ಗುಂಟೂರಿನಲ್ಲಿರುವ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನಿವಾಸದ ಕೇವಲ ಕಿಟಕಿ ಮತ್ತು ಬಾಗಿಲಿನ ವಿನ್ಯಾಸಕ್ಕೆ ಸರ್ಕಾರ 73 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದಯಂತೆ. ಈ ಕಾರ್ಯ ಮುಗಿಯುವಷ್ಟು ಹೊತ್ತಿಗೆ ಇದು ಕೋಟಿಯ ಗಡಿ ದಾಟಿದರೂ ಆಚ್ಚರಿ ಇಲ್ಲ. ಆದೇಶ ಹೊರಡಿಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ತಮ್ಮ ಟ್ವಿಟರ್ ಖಾತೆಯಲ್ಲಿ ಸರ್ಕಾರದ ಆದೇಶದ ಪ್ರತಿಯನ್ನು ಪೋಸ್ಟ್ ಮಾಡಿ ಟೀಕಿಸಿದ್ದಾರೆ. ಸಿಎಂ ನಿವಾಸಕ್ಕೆ ಬಾಗಿಲು ಮತ್ತು ಕಿಟಕಿಯನ್ನು ಅಳವಡಿಸಲು ಸರ್ಕಾರ 73 ಲಕ್ಷ ರೂ. ಅನುದಾನ ನೀಡಿದೆ. ಈ ದುಬಾರಿ ಮೊತ್ತವು ರಾಜ್ಯದ ಖಜಾನೆ ಮೇಲೆಯೇ ಬೀಳಲಿದೆ ಸಿಎಂ ಜಗನ್ ಮನೆಯ ಕಿಟಕಿ ಮತ್ತು ಬಾಗಿಲು ವಿನ್ಯಾಸ ಯೋಜನೆ ರೂಪಿಸಿರುವುದು ದುರದೃಷ್ಟಕರ ಸಂಗತಿ ಎಂದು ನಾಯ್ಡು ಕಿಡಿಕಾರಿದ್ದಾರೆ.
ಇನ್ನು ಜಗನ್ ದುಂದುವೆಚ್ಚ ಮಾಡುತ್ತಿರುವುದು ಇದೇ ಮೊದಲೇನಲ್ಲ. ಸಿಎಂ ಆದ ತಕ್ಷಣವೇ ತಮ್ಮ ಮನೆಯ ಮುಂಭಾಗದ ರಸ್ತೆಗೆ 5 ಕೋಟಿ ರೂ. ಖರ್ಚು ಮಾಡಿದ್ದರು. ತಮ್ಮ ಮನೆಯ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮತ್ತು ಭದ್ರತಾ ವ್ಯವಸ್ಥೆಗಾಗಿ 1.89 ಕೋಟಿ ರೂ. ಸುರಿದಿದ್ದರು ಎನ್ನಲಾಗಿದೆ.
Discussion about this post