ಶಾಲಾ ಮಕ್ಕಳ ಬಿಸಿಯೂಟಕ್ಕೆ ಅಕ್ಕಿ ಬದಲು ಗೋಧಿ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆಯಂತೆ. ಇದನ್ನು ಮಾಜಿ ಆಹಾರ ಸಚಿವ ಶಾಸಕ ಯುಟಿ ಖಾದರ್ ಖಂಡಿಸಿದ್ದು ಗೋಧಿ ಬದಲು ಗೋಧಿ ಪುಡಿಯನ್ನು ಕೊಟ್ಟಿದ್ರೆ ಚಪಾತಿ ಮಾಡಿಯಾದ್ರು ಮಕ್ಕಳು ತಿನ್ನುತ್ತಿದ್ದರು. ಇಡೀ ಗೋಧಿಯಿಂದ ಮಾಡುವುದೇನು ಎಂದು ಪ್ರಶ್ನಿಸಿದ್ದಾರೆ.
ಕರಾವಳಿ ಗೋಧಿಗಿಂತ ಅಕ್ಕಿಯೇ ಪ್ರಧಾನ. ಹೀಗಿರುವಾಗ ಗೋಧಿ ನೀಡುವುದರಲ್ಲಿ ಅರ್ಥವೇ ಇಲ್ಲ.
ಶಾಲಾ ಮಕ್ಕಳ, ಪೋಷಕರ, ಶಿಕ್ಷಕರ ಅಭಿಪ್ರಾಯ ಪಡೆಯದೇ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದ ಅವೈಜ್ಞಾನಿಕ ಎಂದಿರುವ ಖಾದರ್ ಈ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
Discussion about this post