ಪ್ರಧಾನಿ ಮೋದಿ ಬಗ್ಗೆ ಉಲ್ಲೇಖವಿದ್ದ ಲೇಖನದ ಬಗ್ಗೆ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿದ್ದಾರೆ.
2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ನೀಚ ಎಂದು ಕರೆದ ಬಗ್ಗೆ ಅಯ್ಯರ್ ಇತ್ತೀಚಿನ ತಮ್ಮ ಲೇಖನವೊಂದರಲ್ಲಿ ಸಮರ್ಥಿಸಿಕೊಂಡಿದ್ದರು.
ಈ ಬಗ್ಗೆ ಶಿಮ್ಲಾದ ಪಂಜಾಬ್ ಸರ್ಕಾರಿ ಗೆಸ್ಟ್ ಹೌಸ್ ಬಳಿ ಅಯ್ಯರ್ರನ್ನು ಪತ್ರಕರ್ತರು ಪ್ರಶ್ನಿಸಿದ್ದಾರೆ.
ಈ ವೇಳೆ ಪ್ರಧಾನಿ ನರೇಂದ್ರ ಮೋದಿಯನ್ನು ಗೇಲಿ ಮಾಡಿದ ಅಯ್ಯರ್, ಅವರು ನಿಮ್ಮೊಂದಿಗೆ ಮಾತನಾಡಲ್ಲ, ಅವನೊಬ್ಬ ಹೇಡಿ. ಮಾಧ್ಯಮಗಳೊಂದಿಗೆ ಮಾತನಾಡಲ್ಲ ಎಂದು ಅಯ್ಯರ್ ಕಿಡಿ ಕಾರಿದ್ರು. ಮತ್ತೊಂದು ಪ್ರಶ್ನೆ ಕೇಳಿದ್ರೆ ಕೋಪದಿಂದ ವದರಿಗಾರನ ಮೈಕ್ ತಳ್ಳಿ, ಮುಷ್ಠಿ ಬಿಗಿ ಹಿಡಿದು ಪ್ರಶ್ನೆ ಕೇಳದಂತೆ ತಾಕೀತು ಮಾಡಿದ್ದಾರೆ.
Discussion about this post