ಕನ್ನಡ ಚಿತ್ರರಂಗದಲ್ಲಿ ನಟಿ ಅನಿತಾ ಭಟ್ ತಮ್ಮದೇ ಛಾಪು ಮೂಡಿಸಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು 13 ವರ್ಷ ಕಳೆದರೂ ಇನ್ನೂ ಬೇಡಿಕೆ ಉಳಿಸಿಕೊಂಡಿದ್ದಾರೆ. ವಿವಾದಗಳಿಂದ ದೂರ ಇರುವುದೇ ಅನಿತಾ ಭಟ್ ಅವರ ಹೆಗ್ಗಳಿಕೆ. ( anitha bhat daughter )
ಅನಿತಾ ಭಟ್ ಸದಾ ಸುದ್ದಿಯಲ್ಲಿರುವ ನಟಿ. ಗ್ಲಾಮರಸ್ ಫೋಟೋಗಳ ಮೂಲಕ ಸದಾ ವೈರಲ್ ಕೆಟಗರಿಯಲ್ಲಿ ಕಾಣಿಸಿಕೊಳ್ಳುವ ಅನಿತಾ ಭಟ್ ( anitha bhat daughter) ಅದೆಷ್ಟು ಮುದ್ದಾಗಿ ನಗ್ತಾರೋ ಅಷ್ಟೇ ನೋವುಗಳನ್ನು ತನ್ನೊಳಗೆ ಹುದುಗಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 2 ರಲ್ಲಿ ಕಾಣಿಸಿಕೊಂಡಿದ್ದ ಅನಿತಾ ಭಟ್ ತಮ್ಮ ಬದುಕಿನ ಏರಿಳಿತಗಳನ್ನು ತೆರೆದಿಟ್ಟಿದ್ದರು.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಅನಿತಾ ಭಟ್, ಉದ್ಯಮಿಯಾಗುವ ಸಾಹಸಕ್ಕೂ ಕೈ ಹಾಕಿದ್ದರು. ಯೋಗ ತರಗತಿಗಳನ್ನು ನಡೆಸುವ ಮೂಲಕ ಸುದ್ದಿಯಾಗಿದ್ದರೂ ಕೂಡಾ.
ಇದನ್ನೂ ಓದಿ : sai pallavi : ಕಾಶ್ಮೀರಿ ಪಂಡಿತರ ಬಗ್ಗೆ ಹೇಳಿಕೆ ಕೊಟ್ಟ ನಟಿಗೆ ಸಂಕಷ್ಟ : ಸಾಯಿ ಪಲ್ಲವಿ ಮನವಿ ತಿರಸ್ಕರಿಸಿದ ನ್ಯಾಯಾಲಯ
ಇದೀಗ ಮತ್ತೊಮ್ಮೆ ಸುದ್ದಿಯಾಗಿರುವುದು ಅನಿತಾ ಭಟ್ ಟಿವಿ9 ಮೂಲಕ. ಟಿವಿ9 ಕನ್ನಡ ಸುದ್ದಿವಾಹಿನಿಗೆ ವಿಶೇಷ ಸಂದರ್ಶನ ಕೊಟ್ಟಿರುವ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಕುರಿತಂತೆ ತನದೇ ಆದ ಅಭಿಪ್ರಾಯ ಹೊಂದಿರುವ ಅವರು, ನನಗೆ ಮದುವೆ ಇಷ್ಟವಿದೆ. ಮದುವೆ ಅನ್ನುವುದು ವ್ಯಕ್ತಿಯೊಬ್ಬರ ಜೀವನದಲ್ಲಿ ನಡೆಯಲೇಬೇಕು, ಆದರೆ ಅಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ನನಗೆ ಒಲವಿಲ್ಲ ಅಂದಿದ್ದಾರೆ.
ಇನ್ನು ನನ್ನ ಮಗಳಿಗೂ ಬಾಯ್ ಫ್ರೆಂಡ್ ಇದ್ದಾನೆ ಆದರೆ ಅವಳಿಗೂ ಮದುವೆ ಇಷ್ಟವಿಲ್ಲ ಎಂದು ಅನಿತಾ ಭಟ್ ಹೇಳಿದ್ದಾರೆ. ಈ ನಡುವೆ ಸಂದರ್ಶಕಿ ಸುಕನ್ಯ ಈಗ ನಿಮ್ಮ ಜೀವನದಲ್ಲಿ ಯಾರಿದ್ದಾರೆ ಅನ್ನುವ ಪ್ರಶ್ನೆಗೆ, ನನ್ನ ಬದುಕಿನಲ್ಲಿ ವ್ಯಕ್ತಿಯೊಬ್ಬರು ಇದ್ದಾರೆ ಅಂದಿದ್ದಾರೆ. ಅವರು ಸಿನಿಮಾ ರಂಗದವರೇ ಅಂದಿರುವ ಅನಿತಾ ಭಟ್, ಶೀಘ್ರದಲ್ಲೇ ಗುಡ್ ನ್ಯೂಸ್ ಸಿಗಲಿದೆಯೇ ಅಂದ್ರೆ ಗೊತ್ತಿಲ್ಲ ಅಂದಿದ್ದಾರೆ.
