Praveen Nettar murder ಪ್ರಕರಣವನ್ನು ರಾಜ್ಯ ಪೊಲೀಸರು ಮತ್ತು NIA ತನಿಖೆ ನಡೆಸುತ್ತಿದೆ. ರಾಜಕಾರಣಿಗಳು ಸುಳಿವು ಲಭ್ಯ ಅನ್ನುವ ಹೇಳಿಕೆಗೆ ಅಂಟಿಕೊಂಡಿದ್ದಾರೆ
ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (Praveen Nettar murder) ಹತ್ಯೆ ಪ್ರಕರಣದ ಬಳಿಕ ಸಾಕಷ್ಟು ರಾಜಕೀಯ ಬೆಳವಣಿಗೆ ನಡೆದಿತ್ತು. ಅದರಲ್ಲೂ ರಾಜ್ಯ ಬಿಜೆಪಿಯ ಬುಡವೇ ಅಲ್ಲಾಡಿತ್ತು. ಇದೇ ಕಾರಣಕ್ಕಾಗಿ ಈಗ್ಲೂ ಬುಡ ಅಲ್ಲಾಡುವುದು ನಿಂತಿಲ್ಲ. ಆದರೆ ಬಿಜೆಪಿ ನಾಯಕರು ಪ್ರವೀಣ್ ಹತ್ಯೆ ವಿಚಾರದಲ್ಲಿ ಕೊಟ್ಟ ಭರವಸೆಗಳು ಸುಳಿವು ಲಭ್ಯ ಅನ್ನುವಲ್ಲಿಗೆ ನಿಂತಿದೆ.
ಪ್ರವೀಣ್ ನೆಟ್ಟಾರು ಹತ್ಯೆ (Praveen Nettar murder) ನಡೆದು ವಾರವಾದರೂ ಪ್ರಮುಖ ಹಂತಕರ ಸುಳಿವು ಪತ್ತೆಯಾಗಿಲ್ಲ. ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಆದಾದ ಬಳಿಕ ಕೇರಳದಲ್ಲಿ ಆರೋಪಿಗಳ ಬಂಧನ ಅನ್ನುವ ಸುದ್ದಿಗಳು ಬಂತು ಆದರೆ ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. TV9 ಸುದ್ದಿ ವಾಹಿನಿ ಸದ್ದಾಂ ಹಾಗೂ ಹ್ಯಾರಿಸ್ (The two were identified as Saddam and Harris) ಅನ್ನುವವರ ಬಂಧನ ಅನ್ನುವ ಸುದ್ದಿ ಪ್ರಸಾರ ಮಾಡಿತ್ತು. (According to TV9 Kannada, Harris, who was arrested on Tuesday, and his gang had failed to kill Nettar earlier) ಆದರೆ ಪೊಲೀಸರು ಇದನ್ನು ಅಧಿಕೃತಗೊಳಿಸಿಲ್ಲ.
ಇದನ್ನೂ ಓದಿ : Eshwarappa : ಪಕ್ಷಕ್ಕೆ ನಿಮ್ಮ ಕೊಡುಗೆ ಏನು…ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಬಗ್ಗೆ ಈಶ್ವರಪ್ಪ ಕೀಳು ಮಾತು
ಈ ನಡುವೆ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ತಂಡಕ್ಕೆ ಪ್ರಮುಖ ಆರೋಪಿಗಳ ಸುಳಿವು ಸಿಕ್ಕಿಲ್ಲ ಅನ್ನಲಾಗಿದೆ. ಇನ್ನು ಬಿಜೆಪಿ ನಾಯಕರು ಪ್ರಮುಖ ಆರೋಪಿಗಳ ಸುಳಿವು ಲಭ್ಯವಾಗಿದೆ ಅನ್ನುವುದರಲ್ಲೇ ಕಾಲ ತಳ್ಳುತ್ತಿದ್ದಾರೆ.

ಇನ್ನು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖಾ ವಿವರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಾಗದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು ಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈಗಾಗಲೇ ತನಿಖೆಯನ್ನು NIA ಗೆ ನೀಡಲು ತೀರ್ಮಾನಿಸಲಾಗಿದೆ. ಅದರ ನಡುವೆ ರಾಜ್ಯ ಪೊಲೀಸರ ತನಿಖೆಯೂ ಮುಂದುವರಿದಿದೆ ಅಂದಿದ್ದಾರೆ.

Discussion about this post