ಭೂಪ : 100 ಕೋಟಿ ಚೆಕ್ ಕೊಟ್ಟವನ ಖಾತೆಯಲ್ಲಿತ್ತು 17 ರೂಪಾಯಿ

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

ಚೀತಾ ಕರೆ ತಂದ ತಂಡದಲ್ಲಿದ್ದ ಕನ್ನಡಿಗನಿಗೆ ಭೇಷ್ ಅಂದ ಪ್ರಧಾನಿ ನರೇಂದ್ರ ಮೋದಿ ( sanath krishna muliya)

Vastralankara seva:ತಿರುಪತಿ ತಿಮ್ಮನಿಗೆ 50 ಲಕ್ಷ ರೂಪಾಯಿ ದಂಡ : ವಸ್ತ್ರಾಲಂಕಾರ ಸೇವೆಗೆ ನಿರಾಕರಣೆ

Chikkaballapura : ಅಜ್ಜಿಯನ್ನು ನಿರ್ಲಕ್ಷ್ಯಿಸಿದ ಮೊಮ್ಮಗಳು : ಜಮೀನು ವಾಪಾಸ್ ಕೊಡಿಸಿದ ಉಪವಿಭಾಗಾಧಿಕಾರಿ

Papad kerala : ಹಪ್ಪಳಕ್ಕಾಗಿ ಮದುವೆ ಮನೆಯಲ್ಲಿ ಗಲಾಟೆ : 1.5 ಲಕ್ಷ ರೂಪಾಯಿ ನಷ್ಟ

King Cobra Car : ಕಾರಿನಲ್ಲಿ ಕಾಳಿಂಗ ಸರ್ಪದೊಂದಿಗೆ ಒಂದು ತಿಂಗಳ ಪ್ರವಾಸ : ಕೇರಳದಲ್ಲೊಂದು ಭಯಾನಕ ಘಟನೆ

belagavi leopard : ಚಿರತೆ ಹಿಡಿಯಲು ಮೂತ್ರ ತಂದ ಅರಣ್ಯಾಧಿಕಾರಿಗಳು : ಹನಿ ಟ್ರ್ಯಾಪ್ ತಂತ್ರಕ್ಕೆ ಬಕ್ರ ಆಗುತ್ತಾ…

Tumakuru : ಮುಂಜಿಗೆ ಹೆದರಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಹೋದ ಅರ್ಚಕ ವಾಪಾಸ್

Nimishamba  E Hundi : ದೇವಸ್ಥಾನಕ್ಕೂ ಬಂತು ಡಿಜಿಟಲ್ ಹುಂಡಿ : Scan ಮಾಡಿ ಕಾಣಿಕೆ ನೀಡಿ

Latest News

jail

ಕುವೈತ್ ನಲ್ಲಿ ಜೈಲುಪಾಲಾದ ಕೇರಳ ಮೂಲದ 19 ಮಂದಿ ನರ್ಸ್

bantwal city police arrest two thef kannada news

ಕರಾವಳಿಯಲ್ಲಿ ಚಿಗುರಿದ ಕಳ್ಳರ ಗ್ಯಾಂಗ್ ಹೆಡೆಮುರಿ ಕಟ್ಟಿದ ಬಂಟ್ವಾಳ ಪೊಲೀಸರು

Chaitra Kundapura govinda-babu-poojari-ccb-police arrest

ಕಬಾಬ್ ವ್ಯಾಪಾರಿಗೆ ಎಲೆಕ್ಷನ್ ಸಮಿತಿ ಸದಸ್ಯನ ವೇಷ : ಸ್ವಯಂ ಘೋಷಿತ ಹಿಂದೂ ನಾಯಕಿಯ ಖತರ್ನಾಕ್ ಕಹಾನಿ

/ks-eshwarappa-meets-hd-kumaraswamy-bengaluru

ಜೆಡಿಎಸ್ ಬಿಜೆಪಿ ಮೈತ್ರಿ ಪ್ರಸ್ತಾಪ : ಕುಮಾರಸ್ವಾಮಿ ಶಕ್ತಿ ವರ್ಧನೆ ಸುಳಿವು ಬೆನ್ನಲ್ಲೇ ಚುರುಕಾದ ಈಶ್ವರಪ್ಪ

g20-summit-delhi-police-books-photographer-for-flying-drone-during-birthday-party

ಜನ್ಮದಿನ ಚಿತ್ರೀಕರಿಸಿದ ಕ್ಯಾಮಾರಮನ್ ವಿರುದ್ಧ ಕೇಸ್ : 1 ತಿಂಗಳ ಸೆರೆವಾಸ ಸಾಧ್ಯತೆ

https://torrentspree.com/karnataka-weather-forecast-and-rain-alert-for-monday-september-11/

11.09.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

puttur mahalingeshwara temple ex president N Sudhakar Shetty no more

ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ‌ಸಮಿತಿ ಮಾಜಿ ಅಧ್ಯಕ್ಷ ಎನ್ ಸುಧಾಕರ ಶೆಟ್ಟಿ ಇನ್ನಿಲ್ಲ

brindavana-kannada-serial-ramji-colours-kannada

ರಾಮ್ ಜೀ ನಿರ್ದೇಶನದಲ್ಲಿ ಮತ್ತೊಂದು ಸೀರಿಯಲ್ : ಬಿಗ್ ಬಾಸ್ ನಂತ್ರ ಬೃಂದಾವನ

chinese-reporter what-if-india-renamed-as-bharat-heres-what-un-chiefs-spokesperson-said

ಭಾರತ ಹೆಸರು ಬದಲಾವಣೆ : ಚೀನಾದ ಮಾಧ್ಯಮ ಪ್ರತಿನಿಧಿಗೆ ತಲೆ ಬಿಸಿ

bigg boss kannada season 10 contestants

ಬಿಗ್ ಬಾಸ್ ವೇದಿಕೆ ಇವರೆಲ್ಲಾ ಎಲ್ಲಿ ಹೋದ್ರು : ಮಹಾಮನೆಯಲ್ಲಿ ನಿರಾಸೆಯಾದವರು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್