ನವದೆಹಲಿ : ಒಂದು ಕಾಲದಲ್ಲಿ ಕೊರೋನಾವನ್ನು ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೇರಳ, ಇದೀಗ ಸಂಪೂರ್ಣ ಎಡವಿದೆ. ಶೈಲಜಾ ಟೀಚರ್ ನೇತೃತ್ವದಲ್ಲಿ ನಡೆದ ಕೊರೋನಾ ವಿರುದ್ಧ ಕಾರ್ಯಾಚರಣೆ ಸಾಕಷ್ಟು ಫಲ ನೀಡಿತ್ತು. ಇದೇ ಕಾರಣಕ್ಕಾಗಿ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕೇರಳವನ್ನು ಗೌರವಿಸಲಾಗಿತ್ತು ಕೂಡಾ. ಮಾತ್ರವಲ್ಲದೆ ಲಸಿಕೆ ವಿಚರಣೆಯಲ್ಲೂ ಕೇರಳ ಸಾಕಷ್ಟು ಮುಂದಿತ್ತು. ಕೇರಳದಲ್ಲಿ ಲಸಿಕೆ ವೆಸ್ಟೇಜ್ ಅನ್ನುವುದೇ ಇರಲಿಲ್ಲ. ಆದರೆ ಇದೀಗ ಕೇರಳದ ಪರಿಸ್ಥಿತಿ ಸಂಪೂರ್ಣ ಉಲ್ಟಾ.ಇಡೀ ದೇಶಕ್ಕೆ ಮಾದರಿಯಾಗಿದ್ದ ರಾಜ್ಯದಲ್ಲಿ ಸೋಂಕು ಅಬ್ಬರಿಸುತ್ತಿದೆ.
ಇಡೀ ದೇಶಕ್ಕೆ ಹೋಲಿಸಿದರೆ ಕೇರಳದಲ್ಲೇ ಅತ್ಯಂತ ಹೆಚ್ಚು ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿದೆ. ಕೇರಳದಲ್ಲಿ ಅದ್ಯಾಕೆ ಸೋಂಕು ಹೆಚ್ಚಾಗಿದೆ ಅಂದ್ರೆ ನಾವು ಟೆಸ್ಟಿಂಗ್ ಹೆಚ್ಚಿಸಿದ್ದೇವೆ ಅನ್ನುವ ಸಬೂಬು ನೀಡಲಾಗುತ್ತಿದೆ. ಹಾಗೇ ನೋಡಿದರೆ ಕೇರಳದಲ್ಲಿ ಟೆಸ್ಟಿಂಗ್ ಪ್ರಮಾಣದಲ್ಲಿ ದೊಡ್ಡ ಏರಿಕೆಯಾಗಿಲ್ಲ.
ಕಳೆದ ಹಲವು ವಾರಗಳಿಂದ ಕೇರಳದಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಜುಲೈ 26ರಂದು 11,586 ಪ್ರಕರಣಗಳು ಪತ್ತೆಯಾಗಿದ್ದು 135 ಮಂದಿ ಮೃತಪಟ್ಟಿದ್ದಾರೆ. ಜುಲೈ 27 ರಂದು 22129 ಪ್ರಕರಣಗಳು ಪತ್ತೆಯಾಗಿದ್ದು 156 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಅದ್ಯಾಕೆ ಕೇರಳದಲ್ಲಿ ಕೊರೋನಾ ಸೋಂಕು ಕೇರಳದಲ್ಲಿ ವ್ಯಾಪಕವಾಗುತ್ತಿದೆ ಅನ್ನುವುದು ಗಮನಿಸಿದರೆ, ಕೊರೋನಾ ವಿರುದ್ಧ ಹೋರಾಡಿರುವ ಕೇರಳ ಇದೀಗ ಸುಸ್ತುಗೊಂಡಿದೆ. ಆಡಳಿತ ವ್ಯವಸ್ಥೆಯೂ ಈ ಹಿಂದಿನಷ್ಟು ಚುರುಕಾಗಿ ಕೆಲಸ ಮಾಡುತ್ತಿಲ್ಲ. ಅಷ್ಟೇ ಅಲ್ಲದೆ ಕಟ್ಟು ನಿಟ್ಟಿನ ಲಾಕ್ ಡೌನ್, ತ್ರಿಬಲ್ ಲೇಯರ್ ಸೀಲ್ ಡೌನ್, ಕಡ್ಡಾಯ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಆದರೆ ಈ ನಿಯಮಗಳಿಂದ ಕೇರಳಿಗರು ಬೇಸತ್ತು ಹೋಗಿದ್ದು, ಕೊರೋನಾ ನಿಯಮಗಳನ್ನು ಮರೆತು ಬಿಟ್ಟಿದ್ದಾರೆ.
ಅಷ್ಟೇ ಅಲ್ಲದೆ ಮೊನ್ನೆ ಬಕ್ರೀದ್ ಸಲುವಾಗಿ ಲಾಕ್ ಡೌನ್ ಸಡಿಲಿಸಿದ್ದ ಕೇರಳ ಸರ್ಕಾರ ಜನ ಓಡಾಟಕ್ಕೆ ಅನುವು ಮಾಡಿಕೊಟ್ಟಿತ್ತು. ಇದರಿಂದ ಸೋಂಕು ವ್ಯಾಪಕವಾಗಿ ಹರಡಿದೆ ಎನ್ನಲಾಗಿದೆ. ದುರಂತ ಅಂದ್ರೆ ಕೇರಳದಲ್ಲಿ ಸೋಂಕು ನಿಯಂತ್ರಣದಲ್ಲಿದ್ದ ಸಂದರ್ಭದಲ್ಲಿ ಕೆಲ ವ್ಯಂಗ್ಯ ಚಿತ್ರಕಾರರು ಬರೆದ ಚಿತ್ರಗಳಿಗೆ ಲೆಕ್ಕವಿಲ್ಲ. ಪಿಣರಾಯಿ ವಿಜಯನ್ ಅನ್ನು ಹೀರೋ ಮಾಡಿದ್ದರು. ಅದೇ ಸಂದರ್ಭದಲ್ಲಿ ಇದೇ ಕಲಾವಿದರು ಕುಂಭಮೇಳ, ಉತ್ತರ ಪ್ರದೇಶವನ್ನು ಟೀಕಿಸಿ ಚಿತ್ರ ಬರೆದಿದ್ದರು. ಇದೀಗ ಕೇರಳದಲ್ಲಿ ಕೊರೋನಾ ಅಬ್ಬರಿಸುತ್ತಿದೆ, ಕಾರ್ಟೋನಿಸ್ಟ್ ಗಳು ನಾಪತ್ತೆಯಾಗಿದ್ದಾರೆ.
Discussion about this post