ಒಂದು ಕಾಲದಲ್ಲಿ ನಿಖಿಲ್ ಮತ್ತು ಅಂಬಿ ಪುತ್ರ ಅಭಿಷೇಕ್ ಆತ್ಮೀಯ ಸ್ನೇಹಿತರಾಗಿದ್ದರು. ಅಮರ್ ಸಿನಿಮಾ ಸೆಟ್ ಗೆ ಭೇಟಿ ನೀಡಿದ ನಿಖಿಲ್ ಆತ್ಮೀಯ ಗೆಳೆಯನಿಗೆ ಶುಭ ಹಾರೈಸಿದ್ದರು.
ಅಷ್ಟು ಹೊತ್ತಿಗೆ ಚುನಾವಣೆ ಘೋಷಣೆಯಾಯ್ತು, ನಿಖಿಲ್ ಮತ್ತು ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಎದುರಾಳಿಗಳಾದ್ರು. ಚುನಾವಣಾ ಸಂದರ್ಭದ ಭಾಷಣದ ಆರ್ಭಟ ಆತ್ಮೀಯ ಗೆಳೆಯರಿಬ್ಬರನ್ನು ದೂರ ಮಾಡಿತು. ಆತ್ಮೀಯತೆ ನಡುವೆ ಚುನಾವಣೆ ಅನ್ನುವುದು ತಡೆಗೋಡೆಯಾಗಿ ನಿಂತಿತು.
ಇಬ್ಬರೂ ಪರೋಕ್ಷವಾಗಿ ಪರಸ್ಪರ ಟೀಕೆಗಳನ್ನು ಕೂಡಾ ಮಾಡಿದ್ರು. ಇದೀಗ ಫಲಿತಾಂಶ ಪ್ರಕಟವಾಗಿದ್ದು, ನಿಖಿಲ್ ರನ್ನು ಮಂಡ್ಯದ ಜನ ತಿರಸ್ಕರಿಸಿದ್ದು, ಸುಮಲತಾ ಅವರನ್ನು ಸ್ವಾಭಿಮಾನದ ಪ್ರತೀಕ ಎಂದು ಗೆಲ್ಲಿಸಿದ್ದಾರೆ.
ಮಂಡ್ಯಕ್ಕೆ ಸುಮ್ಮನೆ ಟೀ, ಕಾಫಿ ಕುಡಿಯಲು ಬರೋದಿಲ್ಲ : ಅಂಬಿ ಪುತ್ರನಿಗೆ ನಿಖಿಲ್ ಟಾಂಗ್
ಇದಾದ ಬೆನ್ನಲ್ಲೇ ನಿಖಿಲ್ ಕುರಿತಂತೆ ಪತ್ರಕರ್ತರು ಅಭಿಷೇಕ್ ಅವರನ್ನು ಪ್ರಶ್ನಿಸಿದ್ದ ಸಂದರ್ಭದಲ್ಲಿ ಜಾರಿಕೆಯ ಹಾರಿಕೆಯ ಉತ್ತರ ಕೊಟ್ಟಿದ್ದರು.
ಹಾಗೇ ನೋಡಿದ್ರೆ ನಿಖಿಲ್ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಹಳೆಯ ಕಹಿ ನೋವು ಮರೆಯೋಣ ಅನ್ನುವ ಸಂದೇಶವನ್ನು ಅಭಿಷೇಕ್ ಅವರಿಗೆ ರವಾನಿಸಿದ್ದಾರೆ.
ಸುಮಲತಾ ಗೆಲುವಿನ ಕುರಿತಂತೆ ಲೇಟ್ ಆಗಿ ಲೆಟೆಸ್ಟ್ ಆಗಿ ಟ್ವೀಟ್ ಮಾಡಿರುವ ನಿಖಿಲ್ ಅಂಬರೀಶ್ ಹುಟ್ಟುಹಬ್ಬ ಹಾಗೂ ‘ಅಮರ್’ ಸಿನಿಮಾದ ಬಿಡುಗಡೆಯ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿರುವ ನಿಖಿಲ್ ಅದರ ಜೊತೆಗೆ ಮಂಡ್ಯ ಚುನಾವಣಾ ಫಲಿತಾಂಶದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಸಹೋದರ ಅಭಿ ಸಿನಿಮಾ ಯಶಸ್ಸು ಕಾಣಲಿ ”ನಾಳೆ ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಮೊದಲ ಸಿನಿಮಾ ‘ಅಮರ್’ ಭಾರಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸುತ್ತಿದ್ದೇನೆ. ದಯವಿಟ್ಟು ಚಿತ್ರಮಂದಿರಗಳಿಗೆ ಹೋಗಿ ಆ ಸಿನಿಮಾವನ್ನು ನೋಡಿ. ಅಭಿ ಚೆನ್ನಾಗಿ ನಟಿಸುರುತ್ತಾನೆ ಎನ್ನುವ ಭರವಸೆ ಇದೆ.” ಎಂದು ತಮ್ಮ ಮಾತು ಶುರು ಮಾಡಿರುವ ನಿಖಿಲ್ ಮುಂದೆ ಚುನಾವಣೆ ಬಗ್ಗೆ ಬರೆದುಕೊಂಡಿದ್ದಾರೆ.
Discussion about this post