16 ನೇ ಶತಮಾನದಲ್ಲಿ ಕೃಷ್ಣದೇವರಾಯ ತಿರುಪತಿ ದೇವಸ್ಥಾನಕ್ಕೆ ಆಭರಣಗಳನ್ನು ನೀಡಿದ್ದ ಎಂದು ಹಲವಾರು ಕಥೆಗಳು ಹೇಳುತ್ತಿವೆ. ಆದರೆ ಆ ಚಿನ್ನಾಭರಣಗಳು ಯಾವುದು ಅನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ.
ಇದೀಗ ಈ ವಿಷಯ ಕೇಂದ್ರಿಯ ಮಾಹಿತಿ ಆಯೋಗದ ಮೆಟ್ಟಿಲೇರಿದ್ದು, ಆಗಿನ ಚಿನ್ನಾಭರಣಗಳು ಎಲ್ಲಿದೆ ಅನ್ನುವ ಯಕ್ಷ ಪ್ರಶ್ನೆ ಹುಟ್ಟಿಕೊಂಡಿದೆ.
ಕೆಲವು ತಿಂಗಳ ಹಿಂದೆ ಟಿಟಿಡಿಗೆ ಮಾಹಿತಿ ಹಕ್ಕು ಅಡಿ ಅರ್ಜಿ ಸಲ್ಲಿಸಿದ್ದ ಬಿ.ಕೆ.ಆರ್.ಎಸ್ ಅಯ್ಯಂಗಾರ್ ಅನ್ನುವವರು ಕೃಷ್ಣ ದೇವರಾಯನು ತಿರುಪತಿ ದೇವಸ್ಥಾನಕ್ಕೆ ಆಭರಣಗಳನ್ನು ನೀಡಿದ್ದ ಎಂದು ದೇವಾಲಯದ ಕಲ್ಲಿನ ಮೇಲೆ ಕೆತ್ತನೆಗಳಿವೆ. ಹಾಗಾದರೆ ಕೃಷ್ಣ ದೇವರಾಯ ಕೊಟ್ಟ ಆಭರಣಗಳ ವಿವರ ಕೊಡಿ ಎಂದು ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಉತ್ತರಿಸಿದ ಟಿಟಿಡಿ 1952ಕ್ಕಿಂತ ಮುಂಚೆ ದೇವಸ್ಥಾನಕ್ಕೆ ಬಂದ ಕೊಡುಗೆಯ ಬಗ್ಗೆ ನೋಂದಣಿ ಪುಸ್ತಕದಲ್ಲಿ ಉಲ್ಲೇಖವಿಲ್ಲ. ಜೊತೆಗೆ ದೇಗುಲದಲ್ಲಿನ ಅಭರಣಗಳನ್ನು ಯಾವ ರಾಜ ಉಡುಗೊರೆಯಾಗಿ ಕೊಟ್ಟ ಎಂದು ಅರಿಯಲು ಪುರಾತತ್ವ ಇಲಾಖೆಯ ತಜ್ಞರ ಸಮಿತಿ ನೇಮಿಸಲಾಗಿತ್ತು. ಆದರೆ ತಜ್ಞರು ದೇವಸ್ಥಾನದ ಕಂಬ ಮತ್ತು ಲಭ್ಯ ಚಿನ್ನಾಭರಣಗಳನ್ನು ತಾಳೆ ಮಾಡಿ ನೋಡಿದ್ದಾರೆ. ಆಗ ಅವು ಕೃಷ್ಣ ದೇವರಾಯ ಕೊಟ್ಟ ಆಭರಣಗಳು ಎಂದು ಸಾಬೀತಾಗಿಲ್ಲ.
ಹೀಗಾಗಿ ಈ ಆಭರಣ ಕಳುವಾಗಿರಬಹುದು ಅಥವಾ ಮೂಲ ಸ್ವರೂಪದಲ್ಲಿ ಇಲ್ಲದಿರಬಹುದು ಎಂದು ಪುರಾತತ್ವ ಇಲಾಖೆ ತಿಳಿಸಿತ್ತು ಎಂದು ಉತ್ತರಿಸಿದೆ.
ಇದರಿಂದ ತೃಪ್ತರಾಗದ ಅಯ್ಯಂಗಾರ್ ಕೇಂದ್ರಿಯ ಮಾಹಿತಿ ಆಯೋಗದ ಮೆಟ್ಟಿಲು ಹತ್ತಿದ್ದು, ಟಿಟಿಡಿ ತೃಪ್ತಿಕರ ಉತ್ತರ ಕೊಟ್ಟಿ ಎಂದು ದೂರಿದ್ದಾರೆ.
ಹೀಗಾಗಿ ಭಾರತೀಯ ಪುರಾತತ್ವ ಇಲಾಖೆ,ಕೇಂದ್ರ ಸಾಸಂಸ್ಕೃತಿ ಸಚಿವಾಲಯ, ಆಂಧ್ರ ಮತ್ತು ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ.
Discussion about this post