ಬೆಂಗಳೂರು : ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಿ ಬಂದ ಆಪ್ತ ಕಾಪು ಸಿದ್ದಲಿಂಗಸ್ವಾಮಿಯವರಿಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಈ ಸಲುವಾಗಿ ನಟಿ ಶೃತಿ ಅವರನ್ನು ರಾಜ್ಯ ಪ್ರವಾಸೋದ್ಯಮ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ.
ಈ ನೇಮಕ ಇದೀಗ ಹಲವು ಅನುಮಾನಗಳಿಗೂ ಕಾರಣವಾಗಿದೆ, ಸಿಎಂ ಯಡಿಯೂರಪ್ಪ ಕೆಲವೇ ದಿನಗಳಲ್ಲಿ ಸಿಎಂ ಕುರ್ಚಿಯಿಂದ ಕೆಳಗಿಳಿಯಲಿದ್ದಾರೆ ಅನ್ನುವ ವದಂತಿಯ ನಡುವೆ ಆಪ್ತರಿಗೆ ಆಯಾಕಟ್ಟಿನ ಹುದ್ದೆ ಕೊಡಿಸಿದ್ರೆ ಅನ್ನುವ ಅನುಮಾನ ಎದ್ದಿದೆ.
ನಿಗಮಗಳಿಗೆ ಯಾರನ್ನಾದರೂ ನೇಮಿಸುವ ಅಧಿಕಾರ ಸರ್ಕಾರಕ್ಕಿದೆ. ಹಾಗಂತ ಯಾರನ್ನೂ ನೇಮಿಸಬೇಕು ಅನ್ನುವುದಕ್ಕೊಂದು ನಿಯಮ ಇರಬೇಕಲ್ವ. ಕಾಪು ಸಿದ್ದಲಿಂಗಸ್ವಾಮಿ ಯಾರು ಅನ್ನುವ ಪ್ರಶ್ನೆಯನ್ನು ರಾಜಕೀಯ ವಿಶ್ಲೇಷಕರ ಬಳಿ ಕೇಳಿದ್ರೆ ಅಚ್ಚರಿಯ ಉತ್ತರ ಕೊಡ್ತಾರೆ. ಪಕ್ಷ ಸಂಘಟನೆಯಲ್ಲಿ ಅವರ ಕೊಡುಗೆ ಬಗ್ಗೆ ಕೇಳಿದ್ರೆ, ಅಧ್ಯಯನ ಮಾಡಬೇಕು ಅನ್ನುತ್ತಾರೆ.
ಬಿಜೆಪಿಯ ಸಂಘಟನೆ ಸಲುವಾಗಿ ದುಡಿದ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಇಡೀ ಜೀವನವನ್ನೇ ಪಕ್ಷಕ್ಕೆ ಮುಡಿಪಾಗಿಟ್ಟವರ ಸಂಖ್ಯೆಗೆ ಲೆಕ್ಕವಿಲ್ಲ. ಅಂತಹುದರಲ್ಲಿ ಕಾಪು ಸಿದ್ದಲಿಂಗಸ್ವಾಮಿಯವರಿಗೆ ನಿಗಮದ ಮಂಡಳಿ ಸಿಕ್ಕಿದ್ದು ಹೇಗೆ ಅನ್ನುವುದೇ ಯಕ್ಷ ಪ್ರಶ್ನೆ. ಅದು ಕೂಡಾ ಪ್ರವಾಸೋದ್ಯಮ ಅಭಿವೃದ್ಧಿಯಂತಹ ಮಹತ್ವದ ನಿಗಮವೊಂದಕ್ಕೆ ಪ್ಯಾಶನ್ ಇರುವವರು ಬಂದ್ರೆ ಚೆಂದ ಅಲ್ವಾ.
Discussion about this post