Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

sai pallavi : ಕಾಶ್ಮೀರಿ ಪಂಡಿತರ ಬಗ್ಗೆ ಹೇಳಿಕೆ ಕೊಟ್ಟ ನಟಿಗೆ ಸಂಕಷ್ಟ : ಸಾಯಿ ಪಲ್ಲವಿ ಮನವಿ ತಿರಸ್ಕರಿಸಿದ ನ್ಯಾಯಾಲಯ

Radhakrishna Anegundi by Radhakrishna Anegundi
July 9, 2022
in ದೇಶ
sai-pallavi-telangana-hc-rejects-actress-sai-pallavi-petition-asks-her-to-appear-before-police
Share on FacebookShare on TwitterWhatsAppTelegram

ಸಾಯಿ ಪಲ್ಲವಿ sai pallavi ಕೊಟ್ಟ ಹೇಳಿಕೆ ಇದೀಗ ಅವರಿಗೆ ಸಂಕಷ್ಟ ತಂದೊಡ್ಡಿದೆ. ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋ ಸಾಗಾಣಿಕೆ ಮಾಡುವವರ ಹತ್ಯೆ ಒಂದೇ ಎಂದು ಹೇಳಿರುವುದೇ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ

ಕೆಲ ವಾರಗಳ ಹಿಂದೆ ಸಂದರ್ಶನವೊಂದರಲ್ಲಿ ಕಾಶ್ಮೀರ ಪಂಡಿತರ ಮತ್ತು ಗೋ ಸಾಗಾಣಿಕೆದಾರರ ಹತ್ಯೆಯನ್ನು ಹೋಲಿಸಿ sai pallavi ಮಾತನಾಡಿದ್ದರು. ಅವರು ಕೊಟ್ಟ ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಪರ ವಿರೋಧ ಅಭಿಪ್ರಾಯಗಳು ಕೂಡಾ ವ್ಯಕ್ತವಾಗಿತ್ತು.

ವಿರಾಟ ಪರ್ವಂ ಸಿನಿಮಾ ಪ್ರಚಾರದ ವೇಳೆ ಸಾಯಿ ಪಲ್ಲವಿ, ಧರ್ಮ ಮತ್ತು ದೇವರ ಹೆಸರಿನಲ್ಲಿ ಜನರ ಮೇಲೆ ಹಲ್ಲೆ ಮಾಡುವುದು ತಪ್ಪು. ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಸಾಗಿಸುತ್ತಿದ್ದ ಮುಸ್ಲಿಂ ಡ್ರೈವರ್ ಮೇಲಿನ ಹಲ್ಲೆ ಎರಡೂ ಕೂಡಾ ಒಂದೇ ಅಂದಿದ್ದರು. ಇದಾದ ಬಳಿಕ ಸ್ಪಷ್ಟನೆ ಕೊಟ್ಟಿದ್ದ ಅವರು ಪ್ರತೀ ಜನ ಮುಖ್ಯ ಅಂದಿದ್ದರು. ಈ ವಿವಾದದಿಂದಲೇ ವಿರಾಟ ಪರ್ವಂ ಸಿನಿಮಾ ಸೋತಿತು ಅನ್ನುವ ಮಾತುಗಳು ಕೇಳಿ ಬಂತು.

ಈ ನಡುವೆ ಸಾಯಿ ಪಲ್ಲವಿ ವಿರುದ್ಧ ಹಲವು ಕಡೆಗಳಲ್ಲಿ ದೂರು ಕೂಡಾ ದಾಖಲಾಗಿದೆ. ಈ ನಡುವೆ ಹೈದರಬಾದ್ ಸುತಲ್ತಾನ್ ಬಝಾರ್ ಇನ್ಸ್ ಪೆಕ್ಟರ್ ಕೊಟ್ಟ ನೋಟಿಸ್ ರದ್ದುಗೊಳಿಸುವಂತೆ ಸಾಯಿ ಪಲ್ಲವಿ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದರು.  ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನೋಟಿಸ್ ರದ್ದುಗೊಳಿಸುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿದೆ.

ಪೊಲೀಸರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ನ್ಯಾಯಾಧೀಶರು,  ಸತ್ಯಾಸತ್ಯತೆ ಅರಿಯುವ ನಿಟ್ಟಿನಲ್ಲಿ ಸಾಯಿ ಪಲ್ಲವಿ ಪೊಲೀಸ್ ವಿಚಾರಣೆ ಎದುರಿಸಬೇಕು ಅಂದಿದೆ. ಹೈದರಬಾದ್ ಭಜರಂಗದಳದ ಸದಸ್ಯ ಅಖಿಲ್ ಅನ್ನುವವರು ಕೊಟ್ಟ ದೂರಿನ ಹಿನ್ನಲೆಯಲ್ಲಿ ಸುಲ್ತಾನ್ ಬಝಾರ್ ಇನ್ಸ್ ಪೆಕ್ಟರ್ ನೋಟಿಸ್ ಜಾರಿ ಮಾಡಿದ್ದರು.

ಅಪ್ಪ ಗಿಫ್ಟ್ ಕೊಟ್ಟ ವಜ್ರದುಂಗರವೇ ಸುಪಾರಿ : ಪ್ರೀತಿಗೆ ಅಡ್ಡ ಬಂದ ತಂದೆಯನ್ನೇ ಮುಗಿಸಿದ ಮಗಳು

ಮಗಳು ಸಂಭ್ರಮಿಸಲಿ ಎಂದು ತಂದೆ ವಜ್ರದ ಉಂಗುರ ಕೊಡಿಸಿದ್ದರು. ಆದರೆ ಮಗಳು ಅದೇ ಉಂಗುರ ಬಳಸಿ ತಂದೆಯ ಉಸಿರು ನಿಲ್ಲಿಸಿದ್ದಾಳೆ  ( Crime news )

ಜಾರ್ಖಂಡ್ :  ಮಗಳೇ ನನ್ನ ಕೊಲೆ ಮಾಡುತ್ತಾಳೆ ಅದ್ಯಾವ ತಂದೆ ಊಹಿಸಲು ಸಾಧ್ಯ. ಸಾಕಿ ಬೆಳೆಸಿದ ತಂದೆಯನ್ನೇ ಕೊಲೆ ಮಾಡುವ ಮಗಳಿದ್ದಾಳೆ ಅಂದ್ರೆ ಅಧರ್ಮ ತಾಂಡವವಾಡುತ್ತಿದೆ ಅನ್ನುವುದಕ್ಕೆ ಬೇರೆ ಉದಾಹರಣೆ ಬೇಕಾ ( Crime news )

ಜೂನ್ 29 ರಂದು ಜಾರ್ಖಂಡ್ ನ ಸೆಕರೈಲ ಕಸ್ವರ್ನ್ ಜಿಲ್ಲೆಯ ಉದ್ಯಮಿ ಕನ್ಹಯ್ಯ ಸಿಂಗ್ ( Kanhaiya Singh) ಅನ್ನುವವರನ್ನು ಅಪರಿಚಿತರು ಗುಂಡು ಹೊಡೆದು ಸಾಯಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಆದರೆ ಕೊಲೆಗಾರರನ್ನು ಹಿಡಿಯೋದು ಸುಲಭವಿರಲಿಲ್ಲ. ಉದ್ಯಮಿ ಕನ್ಹಯ್ಯ ಸಿಂಗ್ ಅವರಿಗೆ ಶತ್ರುಗಳು ಇರಲಿಲ್ಲ, ಜೊತೆಗೆ ಯಾವುದೇ ವ್ಯವಹಾರ ವ್ಯಾಜ್ಯಗಳಿರಲಿಲ್ಲ. ಹೀಗಾಗಿ ಕೊಲೆಯಾಕಾಯ್ತು ಅನ್ನುವ ಸುಳಿವೇ ಇರಲಿಲ್ಲ.

