ಬೆಂಗಳೂರು : ಆಪ್ತನಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡುವ ನಿಟ್ಟಿನಲ್ಲಿ ನಟಿ ಶೃತಿಯವರನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕೆಳಗಿಳಿಸಲಾಗಿತ್ತು. ಹಾಗೇ ನೋಡಿದರೆ ಶೃತಿಗೆ ಇದೊಂದು ಅವಮಾನ ಅನ್ನುವುದು ಸ್ಪಷ್ಟ. ಬದಲಾಗಿ ಗೌರವಯುತವಾಗಿ ರಾಜೀನಾಮೆ ಕೊಡುವಂತೆ ಶೃತಿಯವರಿಗೆ ಸೂಚಿಸಿ ಆಪ್ತನಿಗೆ ಪಟ್ಟ ಕಟ್ಟಬಹುದಿತ್ತು. ಪಾಪ ರಾಜಾಹುಲಿಗೆ ಅದೇನು ಅರ್ಜೆಂಟ್ ಇತ್ತೋ ಗೊತ್ತಿಲ್ಲ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಗೌರವದಿಂದ ಕಳುಹಿಸಿಕೊಡಲು ಹೈಕಮಾಂಡ್ ನಿರ್ಧರಿಸಿರುವಾಗ ಬೇರೆಯವರಿಗೂ ಆ ಗೌರವ ಕೊಡಬಹುದಿತ್ತು.
ಈ ನಡುವೆ ತಮ್ಮ ಅಧ್ಯಕ್ಷ ಸ್ಥಾನ ಕಿತ್ತುಕೊಂಡ ಕಾರಣದಿಂದ ಬೇಸರಗೊಂಡ ಶೃತಿ ಇಂದು ಬೆಳಗ್ಗೆ ಕಾವೇರಿ ನಿವಾಸದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದ ಶೃತಿ ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದರ ಬಗ್ಗೆ ಕಾರಣ ಕೇಳಿದ್ದರು.
ಇದನ್ನೂ ಓದಿ : ಅದೇನು ಸಾಧಕ ಅಂತಾ ಕಾಪು ಸಿಗೆ ನಿಗಮದ ಅಧ್ಯಕ್ಷ ಪಟ್ಟ ಸಿಕ್ತೋ…?
![shruthi order](https://torrentspree.com/wp-content/uploads/2021/07/shruthi-order.png)
ಇದಾದ ಕೆಲವೇ ಹೊತ್ತಿನಲ್ಲಿ ಚಲನಚಿತ್ರನಟಿ ಶೃತಿ ಅವರನ್ನು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಜೆಸಿಂತ ಶೃತಿ ನೇಮಕ ಕುರಿತಂತೆ ಆದೇಶ ಹೊರಡಿಸಿದ್ದಾರೆ.
![kapusi1](https://torrentspree.com/wp-content/uploads/2021/07/kapusi1.png)
Discussion about this post