ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೃಹ ಸಚಿವರಾಗಿ ನೇಮಕಗೊಳ್ಳುತ್ತಿದ್ದಂತೆಯೇ ಕಾಶ್ಮೀರಿ ಕಲ್ಲು ತೂರಾಟಗಾರರಿಗೆ ಬಿಜೆಪಿ ಎಚ್ಚರಿಕೆ ನೀಡಿದೆ.
ಬಿಜೆಪಿ ವಕ್ತಾರ ತಜಿಂದರ್ ಸಿಂಗ್ ಪಾಲ್ ಬಗ್ಗಾ ಟ್ವೀಟ್ ಮಾಡಿದ್ದು, ಅಮಿತ್ ಶಾ ಅವರನ್ನು ಸರ್ದಾರ್ ಪಟೇಲ್ ಅವರಿಗೆ ಹೋಲಿಕೆ ಮಾಡಿದ್ದಾರೆ.
![tajinder pal singh bagga](https://torrentspree.files.wordpress.com/2019/06/tajinder_pal_singh_bagga.jpg)
ಭಾರತಕ್ಕೆ ಹೊಸ ಸರ್ದಾರ್ ಪಟೇಲರು ಸಿಕ್ಕಿದ್ದಾರೆ. ಕಾಶ್ಮೀರದಲ್ಲಿರುವ ಕಲ್ಲು ತೂರಾಟಗಾರರೇ, ಅಕ್ರಮ ಬಾಂಗ್ಲಾ ವಲಸಿಗರೇ ಬ್ಯಾಗ್ ಪ್ಯಾಕ್ ಅಪ್ ಮಾಡಿ ಎಂದು ಬಗ್ಗಾ ಟ್ವೀಟ್ ಮಾಡಿದ್ದಾರೆ.
ಬಗ್ಗಾ ಮಾಡಿರುವ ಟ್ವೀಟ್ ಇದೀಗ ಚರ್ಚೆ ವಿಷಯವಾಗಿದೆ.
ತಮ್ಮ ನಾಯಕರನ್ನು ಹೋಲಿಕೆ ಮಾಡಬೇಕು ನಿಜ. ಹಾಗಂತ ಸರ್ದಾರ್ ಪಟೇಲ್ ಅವರಿಗೂ ಅಮಿತ್ ಶಾ ಅವರಿಗೂ ಅದ್ಯಾವ ಹೋಲಿಕೆ ಅನ್ನುವುದೇ ಗೊತ್ತಾಗುತ್ತಿಲ್ಲ. ಅಮಿತ್ ಶಾ ಗೃಹ ಸಚಿವರಾಗಿ ಏನು ಸಾಧಿಸುತ್ತಾರೆ ಅನ್ನುವುದನ್ನು ಮೊದಲು ನೋಡೋಣ. ಅವರು ಕೆಲಸ ಮಾಡಿ ತೋರಿಸಲಿ ಆಮೇಲೆ ಬಿರುದು ಬಾವಲಿಗಳನ್ನು ಕೊಡುವುದನ್ನು ಬಿಜೆಪಿ ಮುಖಂಡರು ಕಲಿಯಬೇಕಾಗಿದೆ.
ಆದ್ರೂ ಎಲ್ಲಿಯ ಅಮಿತ್ ಶಾ ಎಲ್ಲಿಯ ಸರ್ದಾರ್ ಪಟೇಲ್ ಎತ್ತನಿಂದ ಎತ್ತ ಸಂಬಂಧವಯ್ಯ…?
Discussion about this post