Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

BJP Ticket : ಕರಾವಳಿಯ 5 ಹಾಲಿ ಶಾಸಕರಿಗೆ ಕೈ ತಪ್ಪಿದ ಟಿಕೆಟ್ : ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಿದವರು ಸೈಡ್ ಲೈನ್

Radhakrishna Anegundi by Radhakrishna Anegundi
April 12, 2023
in ದಕ್ಷಿಣ ಕನ್ನಡ
bjp-ticket-bhagirathi-murulya-asha-thimmappa-new-face-bjp-candidate

bjp-ticket-bhagirathi-murulya-asha-thimmappa-new-face-bjp-candidate

Share on FacebookShare on TwitterWhatsAppTelegram

ನಿರೀಕ್ಷೆಯಂತೆ ಬಿಜೆಪಿ ( BJP Ticket) ಹಳೆಯ ಮುಖಗಳನ್ನು ಸೈಡಿಗಿಟ್ಟಿದೆ. ಅದರಲ್ಲೂ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾದವರಿಗೆ ಟಿಕೆಟ್ ತಪ್ಪಿದೆ.

ಬೆಂಗಳೂರು : ಕರ್ನಾಟಕ ವಿಧಾನಸಭೆಯ ಚುನಾವಣೆಗಾಗಿ ( karnataka assembly election 2023) ಬಿಜೆಪಿ ಇಂದು ನಾಳೆ ಅಭ್ಯರ್ಥಿಗಳ ಹೆಸರು ಪ್ರಕಟಿಸುತ್ತಿದ್ದಂತೆ ಎಂದು ನಿರೀಕ್ಷಿಸಲಾಗುತ್ತಿತ್ತು. ಅದರಂತೆ ಬಿಜೆಪಿ ( BJP Ticket)  ಮಂಗಳವಾರ ರಾತ್ರಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಈ ಬಾರಿ ಹಾಲಿ ಶಾಸಕರ ಪೈಕಿ ಅನೇಕರಿಗೆ ಟಿಕೆಟ್ ತಪ್ಪಲಿದೆ ( karnataka assembly election 2023) ಅನ್ನುವ ಸುಳಿವು ಸಿಕ್ಕಿತ್ತು, ಹೀಗಾಗಿ ಯಾರು ಈ ಬಾರಿ ಟಿಕೆಟ್ ಕಳೆದುಕೊಳ್ತಾರೆ ಅನ್ನುವುದು ಅನೇಕರ ಕುತೂಹಲವಾಗಿತ್ತು. ಹೀಗಾಗಿಯೇ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಟ್ರೆಂಡ್ ಲಿಸ್ಟ್ ನಲ್ಲಿತ್ತು. ಜೊತೆಗೆ ಬಿಜೆಪಿ ಈ ಬಾರಿ ಕರ್ನಾಟಕದಲ್ಲಿ ಗುಜರಾತ್ ಮಾಡೆಲ್ ಅನ್ನು ಪ್ರಯೋಗಿಸಲಿದೆ. ಯುವಕರು ಮತ್ತು ವಿದ್ಯಾವಂತರಿಗೆ ಮಣೆ ಹಾಕಲಿದೆ ಅನ್ನುವ ಮಾತುಗಳು ಕೇಳಿ ಬಂದಿತ್ತು. ನಿರೀಕ್ಷೆಯಂತೆ ಸರ್ ಪ್ರೈಸ್ ಕೊಟ್ಟಿರುವ ಬಿಜೆಪಿ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಮಾತ್ರವಲ್ಲದೆ ಅನೇಕ ವೈದ್ಯರಿಗೆ ಟಿಕೆಟ್ ನೀಡಿದೆ.  ಆ ಪೈಕಿ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದ ಡಾ. ಕ್ರಾಂತಿ ಕಿರಣ್ ಅವರಿಗೆ ಹುಬ್ಬಳ್ಳಿ-ಧಾರವಾಡ(E) ಕ್ಷೇತ್ರದ ಟಿಕೆಟ್ ನೀಡಲಾಗಿದೆ.

