Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ra ra rakkamma : ರಾ ರಾ ರಕ್ಕಮ್ಮ ತಂದಿಟ್ಲು ಸಂಕಷ್ಟ

Radhakrishna Anegundi by Radhakrishna Anegundi
July 21, 2022
in ಮನೋರಂಜನೆ
ra-ra-rakkamma-girl-dancing-in-hyderabad-metro
Share on FacebookShare on TwitterWhatsAppTelegram

ಈ ಸಾಮಾಜಿಕ ಜಾಲತಾಣ ಎಷ್ಟು ಒಳ್ಳೆಯದು ಮಾಡಿದೆಯೋ ಅಷ್ಟೇ ಕೆಡುಕು ಮಾಡಿದೆ. ಅದರಲ್ಲೂ ರೀಲ್ಸ್ ಹುಚ್ಚು ಕೇಳುವುದೇ ಬೇಡ. ಯುವಜನತೆಯನ್ನು ಸೆನ್ಸ್ ಇಲ್ಲದಂತೆ ಮಾಡಿದೆ. ಅದಕ್ಕೆ ಹೊಸ ಸೇರ್ಪಡೆ ವಿಕ್ರಾಂತ್ ರೋಣದ ರಾ ರಾ ರಕ್ಕಮ್ಮ (ra ra rakkamma)

ಹೈದರಬಾದ್ : ಒಂದು ಸಿನಿಮಾ ಹಾಡು ವೈರಲ್ ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಆ ಹಾಡಿನದ್ದೇ ಸದ್ದು. ಅದಕ್ಕೆ ಸರಿಯಾಗಿ ಮಾರುಕಟ್ಟೆ ನೂರಾರು ಶಾರ್ಟ್ ವಿಡಿಯೋ APPಗಳು ಬಂದಿದೆ. ಯುವಜನತೆಯ ಹುಚ್ಚನ್ನು ಬಳಸಿಕೊಳ್ಳುವ APPಗಳು ನಮ್ಮದೇ ಡಾಟಾದಲ್ಲಿ ದುಡ್ಡು ಬಾಚಿಕೊಳ್ಳುತ್ತಿದೆ. ರೀಲ್ಸ್ ಅನ್ನುವುದು ಯಾವಾಗ ಹವ್ಯಾಸದ ಪಟ್ಟ ಕಳಚಿಟ್ಟು ಚಟ ಅನ್ನಿಸಿತೋ, ಆಗ್ಲೇ ಸಮಸ್ಯೆ ಶುರುವಾಗಿದೆ. (ra ra rakkamma)

ಈ ನಡುವೆ ಮೆಟ್ರೋ ನಿಲ್ದಾಣದಲ್ಲಿ ರೀಲ್ಸ್ ಮಾಡಿ ಹೈದರಬಾದ್ ನಲ್ಲಿ ಯುವತಿಯೊಬ್ಬಳು ಸಂಕಷ್ಟಕ್ಕೆ ಸಿಲುಕಿದ್ದಾಳೆ. ಅದು ಕೂಡಾ ಸುದೀಪ್ ನಟನೆಯ Vikrant Ronaದ, ರಾರಾ ರಕ್ಕಮ್ಮ ( ra ra rakkamma) ಹಾಡಿಗೆ ಅನ್ನುವುದು ಗಮನಾರ್ಹ ಅಂಶ. ಮೆಟ್ರೋ ನಿಲ್ದಾಣ ಹಾಗೂ ಮೆಟ್ರೋ ರೈಲಿನ ಒಳಗಡೆ ಈಕೆ ರೀಲ್ಸ್ ಮಾಡಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನುವುದು ಗೊತ್ತಿಲ್ಲ ಅಂದ್ರೆ ಹೇಗೆ ಅನ್ನುವುದು ಇವರ ವಾದ.

