Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

whatsapp message : ವಾಟ್ಸಾಪ್ ಮೆಸೇಜ್ ಮಾಡುವುದನ್ನು ನಿಲ್ಲಿಸಿದ ವಿವಾಹಿತ ಮಹಿಳೆಯ ಹತ್ಯೆಗೆ ಯತ್ನ

Radhakrishna Anegundi by Radhakrishna Anegundi
July 17, 2022
in ದಕ್ಷಿಣ ಕನ್ನಡ
whatsapp message man-attacked-women-at-bantwala rural police limit
Share on FacebookShare on TwitterWhatsAppTelegram

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಮೆಸೇಜ್ ( whatsapp message ) ಚಟ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ

ಬಂಟ್ವಾಳ : ಈ ಮೊಬೈಲ್ ಅನ್ನುವುದು ಈಗ ಸಂವಹನ ಸಾಧನವಾಗಿ ಉಳಿದಿಲ್ಲ. ಅದೊಂದು ಚಟವಾಗಿ ಪರಿಣಮಿಸಿದೆ. ಅದರಲ್ಲೂ ಗೇಮ್ಸ್, ವಿಡಿಯೋ ಕಥೆಗಳನ್ನು ಕೇಳುವುದೇ ಬೇಡ. ಆದರೆ ಬಂಟ್ವಾಳದ ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿರುವುದು ಸ್ವಲ್ಪ ಡಿಫರೆಂಟ್ ಸ್ಟೋರಿ. ಸಂಬಂಧಿಕ ಮಹಿಳೆಯೊಬ್ಬಳು ಮೆಸೇಜ್ ( whatsapp message ) ಮಾಡುವುದನ್ನು ನಿಲ್ಲಿಸಿದಳು ಅನ್ನುವ ಕಾರಣಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಕೊಲೆ ಮಾಡಲು ಮುಂದಾಗಿದ್ದಾನೆ. ಅಂದ್ರೆ ಮೆಸೇಜ್ ಚಟ ಎಷ್ಟರಮಟ್ಟಿಗೆ ಹತ್ತಿರಬೇಕು.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೆಸೇಜ್ ಮಾಡಿಲ್ಲ ಅನ್ನುವ ಕಾರಣಕ್ಕೆ ಆಕೆಯ ಮನೆಗೆ ನುಗ್ಗಿ ಮಹಿಳೆಯನ್ನು ಕೊಲ್ಲುವ ಯತ್ನ ನಡೆದಿದೆ.

ಇದನ್ನೂ ಓದಿ : ಸಿದ್ದರಾಮಯ್ಯ ಕಾರಿಗೆ ಹಣ ಎಸೆದ ಪ್ರಕರಣದಲ್ಲಿ SDPI ಕೈವಾಡ : ವಿಜಯಾನಂದ ಕಾಶಪ್ಪನವರ ಗಂಭೀರ ಆರೋಪ

ಪಿಲಮೊಗರು ನಿವಾಸಿ ಲತಾ ಹಾಗೂ ಪಲ್ಲಿಪಾಡಿ ನಿವಾಸಿ ರಮೇಶ್ ಸಂಬಂಧಿಗಳಾಗಿದ್ದು, ಇದೇ ಕಾರಣದಿಂದ ವಾಟ್ಸಾಪ್ ನಲ್ಲಿ ಪರಸ್ಪರ ಸಂದೇಶ ವಿನಿಮಯಗಳಾಗುತ್ತಿತ್ತು. ಲತಾ ಅವರಿಗೆ ಉಮೇಶ್ ಅನ್ನುವವರೊಂದಿಗೆ ಮದುವೆಯಾಗಿದ್ದು, ಸಂಸಾರ ಕೂಡಾ ಚೆನ್ನಾಗಿಯೇ ಸಾಗಿತ್ತು. ಈ ನಡುವೆ ರಮೇಶ್ ಕೆಲವೊಮ್ಮೆ ಉಮೇಶ್ ಮನೆಗೆ ಬಂದು ಹೋಗುತ್ತಿದ್ದ ಕೂಡಾ. ಆದರೆ ಆತನೇ ಸಂಸಾರಕ್ಕೆ ಕೊಳ್ಳಿ ಇಡ್ತಾನೆ ಅಂದುಕೊಂಡಿರಲಿಲ್ಲ.

