ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ವೇಳೆ ಅಲ್ಲಿನ ರಾಜಕೀಯ ಮುಖಂಡರನ್ನು ಬಂಧಿಸಿ, ಗೃಹ ಬಂಧನದಲ್ಲಿರಿಸಲಾಗಿತ್ತು.
ನ್ಯಾಷನಲ್ ಕಾನ್ಫರೆನ್ಸ್(ಎನ್ಸಿ), ಪೀಪಲ್ಸ್ ಡೆಮಾಕ್ರಟಿಕಲ್ ಪಾರ್ಟಿ(ಪಿಡಿಪಿ) ಮತ್ತು ಪೀಪಲ್ಸ್ ಕಾನ್ಫರೆನ್ಸ್ ಸೇರಿದಂತೆ ವಿವಿಧ ಪಕ್ಷಗಳ ಸುಮಾರು 31 ಪ್ರಮುಖ ರಾಜಕೀಯ ನಾಯಕರು ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಐಟಿಡಿಸಿ)ದ ಹೆಸರಾಂತ ಸೆಂಟಾರ್ ಹೋಟೆಲ್ನಲ್ಲಿ ಇರಿಸಲಾಗಿದೆ.
ಜಮ್ಮು ಕಾಶ್ಮೀರದ ಮಾಜಿ ಸಿಎಂಗಳಾದ ಮೆಹಬೂಬ ಮಫ್ತಿ ಮತ್ತು ಓಮರ್ ಅಬ್ದುಲ್ಲಾ ಅವರ ಗೃಹ ಬಂಧನ ಮುಂದುವರೆದಿದೆ. ಮಫ್ತಿ ಅವರನ್ನು ಪ್ರವಾಸೋದ್ಯಮ ಇಲಾಖೆಗೆ ಸೇರಿದ ಚಶ್ಮಾ ಶಾಹಿಯಲ್ಲಿ ಹಾಗೂ ಅಬ್ದುಲ್ಲಾ ಅವರನ್ನು ನೆಹರೂ ಅತಿಥಿ ಗೃಹದಲ್ಲಿ ಇರಿಸಲಾಗಿದೆ.
ಇದೀಗ ಈ ನಾಯಕರನ್ನು ಸಾಕುವುದೇ ದೊಡ್ಡ ಕಲೆ ನೋವಾಗಿದ್ದು, ಸರಿಯಾದ ಸಮಯಕ್ಕೆ ಊಟ ತಿಂಡಿ ಜೊತೆಗೆ ವಾರಕ್ಕೊಮ್ಮೆ ಮಾಂಸಹಾರಿ ಊಟ ನೀಡಲಾಗುತ್ತಿದೆ.
ಹೀಗಾಗಿ ಈಗಾಗಲೇ 3 ತಿಂಗಳಲ್ಲಿ ಖರ್ಚಾದ ಮೊತ್ತ 2.65 ಕೋಟಿ ರೂಪಾಯಿಯ ಗಡಿ ದಾಟಿದೆ. ಒಬ್ಬ ರಾಜಕೀಯ ನಾಯಕನಿಗೆ ದಿನಕ್ಕೆ 5 ಸಾವಿರ ರೂ ಖರ್ಚಾಗುತ್ತಿದ್ದು, ಗೃಹ ಇಲಾಖೆ 800 ರೂ. ಮಾತ್ರ ಮಂಜೂರು ಮಾಡುವುದಾಗಿದೆ ತಿಳಿಸಿದೆ.
ಹೀಗಾಗಿ ಈ ನಾಯಕರನ್ನು ಶಾಸಕರ ಹಾಸ್ಟೆಲ್ ಅಥವಾ ಮತ್ತೊಂದು ದುಬಾರಿಯಲ್ಲದ ಹೋಟೆಲ್ಗೆ ಸ್ಥಳಾಂತರಿಸಲು ಚಿಂತನೆ ನಡೆದಿದೆ.
Discussion about this post