ಶಿಕ್ಷಣ ಸಚಿವ ನಾಗೇಶ ವಜಾ ಕೋರಿ ಮೋದಿಗೆ ಪತ್ರ
ಬಿಸಿ ನಾಗೇಶ್ ಶಿಕ್ಷಣ ಸಚಿವರಾದ ವೇಳೆ ನಿರೀಕ್ಷೆಗಳು ಸಾಕಷ್ಟಿತ್ತು. ಆದರೆ ಸರಳ, ಸಜ್ಜನ ಅಂದ ಮಾತ್ರಕ್ಕೆ ಉತ್ತಮ ಸಚಿವರಾಗಲು ಸಾಧ್ಯವಿಲ್ಲ ಅನ್ನುವುದಕ್ಕೆ ನಾಗೇಶ್ ಉದಾಹರಣೆ. ಭವಿಷ್ಯದ ಪ್ರಜೆಗಳನ್ನು ನಿರ್ಮಿಸುವ ( karnataka text book row) ಇಲಾಖೆಯಲ್ಲಿ ನಾಗೇಶ್ ಮಾಡಿದ್ದು ಬರೀ ಎಡವಟ್ಟು
ಬೆಂಗಳೂರು :ಶಿಕ್ಷಣ ಇಲಾಖೆಯಲ್ಲಿ ಸಾಲು ಸಾಲು ಆಡಳಿತ ವೈಫಲ್ಯಗಳ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರನ್ನು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಸೂಚಿಸಿ ಎಂದು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ರುಪ್ಸಾ ( Registered Unaided Private Schools Management Association, Karnataka, (RUPSA ) ಪ್ರಧಾನಿ ನರೇಂದ್ರ ಮೋದಿಯವರ ಮೊರೆ ಹೋಗಿದೆ.
ಇದನ್ನೂ ಓದಿ : Hanuman Chalisa Madhya Pradesh : ಹಿಂದೂಸ್ತಾನದಲ್ಲಲ್ಲದೆ ಮತ್ತೆಲ್ಲಿ ಹನುಮಾನ್ ಚಾಲೀಸಾ ಪಠಿಸಬೇಕು : ಮಧ್ಯಪ್ರದೇಶ ಗೃಹ ಸಚಿವ
ಈ,ಸಂಬಂಧ ಪತ್ರ ಬರೆದಿರುವ RUPSA ಪಠ್ಯ ಪುಸ್ತಕ ವಿವಾದ ಸೇರಿದಂತೆ ಸಾಲು ಸಾಲು ಆಡಳಿತ ವೈಫಲ್ಯದ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಎಂದು ಸಂಘಟನೆ ಮುಖ್ಯಸ್ಥರು ಆಗ್ರಹಿಸಿದ್ದಾರೆ. ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಬರೆದಿರುವ ಪತ್ರದಲ್ಲಿ
“ ರಾಜ್ಯದಲ್ಲಿ ಪ್ರತೀ ಮಕ್ಕಳಿಗೂ ಶಿಕ್ಷಣ ನೀಡುವುದು ಸರ್ಕಾರ ಕರ್ತವ್ಯ. ಆದರೆ ಕರ್ನಾಟಕದಲ್ಲಿ ಈ ಬಗ್ಗೆ ಕನಿಷ್ಟ ಜ್ಞಾನವಿಲ್ಲದ, ಪಕ್ಕಾ ವ್ಯಾಪಾರಿ ಮನೋಭಾವ ಹೊಂದಿರುವ ವ್ಯಕ್ತಿ ಮಂತ್ರಿಯಾಗಿರುವುದರಿಂದ ಇದು ಈಡೇರುತ್ತಿಲ್ಲ. ಹೀಗಾಗಿ ಅವರನ್ನು ವಜಾ ಮಾಡುವಂತೆ ಮುಖ್ಯಮಂತ್ರಿಯವರಿಗೆ ಸೂಚಿಸಿ ಎಂದು ಅವರು ಆಗ್ರಹಿಸಿದ್ದಾರೆ.
ಹಾಗೇ ನೋಡಿದರೆ ಮೊನ್ನೆ ಮೊನ್ನೆ ಶಾಲಾ ಮಕ್ಕಳಿಗೆ ಶೂ ವಿತರಣೆ ವಿಚಾರದಲ್ಲಿ ಮಾತನಾಡಿದಾಗಲೇ ಬಿಸಿ ನಾಗೇಶ್ ವರ ರಾಜೀನಾಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಡೆಯಬೇಕಾಗಿತ್ತು.
Discussion about this post