ಬೆಂಗಳೂರು : ಕರ್ನಾಟಕ ಪೊಲೀಸರಿಗೆ ಸವಾಲು ಅನ್ನಿಸಿರುವ ಬಿಟ್ ಕಾಯಿನ್ ಪ್ರಕರಣದಲ್ಲಿ ಕೇಳಿ ಬಂದಿರುವ ಹ್ಯಾಕರ್ ಶ್ರೀಕಿ ಆಲಿಯಾಸ್ ಶ್ರೀಕೃಷ್ಣನ ಹೆಸರನ್ನು ಸೇರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಬಿಟ್ ಕಾಯಿನ್ ದಂಧೆಯಲ್ಲಿ ಶ್ರೀಕಿ ಪಾಲು ಇದೆ ಅನ್ನುವುದು ಎಲ್ಲರ ಮಾತು. ವಿಚಾರಣೆ ಸಂದರ್ಭದಲ್ಲೂ ಪೊಲೀಸರಿಗೆ ಇದು ಗೊತ್ತಾಗಿದೆ. ಆದರೆ ನ್ಯಾಯಾಲಯಕ್ಕೆ ಸಲ್ಲಿಸಲು ಬೇಕಾದ ಸಾಕ್ಷಿಗಳು ಇಲ್ಲದಿರುವುದು ಶ್ರೀಕಿಗೆ ವರದಾನವಾಗಿ ಪರಿಣಮಸಿದೆ. ಆತನ ಹೇಳಿಕೆಗಳು ಬಿಟ್ಟರೆ ಮತ್ಯಾವ ಸಾಕ್ಷಿಗಳು ಇಲ್ಲ ಅನ್ನಲಾಗಿದ್ದು, ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಪೊಲೀಸರು ಇದೀಗ ತಾಂತ್ರಿಕ ಪರಿಣಿತರ ಮೊರೆ ಹೋಗಿದ್ದಾರೆ.
ಈ ನಡುವೆ ಶ್ರೀಕಿ ರಾಹುಲ್ ಗಾಂಧಿ, ವಿಜಯ್ ಮಲ್ಯ ಅವರ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿ ಪಾಸ್ ವರ್ಡ್ ಬದಲಾಯಿಸಿದ್ದ ಅನ್ನುವ ಅಂಶ ಶ್ರೀಕಿ ವಿರುದ್ಧ ಸಲ್ಲಿಸಿರುವ ಜಾರ್ಜ್ ಶೀಟ್ ನಲ್ಲಿ ಉಲ್ಲೇಖಿತವಾಗಿದೆ. 2016ರಲ್ಲಿ ಈ ಹ್ಯಾಕ್ ನಡೆದಿದ್ದು, ಆ ಸಂದರ್ಭದಲ್ಲಿ ರಾಹುಲ್ ಅವರ ಸಾಮಾಜಿಕ ಜಾಲತಾಣಗಳನ್ನು ನೋಡಿಕೊಳ್ಳುತ್ತಿದ್ದ ಸಂಸ್ಥೆ ಹ್ಯಾಕ್ ನಡೆದೇ ಇಲ್ಲ ಅಂದಿತ್ತು.
ಯಾವಾಗ ಮೊದಲ ಸಲ ಶ್ರೀಕಿ ಹಣ ಕೊಟ್ಟು ಮರ್ಯಾದೆ ಉಳಿಸಿಕೊಂಡಿದ್ದ ಎಜೆನ್ಸಿ ಎರಡನೇ ಸಲವೂ ಹಣಕ್ಕೆ ಬೇಡಿಕೆ ಇಟ್ಟ ವೇಳೆ ಪೊಲೀಸರಿಗೆ ದೂರು ಕೊಟ್ಟಿತ್ತು.
ಕೇವಲ ರಾಹುಲ್ ಮತ್ತು ಮಲ್ಯ ಮಾತ್ರವಲ್ಲದೆ NDTV, ಪತ್ರಕರ್ತೆ ಬರ್ಖಾ ದತ್ತ್ ಅವರ ಟ್ವೀಟರ್ ಮತ್ತು ವೆಬ್ ಸೈಟ್ ಕೂಡಾ ಹ್ಯಾಕ್ ಮಾಡಿದ್ದನಂತೆ. Net4India data centreನ ಸರ್ವರ್ ಗೆ ಕನ್ನ ಹಾಕಿ ಈ ಕೃತ್ಯ ಎಸಗಲಾಗಿತ್ತು.
Discussion about this post