ಇದೇ ಕಾರಣದಿಂದ ಪ್ರಕರಣದ ತನಿಖೆ ಸಲುವಾಗಿ ಹರ್ವಿಂದರ್ ಸಿಂಗ್ ನೇತೃತ್ವದಲ್ಲಿ (  Harvinder Singh ) special investigation team (SIT) ರಚಿಸಲಾಯ್ತು. ಟೆಕ್ನಿಕಲ್ ಸಾಕ್ಷಿಗಳ ಆಧಾರದಲ್ಲಿ ಎಸ್ಐಟಿ ತನಿಖೆ ಪ್ರಾರಂಭಿಸಿದಾಗ ಉದ್ಯಮಿ ಕನ್ಹಯ್ಯ ಸಿಂಗ್ ಮಗಳು ಅಪರ್ಣಾ ಸಿಂಗ್ ( Aparna Singh ) ಮೇಲೆಯೇ ಅನುಮಾನ ಬಂದಿದೆ. ಹೀಗಾಗಿ ಅಪರ್ಣಾ ಸಿಂಗ್ ಮೇಲೆ ತನಿಖೆಯನ್ನು ಕೇಂದ್ರಿಕರಿಸಿದಾಗ ಮರ್ಡರ್ ಮಿಸ್ಟರಿ ಬಿಚ್ಚಿಕೊಳ್ಳತೊಡಗಿತು. ಇದಕ್ಕಾಗಿ ಕನ್ಹಯ್ಯ ಸಿಂಗ್ ಮನೆ ಸುತ್ತಮುತ್ತಲಿನ ಅದೆಷ್ಟು ಸಿಸಿಟಿವಿಗಳನ್ನು ಪೊಲೀಸರು ಜಾಲಾಡಿದ್ದಾರೋ ಗೊತ್ತಿಲ್ಲ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸೆರೈಕೆಲಾ ಖಾರ್ಸಾವನ್ ಜಿಲ್ಲಾ ಎಸ್ಪಿ ಆನಂದ ಪ್ರಕಾಶ್ ( Superintendent of Police, Seraikela-Kharsawan Anand Prakash ) ಅಪರ್ಣಾ ಸಿಂಗ್ ಕಳೆದ 5 ವರ್ಷಗಳಿಂದ ರಾಜ್ ವೀರ್ ಸಿಂಗ್ ಅನ್ನುವವನನ್ನು ಪ್ರೀತಿಸುತ್ತಿದ್ದಳು. ಆದರೆ ಈ ಸಂಬಂಧ ಕನ್ಹಯ್ಯ ಸಿಂಗ್ ಗೆ ಇಷ್ಟವಿರಲಿಲ್ಲ. ಹೀಗಾಗಿ ರಾಜ್ ವೀರ್ ಸಿಂಗ್ ಮನೆ ಬಳಿ ಹೋಗಿದ್ದ ಕನ್ಹಯ್ಯ ಸಿಂಗ್, ಮಗಳ ಹಿಂದೆ ಬೀಳದಂತೆ ಎಚ್ಚರಿಕೆ ನೀಡಿದ್ದ. ಮಾತ್ರವಲ್ಲದೆ ಪಿಸ್ತೂಲ್ ತೋರಿಸಿ ಮನೆಯವರನ್ನೂ ಬೆದರಿಸಿದ್ದ.

ಕನ್ಹಯ್ಯ ಸಿಂಗ್ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ರಾಜ್ ವೀರ್ ಸಿಂಗ್ ಕುಟುಂಬ ತಮ್ಮ ವಾಸ ಸ್ಥಳವನ್ನೂ ಬದಲಾಯಿಸಿದ್ದರು. ತಮ್ಮ ಸ್ವಂತ ಆಸ್ತಿಯನ್ನು ಮಾರಿ ಬಾಡಿಗೆ ಮನೆ ಸೇರಿಕೊಂಡಿದ್ದರು. ಈ ನಡುವೆ ಮಗಳಿಗೆ ಬೇರೆ ಮದುವೆ ಮಾಡಿಸಲು ಕನ್ಹಯ್ಯ ಸಿಂಗ್ ಸಿದ್ದತೆ ಮಾಡಿಕೊಳ್ಳತೊಡಗಿದೆ.