ಇನ್ನು ಗುಜರಾತ್ ಮಾಡೆಲ್ ಅನ್ನುವಂತೆ 9 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದ್ದು ಆ ಪೈಕಿ ಐದು ಮಂದಿ ಕರಾವಳಿಯ ಹಾಲಿ ಶಾಸಕರಾಗಿದ್ದಾರೆ. ಮಾಹಿತಿಗಳ ಪ್ರಕಾರ 6 ಮಂದಿಗೆ ಟಿಕೆಟ್ ಮಿಸ್ ಆಗೋ ಸಾಧ್ಯತೆಗಳಿದ್ದು , ಬೈಂದೂರು ಟಿಕೆಟ್ ಇನ್ನಷ್ಟೇ ಘೋಷಣೆಯಾಗಬೇಕಾಗಿದೆ. ( BJP Ticket)

Read More : BJP Ticket : ಮಕ್ಕಳಿಗೆ ಟಿಕೆಟ್ ಕೇಳಿದ ಇಬ್ಬರಿಗೆ ಸಿಹಿ ಕೊಟ್ಟ ಬಿಜೆಪಿ ಹೈಕಮಾಂಡ್

ಕುಂದಾಪುರ ಕ್ಷೇತ್ರದಲ್ಲಿ ಈಗಾಗಲೇ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ನಿವೃತ್ತಿ ಘೋಷಿಸಿದ್ದರು, ಆ ಹಿನ್ನಲೆಯಲ್ಲಿ ನಿರೀಕ್ಷೆಯಂತೆ ಕಿರಣ್ ಕೊಡ್ಗಿಯವರಿಗೆ ಟಿಕೆಟ್ ನೀಡಲಾಗಿದೆ. ಕಿರಣ್ ಕೊಡ್ಗಿಯವರ ತಂದೆ ಎಜಿ ಕೊಡ್ಗಿಯವರೇ ಹಾಲಾಡಿಯವರನ್ನು ರಾಜಕೀಯಕ್ಕೆ ಕರೆ ತಂದಿದ್ದರು.

ಇನ್ನು ಉಡುಪಿ ಕ್ಷೇತ್ರದ ಹಾಲಿ ಶಾಸಕ ರಘಪತಿ ಭಟ್ ಅವರು ಕ್ಷೇತ್ರ ತ್ಯಾಗ ಮಾಡಿದ್ದು, ಅಲ್ಲಿ ಸಂಘಕ್ಕೆ ಹತ್ತಿರವಾದ ಮತ್ತು ಇತ್ತೀಚಿನ ಕೆಲ ಹೋರಾಟಗಳಲ್ಲಿ ಸದ್ದು ಮಾಡಿದ್ದ ಯಶಪಾಲ ಸುವರ್ಣ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇವರು ಮೊಗವೀರ ಸಮುದಾಯದವರಾಗಿರುವ ಕಾರಣ ಗೆಲುವಿನ ನಿರೀಕ್ಷೆ ಬಿಜೆಪಿಯದ್ದು. ರಘುಪತಿ ಭಟ್ ಅವರ ಮೇಲೆ ಕೆಲ ವೈಯುಕ್ತಿಕ ಆರೋಪಗಳು ಮತ್ತು ಕಾರ್ಯಕರ್ತರ ಕೆಲಸಗಳಾಗುತ್ತಿಲ್ಲ, ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ ಅನ್ನುವ ಆರೋಪಗಳಿತ್ತು.

