ನಿರ್ದೇಶಕ
ಎಸ್. ನಾರಾಯಣ್ ಅವರ `ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ
ಪರ್ದಾಪಣೆ ಮಾಡಿದ ಶ್ವೇತಾ ಚೆಂಗಪ್ಪ, ‘ಯಾರಿಗುಂಟು ಯಾರಿಗಿಲ್ಲ’ ಎಂಬ
ಕಾರ್ಯಕ್ರಮದ ನಿರೂಪಣೆ ಮೂಲಕ ಕನ್ನಡ ಜನತೆಗೆ ಮತ್ತಷ್ಟು ಹತ್ತಿರವಾಗಿದ್ದರು.
ಮಜಾ ಟಾಕೀಸ್ನಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ, ರಾಣಿ ಎಂದೇ ಪ್ರಸಿದ್ಧರಾಗಿದ್ದರು. ಇದೀಗ ಶ್ವೇತಾ ಚೆಂಗಪ್ಪ ತುಂಬು ಗರ್ಭಿಣಿಯಾಗಿದ್ದು, ಹೊಸ ಜೀವವೊಂದರ ನಿರೀಕ್ಷೆಯಲ್ಲಿದ್ದಾರೆ.
ಈ ಹಿನ್ನಲೆಯಲ್ಲಿ ಪತಿ ಕಿರಣ್ ಅಪ್ಪಚ್ಚು ಜೊತೆಗೆ ಫೋಟೋ ಶೂಟ್ ಮುಗಿಸಿಕೊಂಡಿರುವ ಅವರು, ಈ ಪೋಟೋಗಳನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, “ಒಂದು ಅರ್ಥಪೂರ್ಣ ಮಾತಿದೆ. ಕೊಡವರ ಹೆಣ್ಣು ಹೆತ್ತರೆ ಸ್ವರ್ಗ. ಹೀಗಾಗಿ ವೀರನಾಡು ಕೊಡಗಿನ ಹೆಣ್ಣಾಗಿ, ಆ ಒಂದು ಸುದಿನಕ್ಕೆ ಕಾಯುತ್ತಿರುವೆ” ಎಂದು ಬರೆಯುವ ಮೂಲಕ ತಮ್ಮ ಮನೆದಾಸೆಯನ್ನು ಹೇಳಿಕೊಂಡಿದ್ದಾರೆ.
Discussion about this post