ಭ್ರಷ್ಟಾಚಾರ ನಿಯಂತ್ರಣದ ವಿಚಾರದಲ್ಲಿ ಎಸಿಬಿಯನ್ನು ಹೈಕೋರ್ಟ್ ( Karnataka high court ) ಮತ್ತೆ ತರಾಟೆಗೆ ತೆಗೆದುಕೊಂಡಿದೆ. ಇಂದು ವಿಚಾರಣೆ ಸಂದರ್ಭದಲ್ಲಿ ಎಸಿಬಿ ದಾಳಿಯ ಮಾಹಿತಿಗಳು ಮಾಧ್ಯಮಕ್ಕೆ ಸೋರಿಕೆಯಾಗುತ್ತಿರುವ ಬಗ್ಗೆ ನ್ಯಾಯಮೂರ್ತಿಗಳು ಅಸಮಾಧಾನ ಹೊರ ಹಾಕಿದ್ದಾರೆ.
ಬೆಂಗಳೂರು : ಎಸಿಬಿ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ( Karnataka high court ) ನ್ಯಾಯಮೂರ್ತಿ ಸಂದೇಶ್ ಮತ್ತೆ ಸೋಮವಾರ ಗರಂ ಆಗಿದ್ದಾರೆ. ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಐಎಸ್ ಅಧಿಕಾರಿ ಮಂಜುನಾಥ್ ಲಂಚ ಸ್ವೀಕಾರ ಪ್ರಕರಣ ಕುರಿತ ಪ್ರಕರಣ ಸಂದರ್ಭದಲ್ಲಿ ಎಸಿಬಿ ವಕೀಲರು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಸಂದೇಶ್ ( Justice HP Sandesh ) ಅವರು, ಅದು ಹೇಗೆ ನೀವು ದಾಳಿ ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಗೌಪ್ಯತೆ ಕಾಪಾಡಿಕೊಳ್ಳಬೇಕು ಅನ್ನುವುದು ನಿಮಗೆ ಗೊತ್ತಿಲ್ವ. ದಾಳಿ ಮಾಡಿದ ವೇಳೆ ಸಿಕ್ಕ ಮಾಹಿತಿಗಳು ನ್ಯಾಯಾಲಯ ಮತ್ತು ಎಸಿಬಿ ನಡುವೆ ತಾನೇ ವಿನಯಮವಾಗಬೇಕು. ಮತ್ತೊಂದು ಪಾರ್ಟಿಗೂ ಕೊಡುವ ಹಾಗಿಲ್ಲ. ಹಾಗಿದ್ದ ಮೇಲೂ ಇದನೆಲ್ಲಾ ಮಾಧ್ಯಮಗಳಿಗೆ ಯಾರು ಕೊಡ್ತಾರೆ.
ಇದನ್ನೂ ಓದಿ : Crime news : ಎಣ್ಣೆ ಏಟಿನಲ್ಲಿ ಪತ್ನಿ ಮಗನಿಗೆ ಮಚ್ಚಿನೇಟು ಕೊಟ್ಟು ನೇಣಿಗೆ ಕೊರಳೊಡ್ಡಿದ ತಂದೆ
ಭ್ರಷ್ಟಾಚಾರದಲ್ಲಿ ಬಂಧನವಾಗಿರುವ ಜಿಲ್ಲಾಧಿಕಾರಿಯಾಗಿದ್ದವರು ಬೆಂಗಳೂರು ಸುತ್ತ ಮುತ್ತ 30 ಎಕರೆ ಜಮೀನು ಮಾಡಿದ್ದಾರೆ ಅನ್ನುವುದು ಮಾಧ್ಯಮಗಳಲ್ಲಿ ಬಂದಿದೆ. ಎಸಿಬಿ ದಾಳಿ ಮಾಡಿದಾಗ ಸಂಗ್ರಹವಾದ ಮಾಹಿತಿಗಳು ನ್ಯೂಸ್ ಪೇಪರ್ ನಲ್ಲಿ ಬರುತ್ತದೆ ಅದು ಹೇಗೆ. ಯಾರು ಇದನ್ನು ಲೀಕ್ ಮಾಡ್ತಾರೆ. ಮನೆಯೊಳಗೆ ಹೋಗಿದೆಲ್ಲಾ ಟಿವಿಯಲ್ಲಿ ಬರುತ್ತದೆ. ತನಿಖೆ ಮುಗಿಯೋ ತನಕ ಗೌಪ್ಯವಾಗಿರಬೇಕಲ್ವ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.