ಇನ್ನು ಸುಳ್ಯ, ಇಲ್ಲಿನ ಹಾಲಿ ಶಾಸಕ ಎಸ್ ಅಂಗಾರ ಅವರನ್ನು ಬದಲಾಯಿಸಬೇಕು ಅನ್ನುವುದು 5 ವರ್ಷಗಳ ಹಿಂದಿನ ಒತ್ತಾಯ. ಕಳೆದ ಬಾರಿಯ ಚುನಾವಣೆಯಲ್ಲೇ ಅಂಗಾರ ಅವರ ಬಗ್ಗೆ ಅಸಮಾಧಾನದ ಮಾತು ಕೇಳಿ ಬಂದಿತ್ತು.  ಈ ಬಾರಿ ಈ ಆಕ್ರೋಶ ಜೋರಾಗಿತ್ತು. ಸುಳ್ಯದಲ್ಲಿ ಸುದೀರ್ಘ ಅವಧಿಗೆ ಶಾಸಕರಾಗಿದ್ದರೂ ಅಭಿವೃದ್ಧಿಯಾಗಿಲ್ಲ ಅನ್ನುವುದು ಪ್ರಮುಖ ಆರೋಪ. ಜೊತೆಗೆ ಸ್ವಯಂ ನಿರ್ಧಾರ ಕೈಗೊಳ್ಳುವಲ್ಲಿಯೂ ಅಂಗಾರ ಅವರು ಸಾಕಷ್ಟು ವಿಳಂಭ ಧೋರಣೆ ತಳೆಯುತ್ತಿದ್ದರಂತೆ. ಅಂಗಾರ ಅವರ ಗಾಢ್ ಫಾದರ್ ಗಳ ಮಾತೇ ಅಂತಿಮವಾಗಿತ್ತು, ಹೀಗಾಗಿ ಕ್ಷೇತ್ರದಲ್ಲಿ ಅಸಮಾಧಾನವಿತ್ತು. ಕೆಲ ತಿಂಗಳ ಹಿಂದಷ್ಟೇ ಕಾರ್ಯಕರ್ತರ ಮೇಲೆ ಅಂಗಾರ ಅವರು ಎಗರಾಡಿದ್ದರೂ ಕೂಡಾ. ಸುಳ್ಯದಲ್ಲಿ ಈ ಬಾರಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ ಟಿಕೆಟ್ ಗಿಟ್ಟಿಸಿದ್ದಾರೆ.

 Bhagirathi Murulya

ಪುತ್ತೂರು ಕ್ಷೇತ್ರದಲ್ಲಿ ಸಂಜೀವ ಮಠಂದೂರು ಮೊದಲ ಬಾರಿಗೆ ಶಾಸಕರಾದವರು. ಎರಡನೇ ಬಾರಿಗೆ ಟಿಕೆಟ್ ನಿರೀಕ್ಷೆ ಇತ್ತು. ಆದರೆ ಕಾರ್ಯಕರ್ತರನ್ನು ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲ, ಕಾರ್ಯಕರ್ತರ ಕೆಲಸಗಳಾಗುತ್ತಿಲ್ಲ, ತಮ್ಮದೇ ಆದ ಗುಂಪು ಕಟ್ಟಿಕೊಂಡು ಓಡಾಡುತ್ತಾರೆ, ಬಿಜೆಪಿಯ ಮತ ಬ್ಯಾಂಕ್ ಎಂದು ಕರೆಸಿಕೊಂಡ ವಾರ್ಡ್ ಗಳಲ್ಲಿ ಕೆಲಸಗಳಾಗಿಲ್ಲ ಅನ್ನುವುದು ಅವರ ಮೇಲಿದ್ದ ಗುರುತರ ಆರೋಪ. ಜೊತೆಗೆ ಹಿಂದೂತ್ವಕ್ಕಾಗಿ ಹೊಡೆದಾಡುವ ಕಾರ್ಯಕರ್ತರಿಗೆ ಮಠಂದೂರು ಸ್ಪಂದನೆ ಇರಲಿಲ್ಲ ಅನ್ನುವುದು ಕಾರ್ಯಕರ್ತರ ಆಕ್ರೋಶವಾಗಿತ್ತು. ಮಠಂದೂರು ಅವರದ್ದು ಎನ್ನಲಾದ ಕೆಲ ಖಾಸಗಿ ಪೋಟೋ ವೈರಲ್ ಆಗಿತ್ತು, ಕಾರ್ಯಕರ್ತರನ್ನು ಅಣಬೆಗೆ ಹೋಲಿಸಿದ್ದಾರೆ ಅನ್ನುವ ಸುದ್ದಿಯೂ ಹರಿದಾಡಿತ್ತು. ವಿಶೇಷ ಅಂದ್ರೆ  2004 ನಂತರ ಪುತ್ತೂರು ಕ್ಷೇತ್ರದಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಲು ಯಾರಿಗೂ ಸಾಧ್ಯವಾಗಿಲ್ಲ. ಇದೀಗ ದಕ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಒಕ್ಕಲಿಗೆ ಸಮುದಾಯ ಅವರದ್ದು ಅನ್ನೋದು ಗಮನಾರ್ಹ.