ಹೀಗೆ ಬಿಟ್ಟರೆ ಪ್ರೀತಿ ಕುತ್ತು ಎಂದು ಅರಿತ ಅಪರ್ಣಾ ಸಿಂಗ್ ಮತ್ತು ರಾಜ್ ವೀರ್ ಸಿಂಗ್ ಕನ್ಹಯ್ಯ ಸಿಂಗ್ ನನ್ನೇ ಮುಗಿಸಲು ನಿರ್ಧರಿಸಿದರು. ಈ ಸಲುವಾಗಿ ರಾಜ್ ವೀರ್ ಸಿಂಗ್ ಶೂಟರ್ ನಿಖಿಲ್ ಗುಪ್ತ ಅನ್ನುವವನನ್ನು ಸಂಪರ್ಕಿಸಿದ. 8500 ರೂಪಾಯಿ ಕೊಟ್ಟು ಬಿಹಾರದಿಂದ ಕಂಟ್ರಿ ಮೇಡ್ ಪಿಸ್ತೂಲ್ ಬೇರೆ ತರಿಸಿಕೊಂಡ್ರು.

ಇದನ್ನೂ ಓದಿ : Crime news Aparna Singh : ಅಪ್ಪ ಗಿಫ್ಟ್ ಕೊಟ್ಟ ವಜ್ರದುಂಗರವೇ ಸುಪಾರಿ : ಪ್ರೀತಿಗೆ ಅಡ್ಡ ಬಂದ ತಂದೆಯನ್ನೇ ಮುಗಿಸಿದ ಮಗಳು

Tags: FEATURED
ShareTweetSendShare

Discussion about this post

Related News

afspa-extended-in-manipur-for-6-months-from-october-1-barring-19-police-stations-of-valley

Manipura ಮಣಿಪುರದಲ್ಲಿ ಮತ್ತೆ ಜಾರಿಯಾಗಿರುವ  ಆಫ್ಸ್ಪ ಕಾಯ್ದೆಯ ಬಗ್ಗೆ ನಿಮಗೆಷ್ಟು ಗೊತ್ತು..?

g20-summit-delhi-police-books-photographer-for-flying-drone-during-birthday-party

ಜನ್ಮದಿನ ಚಿತ್ರೀಕರಿಸಿದ ಕ್ಯಾಮಾರಮನ್ ವಿರುದ್ಧ ಕೇಸ್ : 1 ತಿಂಗಳ ಸೆರೆವಾಸ ಸಾಧ್ಯತೆ

ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗ್ಗಿನ ಉಪಹಾರ : ಒಂದೊಳ್ಳೆ ಸ್ಕೀಂ ಜಾರಿಗೆ ತಂದ ಸಿಎಂ ಸ್ಟಾಲಿನ್ ಸರ್ಕಾರ

ಕರ್ತವ್ಯದ ವೇಳೆಯೇ ಕುಸಿದು ಬಿದ್ದು ಮೃತಪಟ್ಟ ಯುವ ವೈದ್ಯಾಧಿಕಾರಿ

Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್

Karnataka Election : ಕರ್ನಾಟಕಕ್ಕೆ ಬರುತ್ತಿದೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ

NDTV ಖರೀದಿಗಾಗಿ ಅದಾನಿ ಮಾಸ್ಟರ್ ಪ್ಲಾನ್ : ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸಿದ ನಡೆ

Youtube :ದೇಶ ವಿರೋಧಿ 8 ಯೂಟ್ಯೂಬ್ 1 ಫೇಸ್ ಬುಕ್ ಅಕೌಂಟ್ ಬಂದ್ : Ministry of I&Bಯಿಂದ ಆದೇಶ

Shrikant Tyagi : ಕಠಿಣ ಕ್ರಮ ಅಂದ್ರೆ ಇದಪ್ಪ : BJP ನಾಯಕನ ಮನೆಗೆ ಬುಲ್ಡೋಜರ್ ನುಗ್ಗಿಸಿದ ಯೋಗಿ

