ಬೆಳಗಾವಿ : ಬಿಗ್ ಬಾಸ್ ಮನೆಗೆ ಹೋದ ಬಳಿಕ ಸದಾ ಒಂದಲ್ಲ ಒಂದು ವಿವಾದದ ಮೂಲಕವೇ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದ ಚೈತ್ರಾ ಕೊಟ್ಟೂರು Chaithra Kotoor ಇದೀಗ ಮತ್ತೊಮ್ಮ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಸನ್ಯಾಸಿಯಾಗುವ ಮೂಲಕ ಸುದ್ದಿಯಾಗುತ್ತಿದ್ದಾರೆ.
ಚಂದನವನದಲ್ಲಿ ಒಳ್ಳೆಯ ಹೆಸರು ಗಳಿಸಿದ್ದ ಚೈತ್ರಾ ಕೊಟ್ಟೂರು ಸಾಹಿತ್ಯ, ಬರವಣಿಗೆ ಎಂದು ತೊಡಗಿಸಿಕೊಂಡಿದ್ದರು. ಯಾವಾಗ ಸೂಜಿದಾರ ಚಿತ್ರ ಹರಿಪ್ರಿಯಾ ಕಾರಣಕ್ಕೆ ವಿವಾದಕ್ಕೆ ಗುರಿಯಾಯ್ತೋ ಆಗ ಸುದ್ದಿಗೆ ಬಂದವರು ಚೈತ್ರಾ ಕೊಟ್ಟೂರು. ಇದಾದ ಬಳಿಕ ಬಿಗ್ ಬಾಸ್ ಮನೆಗೆ ಬಂದವರು ನಿತ್ಯ ಹೆಡ್ ಲೈನ್ ಆದ್ರು.
![kottur bf b day1](https://torrentspree.com/wp-content/uploads/2021/03/kottur-bf-b-day1.jpg)
ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಲಗ್ನ ಪತ್ರಿಕೆ ಅನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಜೊತೆಗೆ ಒಂದಿಷ್ಟು ಪ್ರಾಜೆಕ್ಟ್ ಗಳಿದೆ ಎಂದು ಓಡಾಡುತ್ತಿದ್ದರು. ಆಗ ಮತ್ತೆ ಸುದ್ದಿಯಾಗಿದ್ದು ಮದುವೆಯ ಮೂಲಕ. ಸರಳವಾಗಿ ನಡೆದ ವಿವಾದಕ್ಕೆ ಗುರಿಯಾಯ್ತು. ಅದೊಂದು ಬಲವಂತದ ಮದುವೆ ಎಂದು ಗೊತ್ತಾಯ್ತು. ಹೀಗಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿತು. ಇದಾದ ಬಳಿಕ ಮಾನಸಿಕ ನೊಂದಿದ್ದರು ಚ್ರೈತ್ರಾ ಕೊಟ್ಟೂರು.
ಇನ್ನೇನು ಕೊಟ್ಟೂರು ಹೆಸರನ್ನು ಜನ ಮರೆತರು ಅನ್ನುವಷ್ಟು ಹೊತ್ತಿಗೆ ಸನ್ಯಾಸಿಯಾಗಿರುವ ಬ್ರೇಕಿಂಗ್ ಸುದ್ದಿ ಕೊಟ್ಟಿದ್ದಾರೆ.
![chaithra kottur1 1](https://torrentspree.com/wp-content/uploads/2021/03/chaithra-kottur1-1.jpg)
ಧ್ಯಾನ ಮತ್ತು ಆಧ್ಯಾತ್ಮದ ಕಡೆ ವಾಲಿರುವ ಚೈತ್ರಾ ಕೋಟೂರು ಓಶೋ ಧ್ಯಾನ ಮಂದಿರ ಸೇರಿದ್ದಾರೆ. ಬೆಳಗಾವಿಯ ಓಶೋ ಧ್ಯಾನ ಶಿಬಿರದಲ್ಲಿ ಚೈತ್ರಾ ಪಾಲ್ಗೊಂಡಿದ್ದು ತಮ್ಮ ಹೆಸರನ್ನು ‘ಮಾ ಪ್ರಗ್ಯಾ ಭಾರತಿ’ ಎಂದು ಬದಲಾಯಿಸಿಕೊಂಡಿದ್ದಾರೆ.
Discussion about this post