ಇನ್ನು ಬೈಂದೂರು ಕ್ಷೇತ್ರವನ್ನು ಬಾಕಿ ಇರಿಸಿಕೊಳ್ಳಲಾಗಿದೆ. ಬೈಂದೂರು ಕ್ಷೇತ್ರದ ಹಾಲಿ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ತಪ್ಪೋ ಎಲ್ಲಾ ಸಾಧ್ಯತೆಗಳಿದ್ದು, ಯಡಿಯೂರಪ್ಪ ಮತ್ತು ಅವರ ಪುತ್ರ ರಾಘವೇಂದ್ರ ಅವರ ಜೊತೆಗಿನ ಚರ್ಚೆಯ ನಂತ್ರ ಈ ಕ್ಷೇತ್ರಕ್ಕೆ ಟಿಕೆಟ್ ಘೋಷಣೆಯಾಗಲಿದೆ. ಸುಕುಮಾರ ಶೆಟ್ಟಿ ಅವರ ಮೇಲೂ ಸಾಕಷ್ಟು ಆರೋಪಗಳು ಕೇಳಿ ಬಂದಿತ್ತು.

ಕಾಪು ಕ್ಷೇತ್ರದಲ್ಲಿ ಲಾಲಾಜಿ ಮೆಂಡನ್ ಅವರಿಗೆ ಮತ್ತೆ ಟಿಕೆಟ್ ನಿರೀಕ್ಷೆಗಳಿತ್ತು. ಆದರೆ ಕೊನೆ ಘಳಿಗೆಯಲ್ಲಿ ಅವರಿಗೆ ಟಿಕೆಟ್ ಕೈ ತಪ್ಪಿದ್ದು ಅಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಟಿಕೆಟ್ ನೀಡಲಾಗಿದೆ. ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ 2015ರಲ್ಲಿ ಉಡುಪಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅದಕ್ಕೂ ಮುಂಚೆ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಅವರು 2013ರಲ್ಲಿ ಕಾಪು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಗದ ಕಾರಣ ನಂತರದ ವರ್ಷಗಳಲ್ಲಿ ಕಮಲ ಪಾಳಯಕ್ಕೆ ಬಂದಿದ್ದರು.

Tags: FEATURED
ShareTweetSendShare

Discussion about this post

Related News

Praveen nettar NIA karnataka state 7 police officer ood

Praveen nettar NIA  : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : NIA ತಂಡ ಸೇರಿದ ಕರ್ನಾಟಕದ 7 ಪೊಲೀಸರು

kuddupadav-petrol-bunk-theft-case-vittal-police-station

Puttur : ಪುತ್ತೂರಿನಲ್ಲಿ ಕರಿಮಣಿ ಎಳೆದ ಫೈಜಲ್ ಗ್ಯಾಂಗ್ ನ ಮತ್ತೊಂದು ಕೃತ್ಯ ಬೆಳಕಿಗೆ

Udupi : ಬಾಲಕಿ ಮೇಲೆ ದಾಳಿ ಮಾಡಿದ ಬೀದಿನಾಯಿ ಗ್ಯಾಂಗ್ : ಉಡುಪಿ ರಜತ ಸಂಭ್ರಮದ ಸಾಧನೆ

Kalladka : ಕರಾವಳಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯ :  ಕಲ್ಲಡ್ಕದಲ್ಲಿ ರಸ್ತೆ ಕಾಮಗಾರಿಗೆ ವ್ಯಕ್ತಿಯ ಬೆನ್ನು ಮೂಳೆ ಮುರಿತ

