ಲೋಕಸಭಾ ಚುನಾವಣೆಯಲ್ಲಿ ಎಸ್ಪಿ ಮತ್ತು ಬಿಎಸ್ಪಿ ಪಕ್ಷ ಮಾಡಿಕೊಂಡಿದ್ದ ಮೈತ್ರಿ ಮುರಿದು ಬಿದ್ದಿದೆ. ಬಿ.ಎಸ್.ಪಿ ಮುಖ್ಯಸ್ಥೆ ಮಾಯಾವತಿಯವರೇ ಈ ಮೈತ್ರಿಯನ್ನು ಕಡಿದುಕೊಂಡಿದ್ದು, ಉತ್ತರ ಪ್ರದೇಶ ವಿಧಾನಸಭೆಗೆ ನಡೆಯಲಿರುವ 11 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಎಸ್ಪಿ ತೋರಿರುವ ಕಳಪೆ ಸಾಧನೆಯೇ ಮಾಯಾವತಿ ಸಿಟ್ಟಿಗೆ ಕಾರಣವಾಗಿದ್ದು, ಅಖಿಲೇಶ್ ಯಾದವ್ ತಮ್ಮ ಪತ್ನಿ ಡಿಂಪಲ್ ಯಾದವ್ ಅವರನ್ನು ಗೆಲ್ಲಿಸಲಾಗದೇ ಸೋತಿದ್ದಾರೆ, ತಮ್ಮ ಇಬ್ಬರು ಸಹೋದರ ಸಂಬಂಧಿಗಳು ಕೂಡ ಸೋತಿದ್ದಾರೆ ಎಂದು ಕಿಡಿ ಕಾರಿರುವ ಮಾಯಾವತಿ ಸಾಮಥ್ಯ ವೃದ್ಧಿಸುವಂತೆ ಎಸ್ಪಿ ಮುಖಂಡರಿಗೆ ಸೂಚಿಸಿದ್ದಾರೆ.
ಇದೇನು ಶಾಶ್ವತ ಬ್ರೇಕ್ ಅಪ್ ಅಂದಿರುವ ಮಾಯಾವತಿ ಭವಿಷ್ಯದಲ್ಲಿ ಸಮಾಜವಾದಿ ಪಕ್ಷ ರಾಜಕೀಯವಾಗಿ ಉತ್ತಮವಾದ ಯಶಸ್ಸು ಗಳಿಸಿದರೇ, ಮತ್ತೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಒಂದು ವೇಳೆ ಅವರು ಯಶಸ್ಸು ಕಾಣದಿದ್ದರೆ ನಾವು ಪ್ರತ್ಯೇಕವಾಗಿಯೇ ಕೆಲಸ ಮಾಡುತ್ತೇವೆ ಅಂದಿದ್ದಾರೆ.
Discussion about this post