ಇದನ್ನೂ ಓದಿ : belgaum honey trap :ರಾಜಕುಮಾರ ಟಾಕಳೆ ನನ್ನ ಗಂಡ : ಬೆಳಗಾವಿ ಹನಿಟ್ರ್ಯಾಪ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್

ಹೈದರಬಾದ್ ಮೂಲದ ಕಂಟೆಂಟ್ ಕ್ರಿಯೇಟರ್ ಒಬ್ಲು ರಾರಾ ರಕ್ಕಮ್ಮ ಹಾಡಿಗೆ ರೀಲ್ಸ್ ಮಾಡಿ ತನ್ನ ಇನ್ಸ್ಟಾ ಖಾತೆಯಲ್ಲಿ ಅಪ್ ಲೋ ಮಾಡಿದ್ಲು. ಈ ಹಾಡು ಸಹಜವಾಗಿಯೇ ವೈರಲ್ ಆಗಿತ್ತು. ತಗೊಳ್ಳಿ ಕೆಲವರು ಈಕೆಯ ಪ್ರತಿಭೆಯನ್ನು ಮೆಚ್ಚಿದ್ರೆ ಮತ್ತೆ ಕೆಲವರು ಅತಿರೇಕದ ವರ್ತನೆ ಎಂದು ಜರೆದಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಹೀಗೆಲ್ಲಾ ನಡೆದುಕೊಳ್ಳಬಾರದು ಅಂದಿದ್ದಾರೆ.

ಇನ್ನು ಕೆಲ ಮಂದಿ ಮೆಟ್ರೋ ಅಧಿಕಾರಿಗಳನ್ನು ಟ್ಯಾಗ್ ಮಾಡಿ, ಮೆಟ್ರೋ ರೈಲಿನಲ್ಲಿ ವಿಡಿಯೋ ಮಾಡಲು, ಡ್ಯಾನ್ಸ್ ಮಾಡಲು ಅವಕಾಶವಿದೆಯೇ ಎಂದು ಪ್ರಶ್ನಿಸಿದ್ದಾರೆ. ಮೆಟ್ರೋ ರೈಲು ನಿಲ್ದಾಣವನ್ನು ಪಿಕ್ ನಿಕ್ ಸ್ಪಾಟ್ ಮಾಡಿದ್ದು ಯಾವಾಗ, ಇದೇನು ಡ್ಯಾನ್ಸ್ ವೇದಿಕೆಯೇ ಎಂದು ಪ್ರಶ್ನಿಸಿದ್ದಾರೆ.

Metro Dance: హైదరాబాద్ మెట్రో స్టేషన్‌లో యువతి నృత్యం.. చర్యలకు సిద్ధమైన అధికారులు pic.twitter.com/XKAc285Eyg

— Eenadu (@eenadulivenews) July 20, 2022

ಈ ಪ್ರಶ್ನೆಗಳಿಂದ ಸುಸ್ತಾದ ಮೆಟ್ರೋ ಅಧಿಕಾರಿಗಳು, ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ನಾವು ಕಠಿಣ ಕ್ರಮ ಜರುಗಿಸುತ್ತೇವೆ ಅಂದಿದ್ದಾರೆ. ಹಾಗಾದ್ರೆ ಈ ರೀತಿ ವಿಡಿಯೋ ಮಾಡಿದ್ದು ಯುವತಿಯೇ ತಪ್ಪಾ…. ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ.

Metro Dance: హైదరాబాద్ మెట్రో స్టేషన్‌లో యువతి నృత్యం.. చర్యలకు సిద్ధమైన అధికారులు pic.twitter.com/XKAc285Eyg

— Eenadu (@eenadulivenews) July 20, 2022

ಅಮೆರಿಕಾ ಯಾತ್ರೆ ಮುಗಿಸಿದ ಚಿತ್ಕಲಾ : ಶೀಘ್ರದಲ್ಲೇ ರತ್ನಮಾಲಾ ರೀ ಎಂಟ್ರೀ

ಚಿತ್ಕಲಾ ಬಿರದಾರ್ ಅಮೆರಿಕಾ ಪ್ರವಾಸವನ್ನು ಸಾಕಷ್ಟು ತಿಂಗಳ ಹಿಂದೆ ಪ್ಲಾನ್ ಮಾಡಿದ್ದರು. ಹೀಗಾಗಿಯೇ ಕನ್ನಡತಿ ಧಾರಾವಾಹಿಯ ಕಥೆಯನ್ನು ಅವರ ಪ್ರವಾಸಕ್ಕೆ ಪೂರಕವಾಗಿ ಕಟ್ಟಿಕೊಡಲಾಗಿತ್ತು