Kateel Yakshagana : ಕಟೀಲು ಮೇಳದಿಂದ ಇನ್ನು ಮುಂದೆ ಕಾಲಮಿತಿ ಯಕ್ಷಗಾನ

Praveen nettar ಕೊಲೆ ರಹಸ್ಯ : ಸಭ್ಯಸ್ಥರೆನಿಸಿಕೊಂಡವರೇ ಊರಿನ ನೆಮ್ಮದಿಗೆ ಕೊಳ್ಳಿ ಇಟ್ರಲ್ಲ

Praveen Nettar ಹತ್ಯೆಗೈದ ಆರೋಪಿಗಳ ಬಂಧನ : 10ಕ್ಕೆ ಏರಿದ ಬಂಧಿತರ ಸಂಖ್ಯೆ

praveen nettar case : ಕೊಲೆಗಾರರ ಆಸ್ತಿ ಮುಟ್ಟುಗೋಲಿಗೆ ಕ್ರಮ : ಅಲೋಕ್ ಕುಮಾರ್

UT Khader: ಲಾರಿ, ಬಸ್ಸಾಯ್ತು… ಕಾರಿಳಿದು ಆಟೋ ಹತ್ತಿದ ಶಾಸಕ ಯುಟಿ ಖಾದರ್

Mangaluru : ಭಾರತ ಮಾತಾ ಪೂಜಾನಾ ಕಾರ್ಯಕ್ರಮಕ್ಕೆ CFI ವಿರೋಧ

Latest News

Arun Kumar Puthila nomination to fight as Independent from Puttur

Arun Kumar Puthila  : ಪ್ರಧಾನಿ ನರೇಂದ್ರ ಮೋದಿ ಕಚೇರಿ ತಲುಪಿದ ಅರುಣ್ ಪುತ್ತಿಲ ನಾಮಪತ್ರದ ಸುದ್ದಿ : ವರದಿ ಕೇಳಿದ ಹೈಕಮಾಂಡ್

arun kumar puthila puttur assembly constituency independent candidate

Arun kumar puthila : ಪುತ್ತೂರಿಗೆ ಪುತ್ತಿಲ : ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ : ಏಪ್ರಿಲ್ 17 ರಂದು ಅರುಣ್ ಕುಮಾರ್ ಪುತ್ತಿಲ ನಾಮಪತ್ರ

Karnataka election congress-to-field-dk-suresh-against-r-ashok-in-padmanabhanagar

Karnataka election : ಪದ್ಮನಾಭನಗರದಿಂದ ಅಶೋಕ್ ವಿರುದ್ಧ ಡಿಕೆ ಸುರೇಶ್ ಕಣಕ್ಕೆ : ಅಮಿತ್ ಶಾ ತಂತ್ರಕ್ಕೆ ತಿರುಗೇಟು

bjp-ticket-bhagirathi-murulya-asha-thimmappa-new-face-bjp-candidate

BJP Ticket : ಕರಾವಳಿಯ 5 ಹಾಲಿ ಶಾಸಕರಿಗೆ ಕೈ ತಪ್ಪಿದ ಟಿಕೆಟ್ : ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಿದವರು ಸೈಡ್ ಲೈನ್

BJP Ticket karnataka-assembly-election-2023-bjp-candidate-first-list-released-politics

BJP Ticket : ಮಕ್ಕಳಿಗೆ ಟಿಕೆಟ್ ಕೇಳಿದ ಇಬ್ಬರಿಗೆ ಸಿಹಿ ಕೊಟ್ಟ ಬಿಜೆಪಿ ಹೈಕಮಾಂಡ್

Pavithra gowda Darshan birthday party megha shetty video

Darshan megha shetty : ದರ್ಶನ್ ಕುಟುಂಬದಲ್ಲಿ ಏನಾಗುತ್ತಿದೆ… ಹುಳಿ ಹಿಂಡಿದ್ರ ಮೇಘಾ ಶೆಟ್ಟಿ..?

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

jothe jotheyali shilpa iyer marriage

Jothe jotheyali ಜೊತೆ ಜೊತೆಯಲಿ ಧಾರಾವಾಹಿಯ ಶಿಲ್ಪಾ ಅಯ್ಯರ್ ಮದುವೆಯಾಗುತ್ತಿರೋ ಹುಡುಗ ಯಾರು ಗೊತ್ತಾ..?

balipa narayana bhagavatha no more

Balipa narayana bhagavatha ಕಳಚಿತು ಬಲಿಪ ಪರಂಪರೆಯ ಮಹಾಕೊಂಡಿ : ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್