ಇನ್ನು ಲತಾ ಮತ್ತು ರಮೇಶನ ಮೆಸೇಜ್ ವಿಚಾರದಲ್ಲಿ ಗಂಡ ಉಮೇಶ್ ಅಸಮಾಧಾನ ಹೊಂದಿದ್ದರು. ಹೀಗಾಗಿ ಹೆಂಡತಿಗೆ ಸಹಜವಾಗಿಯೇ ಬುದ್ದಿ ಮಾತು ಹೇಳಿದ್ದರು. ಗಂಡನ ಮಾತಿಗೆ ಗೌರವ ಕೊಟ್ಟು ಅವರು ಮೆಸೇಜ್ ಮಾಡುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಕೋಪಗೊಂಡ ರಮೇಶ ಲತಾ ಅವರ ಮನೆಗೆ ಬಂದು ತರಾಟೆಗೆ ತೆಗೆದುಕೊಂಡಿದ್ದಾನೆ. ಮನೆಯವರಿಗೆ ಇವೆಲ್ಲಾ ಇಷ್ಟ ಆಗೋದಿಲ್ಲ ಹೀಗಾಗಿ ನಾನು ಮೆಸೇಜ್ ಮಾಡೋದಿಲ್ಲ ಅಂದ್ರೆ ಕುಪಿತನಾದ ರಮೇಶ ಮನೆಯ ಒಳಗೆ ನುಗ್ಗಿ ಕತ್ತಿ  ತೆಗೆದು ಲತಾ ಅವರಿಗೆ ಬೀಸಿದ್ದಾನೆ.

ಈ ವೇಳೆ ಲತಾ ಅವರ ಕೂಗು ಕೇಳಿದ ನೆರೆ ಹೊರೆಯವರು ಧಾವಿಸಿದ್ದು ಅಪಾಯದಿಂದ ಪಾರು ಮಾಡಿದ್ದಾರೆ ಈ ವೇಳೆ ಈ ಆರೋಪಿ ಓಡಿ ಹೋಗಿದ್ದು, ರಮೇಶನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಸಾವು ನ್ಯಾಯವೇ : ಪ್ರತ್ಯೇಕ ಘಟನೆಯಲ್ಲಿ ಎರಡು ಮಕ್ಕಳ ದಾರುಣ ಸಾವು

ಒಂದು ಮಗು ಕಾರಿನಡಿಗೆ ಬಿದ್ರೆ ಮತ್ತೊಂದು ಮಗುವನ್ನು ವಿದ್ಯುತ್ ಬಲಿ ಪಡೆದಿದೆ. ಹೀಗಾಗಿ ಮಕ್ಕಳ ಬಗ್ಗೆ ಎಚ್ಚರವಾಗಿರಿ, ಮಕ್ಕಳ ಮೇಲೆ ಹದ್ದಿನಕಣ್ಣಿಡಿ ಅನ್ನೋದು

ಬೆಂಗಳೂರು : ಆಟವಾಡುತ್ತಿದ್ದ ಮಗುವಿಗೆ ಕಾರು ಡಿಕ್ಕಿ ಹೊಡೆದು ನಾಲ್ಕೂವರೆ ವರ್ಷದ ಮಗು ಮೃತಪಟ್ಟ ಘಟನೆ ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾದರಮಂಗಲದ ಮಹಾ ಶ್ರೀನಿವಾಸ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ.

ಅಪಾರ್ಟ್ ಮೆಂಟ್ ನಿವಾಸಿ ದೀಪು ಜೋಶ್ ಅನ್ನುವವರು ತಮ್ಮ ಕಾರನ್ನು ಅಪಾರ್ಟ್ ಮೆಂಟ್ ನಿಂದ ಹೊರ ತಂದಿದ್ದಾರೆ. ಈ ವೇಳೆ ಅಪಾರ್ಟ್ ಮೆಂಟ್ ನ ಸೆಕ್ಯೂರಿಟಿ ಗಾರ್ಡ್ ನ ಪುತ್ರ ಕೃಷ್ಣ ಕಟಾಯತ್ ಏಕಾಏಕಿ ಕಾರಿನ ಮುಂದೆ ಬಂದಿದ್ದಾರೆ. ಈ ವೇಳೆ ಕಾರು ಮಗುವಿಗೆ ಗುದ್ದಿದೆ.