ಕನ್ನಡತಿ ಧಾರಾವಾಹಿ ಮೂಲಕ ರತ್ಮಮಾಲ ಎಂದೇ ಪ್ರಸಿದ್ಧರಾಗಿರುವ ಚಿತ್ಕಲಾ ಬಿರಾದಾರ್ ಅಮೆರಿಕಾ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂತಿರುಗಿದ್ದಾರೆ. ಈ ಮೂಲಕ ಕನ್ನಡತಿ ಧಾರಾವಾಹಿಗೆ ಮತ್ತೆ ರೀ ಎಂಟ್ರಿ ಕೊಡುವ ಮುನ್ಸೂಚನೆ ಸಿಕ್ಕಿದೆ. ಚಿತ್ಕಲ್ಕಾ ಮತ್ತು ಜಗದೀಶ್ ತಮ್ಮ ಮದುವೆಯ 30ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಈ ಬಾರಿ ಅಮೆರಿಕಾದಲ್ಲಿ ಅವರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಈ ಹಿಂದೆಯೇ ಪ್ಲಾನ್ ಮಾಡಿದ್ದರು. ಆ ನಿಟ್ಟಿನಲ್ಲಿ ಕನ್ನಡತಿಗೆ ಸಣ್ಣದಾಗಿ ಬ್ರೇಕ್ ಕೊಟ್ಟಿದ್ದರು.

ಇದೇ ಕಾರಣಕ್ಕಾಗಿ ಕನ್ನಡತಿ ಕಥೆಯಲ್ಲೂ ಒಂದಿಷ್ಟು ಬದಲಾವಣೆ ಮಾಡಲಾಗಿತ್ತು. ಹರ್ಷ ಮತ್ತು ಭುವಿಯ ಮದುವೆ ಬೆನ್ನಲ್ಲೇ ಚಿಕಿತ್ಸೆ ಸಲುವಾಗಿ ರತ್ನಮಾಲಾ ಅವರನ್ನು ನಿರ್ದೇಶಕರು ಆಸ್ಪತ್ರೆ ಸೇರಿಸಿದ್ದರು. ಈ ಮೂಲಕ ರತ್ಮಮಾಲಾ ಅನುಪಸ್ಥಿತಿಯಲ್ಲಿ ಕಥೆ ಮುಂದುವರಿಯುವಂತೆ ನೋಡಿಕೊಂಡಿದ್ದರು.

ಇದೀಗ ಅಮೆರಿಕಾ ಪ್ರವಾಸ ಮುಗಿಸಿ ಬಂದಿರುವ ಕಾರಣ, ರತ್ನಮಾಲಾ ಆರೋಗ್ಯ ಸುಧಾರಿಸಿಕೊಂಡು ಕನ್ನಡತಿಗೆ ರೀ ಎಂಟ್ರಿ ಕೊಡುವ ಸಾಧ್ಯತೆಗಳಿದೆ. ಈಗಾಗಲೇ ರತ್ನಮಾಲ ಅನುಪಸ್ಥಿತಿಯಲ್ಲಿ ಸಾಕಷ್ಟು ಬೆಳವಣಿಗೆಗಳು ಸಂಭವಿಸಿದೆ. ಮಾಲಾ ಶಿಕ್ಷಣ ಸಂಸ್ಥೆಯಲ್ಲಿ ಸಾನಿಯಾ ಕಾಟ ತಡೆಯಲಾರದೆ ಭುವಿ ಕೆಲಸ ಬಿಟ್ಟಿದ್ದಾಳೆ. ಇಡೀ ಆಸ್ತಿಯನ್ನು ಭುವಿಗೆ ಹೆಸರಿಗೆ ಬರೆದಿರುವ ವಿಚಾರ ಇನ್ನೂ ಸಾನಿಯಾಗೆ ಗೊತ್ತಿಲ್ಲ. ಹೀಗಾಗಿ ರತ್ನಮಾಲಾ ರೀ ಎಂಟ್ರಿಯ ಬಳಿಕ ಧಾರಾವಾಹಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ವೀಕ್ಷಕರು ನಿರೀಕ್ಷಿಸುತ್ತಿದ್ದಾರೆ.

