ಸಂಭ್ರಮದ ದಿನದಂದು ಸೂತಕದ ಛಾಯೆ ತಂದಿಟ್ಟವರಿಗೆ ಕಾದಿದೆ ಶಿಕ್ಷೆ ( shivamogga incident)
ಶಿವಮೊಗ್ಗ : ಒಂದೇ ಒಂದು ಪೊಲೀಸ್ ದೂರಿನ ಮೂಲಕ ಬಗೆ ಹರಿಸಬಹುದಾದ ಸಮಸ್ಯೆಯನ್ನು ಬೆಟ್ಟದಷ್ಟು ದೊಡ್ಡದು ಮಾಡಿದ ದುಷ್ಕರ್ಮಿಗಳು ಇದೀಗ ಶಿವಮೊಗ್ಗ ಬೂದಿ ಮುಚ್ಚಿದ ಕೆಂಡವಾಗಿರುವುದನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ಸಾವರ್ಕರ್ ಫೋಟೋ ಬಗ್ಗೆ ಇದ್ದ ಅಸಮಾಧಾನವನ್ನು ಪೊಲೀಸರ ಮೂಲಕ ಬಗೆ ಹರಿಸಬಹುದಿತ್ತು. ಈ ಮೂಲಕ ಸರ್ವ ಜನಾಂಗದ ಶಾಂತಿಯ ತೋಟ ಅನ್ನುವುದನ್ನು ಸಾಬೀತು ಮಾಡಬಹುದಿತ್ತು. ಆದರೆ ಹಾಗಾಗಿಲ್ಲ.( shivamogga incident)
ಈ ನಡುವೆ ಶಿವಮೊಗ್ಗದಲ್ಲಿ ಅಮಾಯಕ ಪ್ರೇಮ್ ಸಿಂಗ್ ಮೇಲೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಬಂಧಿತರಾಗಿರುವವರ ಪೈಕಿ ಇಬ್ಬರು ಆರೋಪಿಗಳು ಕರಾಳ ಇತಿಹಾಸ ಹೊಂದಿರುವುದು ಗೊತ್ತಾಗಿದೆ.
ಇದನ್ನು ಓದಿ : Shrikant Tyagi : ಕಠಿಣ ಕ್ರಮ ಅಂದ್ರೆ ಇದಪ್ಪ : BJP ನಾಯಕನ ಮನೆಗೆ ಬುಲ್ಡೋಜರ್ ನುಗ್ಗಿಸಿದ ಯೋಗಿ
ಬಂಧಿತ ನದೀಮ್ 2016ರಲ್ಲಿ ಶಿವಮೊಗ್ಗದಲ್ಲಿ ನಡೆದ ಕೋಮು ಗಲಭೆಯಲ್ಲಿ ಈತ ಪ್ರಮುಖ ಪಾತ್ರಧಾರಿಯಾಗಿದ್ದ. ಈ ವೇಳೆ ನಡೆದ ಕಲ್ಲು ತೂರಾಟ. ಚಪ್ಪಲಿ ತೂರಾಟದಲ್ಲೂ ಈತನ ಪಾತ್ರವಿತ್ತು ಅನ್ನುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಇದೀಗ ಮತ್ತೆ ಚಾಕು ಇರಿತದ ಮೂಲಕ ಶಿವಮೊಗ್ಗದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದ್ದಾನೆ.
ಇನ್ನೊಬ್ಬಆರೋಪಿ ಜಬಿವುಲ್ಲಾನಿಗೆ ಕಳ್ಳತನವೇ ಜೀವನಾಧಾರ. ಹತ್ತಾರು ಕಳ್ಳತನ ಪ್ರಕರಣಗಳು ಈತನ ಮೇಲಿದೆ.
Discussion about this post