ಪ್ರಧಾನಿ ನರೇಂದ್ರ ಮೋದಿಯವರನ್ನು ಕಳ್ಳ..ಕಳ್ಳ ಎಂದು ಜರೆದಿದ್ದ ಕಾಂಗ್ರೆಸ್ ಮೇಲೆ ಮೋದಿ ತಿರುಗಿ ಬಿದ್ದಿದ್ದಾರೆ. ರಾಜೀವ್ ಗಾಂಧಿ ಕುರಿತಂತೆ ಹಲವು ದಿನಗಳಿಂದ ಮಾತನಾಡಲಾರಂಭಿಸಿರುವ ಮೋದಿ, ಸಾಧ್ಯವಿದ್ರೆ ರಾಜೀವ್ ಗಾಂಧಿ ಹೆಸರಿನಲ್ಲಿ ನೀವು ಮತಯಾಚಿಸಿ ಎಂದು ಸವಾಲು ಹಾಕಿದ್ದಾರೆ. ರಾಜೀವ್ ಗಾಂಧಿ ಕಾಲದಲ್ಲಿ ನಡೆದ ರಕ್ಷಣಾ ಇಲಾಖೆಯ ಹಗರಣವೊಂದನ್ನು ಕಾಂಗ್ರೆಸ್ ಅಂಗಳಕ್ಕೆ ಎಸೆದೆರುವ ಪ್ರಧಾನಿ…ಈಗ ಕಳ್ಳ ಯಾರೆಂದು ಹೇಳಿ ಎಂದು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.
ಈ ನಡುವೆ ರಾಜೀವ್ ಗಾಂಧಿಯವರ ಕಾರ್ಯವೈಖರಿ ಕುರಿತಂತೆ ಮತ್ತೊಂದು ಹೊಸ ಬಾಂಬ್ ಸಿಡಿಸಿರುವ ಪ್ರಧಾನಿ, ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ತಮ್ಮ ಕುಟುಂಬದೊಂದಿಗೆ ರಜಾದಿನ ಕಳೆಯಲು ಭಾರತೀಯ ನೌಕಾಪಡೆಯ ಯುದ್ಧ ವಿಮಾನ ವಾಹಕವಾಗಿದ್ದ ಐಎನ್ಎಸ್ ವಿರಾಟ್ ಅವರು ಬಳಸಿಕೊಂಡಿದ್ದರು ಎಂದು ಆರೋಪಿದ್ದಾರೆ.
ದೀಪ ಪ್ರದೇಶಗಳಿಗೆ ಅವರು ರಜಾದಿನ ಕಳೆಯಲು ಹೋದಾಗ ತಮ್ಮ ಕುಟುಂಬದ ಕೆಲಸಕ್ಕಾಗಿ ನೌಕಾ ಪಡೆಯ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದರು. ಅಲ್ಲದೆ ಅದರ ಹೆಲಿಕಾಪ್ಟರ್ನ್ನು ಬಳಸಿಕೊಳ್ಳುತ್ತಿದ್ದರು. ದೇಶದ ಭದ್ರತೆಗಾಗಿ ಸಮುದ್ರದ ಗಡಿ ಪ್ರದೇಶಗಳಲ್ಲಿ ನಿಯೋಜಿಸಲ್ಪಡುತ್ತಿದ್ದ ಐಎನ್ಎಸ್ ವಿರಾಟ್ ನೌಕೆಯಲ್ಲಿ ದ್ವೀಪಪ್ರದೇಶಗಳಿಗೆ 10 ದಿನಗಳ ಕಾಲ ಪ್ರವಾಸ ಹೋಗಿದ್ದರು.
ರಾಜೀವ್ ಗಾಂಧಿಯವರು ತಮ್ಮ ಇಟಲಿಯ ಬಂಧುಗಳನ್ನೂ ಈ ವಿರಾಟ್ ನೌಕೆಯಲ್ಲಿ ಕರೆದೊಯ್ಯುತ್ತಿದ್ದರು. ವಿದೇಶಿಗರಿಗೂ ನಮ್ಮ ಯುದ್ಧ ನೌಕೆಯಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದರು. ದೇಶದ ಭದ್ರತಾ ವ್ಯವಸ್ಥೆಯನ್ನು ಎಷ್ಟು ಸಡಿಲ ಬಿಟ್ಟಿದ್ದರೆಂದು ಇದರಲ್ಲೇ ಗೊತ್ತಾಗುವುದಿಲ್ಲವೇ? ಭಾರತದ ನಾಗರಿಕರ ಸುರಕ್ಷತೆ ಬಗ್ಗೆ ಅವರಿಗೆ ಕಾಳಜಿ ಇರಲಿಲ್ಲ ಎಂದೇ ಅರ್ಥ ಅಲ್ಲವೇ ಎಂದು ಮೋದಿ ಪ್ರಶ್ನಿಸಿದ್ದಾರೆ.
ಈ ನಡುವೆ ಪ್ರಧಾನಿಯವರ ಈ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಮೋದಿಯವರು ವಿಚಲಿತರಾಗಿದ್ದು , ಈ ಹೇಳಿಕೆಯನ್ನು ನೀಡುತ್ತಿದ್ದಾರೆ.
ರಾಜೀವ್ ಗಾಂಧಿಯವರು ಮೃತಪಟ್ಟು ಹಲವು ದಶಕಗಳಾದ ನಂತ್ರ ಇಂತಹ ಹೇಳಿಕೆಯನ್ನು ಮೋದಿಯವರು ನೀಡುತ್ತಿದ್ದಾರೆ. ಉದ್ಯೋಗ, ಕೃಷಿ, ನೋಟ್ ಬ್ಯಾನ್ ಕುರಿತ ಪ್ರಶ್ನೆಗಳಿಗೆ ಮೋದಿಯವರ ಬಳಿ ಉತ್ತರವಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಗ್ವಿ ಹೇಳಿದ್ದಾರೆ.
Discussion about this post