Tags: MAIN
ShareTweetSendShare

Discussion about this post

Related News

Kantara Box Office 300 crore Kantara Box Office 300 crore

Kantara Box Office 300 crore : 30 ದಿನದಲ್ಲಿ 300 ಕೋಟಿ : ದಾಖಲೆ ಮೇಲೆ ದಾಖಲೆ ಬರೆದ ಕಾಂತಾರ

dhruva-sarja-and-prerana-expecting-their-first-child

Dhruva sarjaa : ಗುಡ್ ನ್ಯೂಸ್ ಕೊಟ್ಟ ಧ್ರುವ ಪ್ರೇರಣಾ ದಂಪತಿ

Ardhangi : ಅಮೃತ ವರ್ಷಿಣಿಯ ಅಮೃತಾಳಿಗೆ ಅರ್ಧಾಂಗಿಯಲ್ಲಿ ಸಿಕ್ತು ಛಾನ್ಸ್

jothe jotheyali ಆರ್ಯವರ್ಧನ್ ಪಾತ್ರಕ್ಕೆ ಸಿ ಟಿ ರವಿ ಆಯ್ಕೆ

Dhamaka : ಧಮಾಕ ಟ್ರೇಲರ್ ರಿಲೀಸ್…ಇದು ಕಾಮಿಡಿ ಜೋಡಿಯ ನಗುವಿನ ಟಾನಿಕ್

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

Bigg Boss OTT : ಮೂಡ್ ಬಂದಿಲ್ಲ ಅಂದ್ರೆ 3 ದಿನವಾದ್ರೂ ಮಾಡಲ್ಲ : ಸುದೀಪ್ ಮುಂದೆ ಸೋನು ರಹಸ್ಯ ಬಯಲು

bigg boss roopesh shetty : ಅವಳು ಬೀಳ್ತಾ ಇಲ್ಲ ಇವನು ಬಿಡ್ತಾ ಇಲ್ಲ : ರೂಪೇಶ್ love with ಸಾನ್ಯಾ

kiran yogeshwar  : ಬಿಗ್ ಬಾಸ್ ಮನೆಯಿಂದ ಹೊರ ಬಂದ ಕಿರಣ್ ಯೋಗೇಶ್ವರ್

Bigg Boss OTT : ವಾಶ್ ರೂಮ್ ನಲ್ಲಿ ಜಿರಳೆ : ಸಾನ್ಯಾ ಸಹಾಯಕ್ಕೆ ರೂಪೇಶ್

Latest News

Pavithra gowda Darshan birthday party megha shetty video

Darshan megha shetty : ದರ್ಶನ್ ಕುಟುಂಬದಲ್ಲಿ ಏನಾಗುತ್ತಿದೆ… ಹುಳಿ ಹಿಂಡಿದ್ರ ಮೇಘಾ ಶೆಟ್ಟಿ..?

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

jothe jotheyali shilpa iyer marriage

Jothe jotheyali ಜೊತೆ ಜೊತೆಯಲಿ ಧಾರಾವಾಹಿಯ ಶಿಲ್ಪಾ ಅಯ್ಯರ್ ಮದುವೆಯಾಗುತ್ತಿರೋ ಹುಡುಗ ಯಾರು ಗೊತ್ತಾ..?

balipa narayana bhagavatha no more

Balipa narayana bhagavatha ಕಳಚಿತು ಬಲಿಪ ಪರಂಪರೆಯ ಮಹಾಕೊಂಡಿ : ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್