ಮುಂಬೈ : ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ಹಲವರ ನಿದ್ದೆಗೆಡಿಸಿದೆ. ಇಡೀ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಮುಂದಾಗಿರುವ ಅನೇಕ ರಾಜಕಾರಣಿಗಳು ಮೊಸಳೆ ಕಣ್ಣೀರು ಸುರಿಸಲಾರಂಭಿಸಿದ್ದಾರೆ. ನ್ಯಾಯಾಲಯದ ಮೇಲೆ ನಂಬಿಕೆ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಈ ಪೈಕಿ ಮಹರಾಷ್ಟ್ರದ ಸರ್ಕಾರದ ಸಚಿವರದ್ದೇ ದೊಡ್ಡ ಪಾಲು. ಮೊನ್ನೆ ಮೊನ್ನೆ ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ದಳ NCB ಅಧಿಕಾರಿ ಸಮೀರ್ ವಾಂಖಡೆ ವಿರುದ್ದ ಮಹಾರಾಷ್ಟ್ರದ ಸಚಿವರೊಬ್ಬರು ಗಂಭೀರ ಆರೋಪ ಹೊರಿಸಿದ್ದರು. ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಬೇರೆ ಒಡ್ಡಿದ್ದರು.
ಶಾರುಖ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ 18 ಕೋಟಿ ರೂ.ಗಳ ಡೀಲ್ ನಡೆದಿದೆ ಅನ್ನು ಆರೋಪ ಕೇಳಿಬಂದಿದೆ. ಪ್ರಭಾಕರ್ ಸಾಲಿ ಅನ್ನುವ ವ್ಯಕ್ತಿ ಈ ಆರೋಪ ಮಾಡಿದ್ದು, ಖಾಸಗಿ ಪತ್ತೆದಾರ ಕೆ.ಪಿ.ಗೋಸಾವಿ ಮತ್ತು ಸ್ಯಾಮ್ ಡಿಸೋಜ ಅನ್ನುವವರ ನಡುವೆ 18 ಕೋಟಿ ರೂ.ಗಳ ಡೀಲ್ ನಡೆದಿದೆ. ಅದರಲ್ಲಿ 8 ಕೋಟಿ ರೂ.ಗಳನ್ನು ಸಮೀರ್ ಅವರಿಗೆ ನೀಡಲು ಸ್ಯಾಮ್ ಡಿಸೋಜ ಅವರಿಗೆ ನೀಡಲು ತಿಳಿಸಲಾಗಿತ್ತು ಅಂದಿದ್ದಾರೆ.
ಈ ಆರೋಪವನ್ನು NCB ತಳ್ಳಿ ಹಾಕಿದ್ದು. ಹಣ ಪಡೆದಿದ್ರೆ ಆರ್ಯನ್ ಜೈಲಿನಲ್ಲಿ ಇರುತ್ತಿರಲಿಲ್ಲ. ಇದು ಆಧಾರ ರಹಿತ ಆರೋಪ, NCB ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ನಡೆದಿದೆ ಅಂದಿದೆ.
ಇದು ಹೌದು ಕೂಡಾ ನಿಜಕ್ಕೂ ಡೀಲ್ ನಡೆದಿದ್ರೆ ಈ ಬಗ್ಗೆ ಆರೋಪ ಮಾಡುವ ಮಂದಿ ಕೋರ್ಟ್ ಮೆಟ್ಟಿಲು ಹತ್ತಬಹುದಿತ್ತು. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೀಗೆಲ್ಲ ಹೇಳುವುದು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವಲ್ಲದೆ ಮತ್ತೇನೂ ಅಲ್ಲ.
Discussion about this post