Agneepath naxal : ಅಗ್ನಿಪಥ ಹಿಂಸಾಚಾರದಲ್ಲಿ ನಕ್ಸಲ್ ಕೈವಾಡ

Latest News

afspa-extended-in-manipur-for-6-months-from-october-1-barring-19-police-stations-of-valley

Manipura ಮಣಿಪುರದಲ್ಲಿ ಮತ್ತೆ ಜಾರಿಯಾಗಿರುವ  ಆಫ್ಸ್ಪ ಕಾಯ್ದೆಯ ಬಗ್ಗೆ ನಿಮಗೆಷ್ಟು ಗೊತ್ತು..?

Actor Vijay set to make debut in Tamil Nadu politics

ಅಣ್ಣಾಮಲೈ ಬೆನ್ನಲ್ಲೇ ನಟ ವಿಜಯ್ ತಮಿಳು ಪಾಲಿಟಿಕ್ಸ್ ಗೆ ಎಂಟ್ರಿ : ಸನಾತನ ಧರ್ಮದ ವಿರುದ್ಧ ನಿಂತವರಿಗೆ ಶುರುವಾಗಿದೆ ನಡುಕ

jail

ಕುವೈತ್ ನಲ್ಲಿ ಜೈಲುಪಾಲಾದ ಕೇರಳ ಮೂಲದ 19 ಮಂದಿ ನರ್ಸ್

bantwal city police arrest two thef kannada news

ಕರಾವಳಿಯಲ್ಲಿ ಚಿಗುರಿದ ಕಳ್ಳರ ಗ್ಯಾಂಗ್ ಹೆಡೆಮುರಿ ಕಟ್ಟಿದ ಬಂಟ್ವಾಳ ಪೊಲೀಸರು

Chaitra Kundapura govinda-babu-poojari-ccb-police arrest

ಕಬಾಬ್ ವ್ಯಾಪಾರಿಗೆ ಎಲೆಕ್ಷನ್ ಸಮಿತಿ ಸದಸ್ಯನ ವೇಷ : ಸ್ವಯಂ ಘೋಷಿತ ಹಿಂದೂ ನಾಯಕಿಯ ಖತರ್ನಾಕ್ ಕಹಾನಿ

/ks-eshwarappa-meets-hd-kumaraswamy-bengaluru

ಜೆಡಿಎಸ್ ಬಿಜೆಪಿ ಮೈತ್ರಿ ಪ್ರಸ್ತಾಪ : ಕುಮಾರಸ್ವಾಮಿ ಶಕ್ತಿ ವರ್ಧನೆ ಸುಳಿವು ಬೆನ್ನಲ್ಲೇ ಚುರುಕಾದ ಈಶ್ವರಪ್ಪ

g20-summit-delhi-police-books-photographer-for-flying-drone-during-birthday-party

ಜನ್ಮದಿನ ಚಿತ್ರೀಕರಿಸಿದ ಕ್ಯಾಮಾರಮನ್ ವಿರುದ್ಧ ಕೇಸ್ : 1 ತಿಂಗಳ ಸೆರೆವಾಸ ಸಾಧ್ಯತೆ

https://torrentspree.com/karnataka-weather-forecast-and-rain-alert-for-monday-september-11/

11.09.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

puttur mahalingeshwara temple ex president N Sudhakar Shetty no more

ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ‌ಸಮಿತಿ ಮಾಜಿ ಅಧ್ಯಕ್ಷ ಎನ್ ಸುಧಾಕರ ಶೆಟ್ಟಿ ಇನ್ನಿಲ್ಲ

brindavana-kannada-serial-ramji-colours-kannada

ರಾಮ್ ಜೀ ನಿರ್ದೇಶನದಲ್ಲಿ ಮತ್ತೊಂದು ಸೀರಿಯಲ್ : ಬಿಗ್ ಬಾಸ್ ನಂತ್ರ ಬೃಂದಾವನ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್