Mysore :ಈಕೆ ಐದು ಮನೆಯ ಒಡತಿ ಆದರೆ ಖತರ್ನಾಕ್ ಕಳ್ಳಿ : ನೆರೆ ಹೊರೆಯ ಮನೆಗಳೇ ಈಕೆಯ ಟಾರ್ಗೆಟ್
ಪರಿಚಿತರ ಮನೆಗಳನ್ನೇ ಈಕೆ ಟಾರ್ಗೇಟ್ ಮಾಡುತ್ತಿದ್ದಳು. ಕೈ ತುಂಬಾ ಕಾಸಿದ್ದರು ಆದ್ಯಾಕೆ ಈಕೆ ಕಳ್ಳತನ ( Mysore ) ಮಾಡುತ್ತಿದ್ದಳು ಅನ್ನುವುದೇ ಯಕ್ಷ ಪ್ರಶ್ನೆ
ಮೈಸೂರು : ಪರಿಚಯಸ್ಥರ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳಿಯೊಬ್ಬಳು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಬಂಧಿತಳನ್ನು ಮೈಸೂರು ( Mysore ) ಆಲನಹಳ್ಳಿ ನಿವಾಸಿ ಪ್ರಭಾಮಣಿ ಎಂದು ಗುರುತಿಸಲಾಗಿದೆ. ಟೈಲರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಈಕೆ 5 ಮನೆಗಳ ಮಾಲಕಿ ಅನ್ನುವುದು ಗೊತ್ತಾಗಿದೆ.
ಕೆಲ ವಾರಗಳ ಹಿಂದೆ, ಜೂನ್ 30ರಂದು ಕುಮಾರ್ ಅನ್ನುವವರ ಪತ್ನಿ ಪ್ರಭಾಮಣಿ ಮಗಳ ಬಳಿಗೆ ಫಿಸಿಯೋಥೆರಪಿಗಾಗಿ ಬಂದಿದ್ದರು. ಚಿಕಿತ್ಸೆಗಾಗಿ ಮನೆಗೆ ಬಂದವರನ್ನು ಚೆನ್ನಾಗಿಯೇ ಮಾತನಾಡಿಸಿದ್ದ ಪ್ರಭಾಮಣಿ, ಕೆಲವೇ ಹೊತ್ತಿನಲ್ಲಿ ಜಾಗ ಖಾಲಿ ಮಾಡಿದ್ದಳು. ಸಂಜೆ 7.30ರ ಹೊತ್ತಿಗೆ ಕುಮಾರ್ ಮನೆಗೆ ಬಂದ ಪ್ರಭಾಮಣಿ, 190 ಗ್ರಾಮ್ ಚಿನ್ನ,3 ಕೆಜಿ ಬೆಳ್ಳಿ ಮತ್ತು 90 ಸಾವಿರ ದೋಚಿದ್ದಾಳೆ.
ನಕಲಿ ಕೀ ಬಳಸಿ ಮನೆ ಲೂಟಿ ಮಾಡಿದ ಪ್ರಭಾಮಣಿ ಏನೂ ಆಗಿಲ್ಲ ಅನ್ನುವಂತೆ ಮತ್ತೆ ಮನೆಗೆ ವಾಪಾಸ್ ಬಂದಿದ್ದಾಳೆ. ಈ ನಡುವೆ ಕುಮಾರ್ ಅವರ ಪತ್ನಿ ಚಿಕಿತ್ಸೆ ಮುಗಿಸಿ ಮನೆಗೆ ಬಂದ್ರೆ ಮನೆಯನ್ನು ಗುಡಿಸಿ ಗುಂಡಾಂತರ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಪ್ರಭಾಮಣಿಯೇ ಕಳ್ಳಿ ಎಂದು ಗೊತ್ತಾಗಿದೆ.
ಬಗಲ್ ಮೇ ಕಳ್ಳಿಯ ಕಥೆ ಕೇಳಿ ಅಚ್ಚರಿಯಾಗಿದ್ದಾರೆ. ಆದರೆ ಈಗ ಗೊತ್ತಾಗಿರುವ ಮಾಹಿತಿ ಪ್ರಕಾರ ಕಳೆದ 2 ವರ್ಷದಲ್ಲಿ ಈಕೆ 20ಕ್ಕೂ ಹೆಚ್ಚು ಮನೆಗಳನ್ನು ದೋಚಿದ್ದಾಳೆ ಎಂದು ಗೊತ್ತಾಗಿದೆ. ಆಂದ ಹಾಗೇ ಎಲ್ಲವೂ ಕೂಡಾ ನಕಲಿ ಕೀ ಬಳಸಿ ಎಸಗಿದ ಕೃತ್ಯಗಳು ಎಂದು ಗೊತ್ತಾಗಿದೆ.
Discussion about this post