ಮುಂಬಯಿ : ಅತ್ತ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ತನ್ನ ಮಗ ಆರ್ಯನ್ ಖಾನ್ ಭೇಟಿಗಾಗಿ ಶಾರುಖ್ ಖಾನ್ ಆರ್ಥರ್ ರೋಡ್ ಜೈಲಿಗೆ ತೆರಳಿದ ಬೆನ್ನಲ್ಲೇ NCB ( Narcotics Control Bureau )ಅಧಿಕಾರಿಗ ಶಾರುಖ್ ಅವರ ಮುಂಬಯಿಯ ಮನ್ನತ್ ನಿವಾಸಕ್ಕೆ ದಾಳಿ ನಡೆಸಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ಮನ್ನತ್ ಗೆ ತೆರಳಿದ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಆರ್ಯನ್ ಖಾನ್ ವಿಚಾರಣೆ ಸಂದರ್ಭದಲ್ಲಿ ಸಿಕ್ಕ ಡಿಜಿಟಲ್ ಸಾಕ್ಷಿಗಳ ಆಧಾರದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಈ ನಡುವೆ ಆರ್ಯನ್ ಗೆ ಜಾಮೀನು ನೀಡಲು ಮುಂಬಯಿಯ ವಿಶೇಷ ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ಆರ್ಯನ್ ಪರ ವಕೀಲರು ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಅಕ್ಟೋಬರ್ 26 ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
Mumbai | A team of Narcotics Control Bureau (NCB) is currently present at actor Shah Rukh Khan's residence 'Mannat'
— ANI (@ANI) October 21, 2021
Earlier today, Shah Rukh Khan met son Aryan at Arthur Road Jail
Bombay High Court to hear Aryan Khan's bail application on 26th October pic.twitter.com/SyzoWVi9UL
ಇನ್ನು ಅಕ್ಟೋಬರ್ 03ರಂದು ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ Narcotics Control Bureau ಬಂಧಿಸಿದ ಬಳಿಕ ಶಾರುಖ್ ಖಾನ್ ಮಗನ ಮುಖ ನೋಡಲು ಬಂದಿರಲಿಲ್ಲ. ನ್ಯಾಯಾಲಯದ ವಿಚಾರಣೆಗಳಿಗೂ ಶಾರುಖ್ ಹಾಜರಾಗುತ್ತಿರಲಿಲ್ಲ.
ಆರ್ಯನ್ ಖಾನ್ ಬಂಧನದ ದಿನದಿಂದ ಶಾರುಖ್ ಖಾನ್ರ ವ್ಯವಸ್ಥಾಪಕಿ ಪೂಜಾ ದದ್ಲಾನಿಯೇ ಆರ್ಯನ್ ಖಾನ್ ನ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದರು.
ಹೀಗಾಗಿ ಇದೇ ಮೊದಲ ಬಾರಿ ಪುತ್ರ ಆರ್ಯನ್ ಖಾನ್ ಅನ್ನು ನೋಡಲು ಶಾರುಖ್ ಖಾನ್ ಆರ್ಥರ್ ರಸ್ತೆಯ ಜೈಲಿಗೆ ಬಂದಿದ್ದಾರೆ. ಬೆಳಿಗ್ಗೆ ಆರ್ಥರ್ ರಸ್ತೆಯ ಜೈಲಿಗೆ ಬಂದ ಶಾರುಖ್ ಮಗನೊಟ್ಟಿಗೆ ಕೆಲ ಕಾಲ ಮಾತುಕತೆಯಾಡಿದ್ದಾರೆ.
A team of the Narcotics Control Bureau (NCB) reached Shah Rukh Khan’s Bandra residence ‘Mannat’ on Thursday, hours after he visited son Aryan Khan at the Arthur Road jail.
Discussion about this post