ಜಮ್ಮು : ನಾಪತ್ತೆಯಾಗಿದ್ದ ಭಾರತೀಯ ವಾಯು ಸೇನೆಯ ಯೋಧನ ಶವಕ್ಕಾಗಿ ಕಳೆದ 75 ದಿನಗಳಿಂದ ನಡೆಯುತ್ತಿದ್ದ ಶೋಧ ಕಾರ್ಯವನ್ನು ಅಂತ್ಯಗೊಳಿಸಲಾಗಿದೆ. ಯೋಧನ ಪಾರ್ಥಿವ ಶರೀರ ಸಿಕ್ಕ ಹಿನ್ನಲೆಯಲ್ಲಿ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಜಮ್ಮು ಕಾಶ್ಮೀರದ ( Ranjit Sagar Dam ) ರಂಜಿತ್ ಸಾಗರ್ ಅಣೆಕಟ್ಟೆಯಲ್ಲಿ ಸೇನಾ ಹೆಲಿಕಾಪ್ಟರ್ ( Rudra helicopter ) ಪತನವಾಗಿತ್ತು. ಈ ವೇಳೆ ಹೆಲಿಕಾಫ್ಟರ್ ನಲ್ಲಿದ್ದ ಸಹ ಪೈಲೆಟ್ ಹಾಗೂ ಪೈಲೆಟ್ ಅಣೆಕಟ್ಟೆ ಪಾಲಾಗಿದ್ದರು. ತಕ್ಷಣ ಶೋಧ ಕಾರ್ಯವನ್ನು ಪ್ರಾರಂಭಿಸಿದ್ದ ರಕ್ಷಣಾ ಪಡೆಗಳು ಆಗಸ್ಟ್ 15 ರಂದು ಪೈಲೆಟ್ ಲೆ.ಅಭಿಜಿತ್ ಸಿಂಗ್ ಬಾತ್ ಅವರ ಶವವನ್ನು ಹೊರ ತೆಗೆದಿತ್ತು.
![ranjit sagar dam heli](https://torrentspree.com/wp-content/uploads/2021/10/ranjit-sagar-dam-heli.jpg)
ಇದಾದ ಬಳಿಕ ಸಹ ಪೈಲೆಟ್ ಕ್ಯಾ ಜಯಂತ್ ಜೋಶಿಗಾಗಿ ಹುಡುಕಾಟ ಮುಂದುವರಿದಿತ್ತು. ಇದೀಗ 75 ದಿನಗಳ ಬಳಿಕ ರಂಜಿತ್ ಸಾಗರ್ ಅಣೆಕಟ್ಟೆಯಿಂದ ಜಯಂತ್ ಜೋಶಿ ಶವ ಹೊರ ತೆಗೆಯಲಾಗಿದೆ. ಭಾನುವಾರ ಮುಂಜಾನೆ 2 ಗಂಟೆಯ ವೇಳೆಗೆ ರಕ್ಷಣಾ ಕಾರ್ಯಾಚರಣೆಯ ಯೋಧರಿಗೆ ಜೋಶಿ ಶವ ಸಿಕ್ಕಿತ್ತು.
ಸೇನೆಯ ಮಾಹಿತಿ ಪ್ರಕಾಶ ಜೋಶಿಯವರ ಶವ 65 ರಿಂದ 70 ಮೀಟರ್ ಆಳದಲ್ಲಿ ಸಿಲುಕಿತ್ತು. ulti-beam sonar equipment ಮೂಲಕ scan ನಡೆಸಿದ ವೇಳೆ ಶವ ಪತ್ತೆಯಾಗಿದೆ.
Discussion about this post