ವಿದ್ಯುತ್ ಕಂಬ ಮುಟ್ಟಿದ ಮಗು ಸಾವು

ಮತ್ತೊಂದು ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ರಸ್ತೆ ಬದಿಯ ವಿದ್ಯುತ್ ಕಂಬವನ್ನು ಮುಟ್ಟಿದ ಮಗು ದಾರುಣವಾಗಿ ಉಸಿರು ಚೆಲ್ಲಿದೆ. ಮೃತ ಬಾಲಕನನ್ನು ಕೇರಳ ಮೂಲದ ರುಕ್ಕಾನ್ ಸೈಯದ್ ಎಂದು ಗುರುತಿಸಲಾಗಿದೆ.

ರಸ್ತೆ ಬದಿಯ ವಿದ್ಯುತ್ ಕಂಬವನ್ನು ಬಾಲಕ ಆಕಸ್ಮಿಕವಾಗಿ ಮುಟ್ಟಿದ್ದಾನೆ. ಆಗ ವಿದ್ಯುತ್ ಪ್ರವಹಿಸಿ ಬಾಲಕ ಮೃತ ಪಟ್ಟಿದ್ದಾನೆ. ಶರೀಫ್ ನಗರದಲ್ಲಿರುವ ತನ್ನ ಸಂಬಂಧಿಕರ ಮನೆ ಬಳಿ ಆಟವಾಡುತ್ತಿದ್ದ ಬಾಲಕ ರಸ್ತೆಯ ಬದಿಯ ವಿದ್ಯುತ್ ಕಂಬವನ್ನು ಮುಟ್ಟಿದ್ದಾನೆ. ಶನಿವಾರ ಸಂಜೆ 4 ಗಂಟೆಯ ಹೊತ್ತಿಗೆ ಈ ದುರ್ಘಟನೆ ಸಂಭವಿಸಿದೆ.

Tags: MAIN
ShareTweetSendShare

Discussion about this post

Related News

Praveen nettar NIA karnataka state 7 police officer ood

Praveen nettar NIA  : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : NIA ತಂಡ ಸೇರಿದ ಕರ್ನಾಟಕದ 7 ಪೊಲೀಸರು

kuddupadav-petrol-bunk-theft-case-vittal-police-station

Puttur : ಪುತ್ತೂರಿನಲ್ಲಿ ಕರಿಮಣಿ ಎಳೆದ ಫೈಜಲ್ ಗ್ಯಾಂಗ್ ನ ಮತ್ತೊಂದು ಕೃತ್ಯ ಬೆಳಕಿಗೆ

Udupi : ಬಾಲಕಿ ಮೇಲೆ ದಾಳಿ ಮಾಡಿದ ಬೀದಿನಾಯಿ ಗ್ಯಾಂಗ್ : ಉಡುಪಿ ರಜತ ಸಂಭ್ರಮದ ಸಾಧನೆ

Kalladka : ಕರಾವಳಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯ :  ಕಲ್ಲಡ್ಕದಲ್ಲಿ ರಸ್ತೆ ಕಾಮಗಾರಿಗೆ ವ್ಯಕ್ತಿಯ ಬೆನ್ನು ಮೂಳೆ ಮುರಿತ

Kateel Yakshagana : ಕಟೀಲು ಮೇಳದಿಂದ ಇನ್ನು ಮುಂದೆ ಕಾಲಮಿತಿ ಯಕ್ಷಗಾನ

Praveen nettar ಕೊಲೆ ರಹಸ್ಯ : ಸಭ್ಯಸ್ಥರೆನಿಸಿಕೊಂಡವರೇ ಊರಿನ ನೆಮ್ಮದಿಗೆ ಕೊಳ್ಳಿ ಇಟ್ರಲ್ಲ

Praveen Nettar ಹತ್ಯೆಗೈದ ಆರೋಪಿಗಳ ಬಂಧನ : 10ಕ್ಕೆ ಏರಿದ ಬಂಧಿತರ ಸಂಖ್ಯೆ

praveen nettar case : ಕೊಲೆಗಾರರ ಆಸ್ತಿ ಮುಟ್ಟುಗೋಲಿಗೆ ಕ್ರಮ : ಅಲೋಕ್ ಕುಮಾರ್

UT Khader: ಲಾರಿ, ಬಸ್ಸಾಯ್ತು… ಕಾರಿಳಿದು ಆಟೋ ಹತ್ತಿದ ಶಾಸಕ ಯುಟಿ ಖಾದರ್

Mangaluru : ಭಾರತ ಮಾತಾ ಪೂಜಾನಾ ಕಾರ್ಯಕ್ರಮಕ್ಕೆ CFI ವಿರೋಧ

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್