ಮೋದಿ ಎರಡನೇ ಬಾರಿಗೆ ಕೂಡ ಭಾರಿ ಅಂತರದಿಂದ ಗೆದ್ದರು. ಅವರಿಗೆ ಸ್ವಹಿತಾಸಕ್ತಿ ಇಲ್ಲ. ಅವರನ್ನು ಅವರು ದೇಶಕ್ಕಾಗಿ ಅರ್ಪಿಸಿಕೊಂಡಿದ್ದರಿಂದ ಮತ್ತೆ ಪ್ರಧಾನಿಯಾಗಿದ್ದಾರೆ. ಮೋದಿ ಯಾವತ್ತೂ ದೇಶ, ದೇಶವೆಂದು ಹೇಳುತ್ತಾರೆ. ಹಾಗೇ ಎಲ್ಲರೂ ದೇಶಕ್ಕಾಗಿ ದುಡಿಯಬೇಕು ಎಂದು ಹೇಳುತ್ತಾರೆ. ನಾನು ಸಂಸದನಂತೆ ಸರಳವಾಗಿ ಇರುತ್ತೇನೆ ಎನ್ನುತ್ತಾರೆ ಎಂದು ನರೇಂದ್ರ ಮೋದಿಯವರನ್ನು ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅಚ್ಚರಿ ಅನ್ನುವಂತೆ ಹೊಗಳಿದ್ದಾರೆ.
ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಚಹಾ ಮಾರಿದ್ದರು. ಅವರಿಗೆ ಕಷ್ಟ ಗೊತ್ತು. ಕಷ್ಟಪಟ್ಟು ಮೇಲೆದ್ದು ಬಂದಿದ್ದರಿಂದ ಇವತ್ತು ಇಷ್ಟು ಸರಳವಾಗಿ ಇರುತ್ತಾರೆ ಎಂದಿದ್ದಾರೆ.
ಮೋದಿಯವರನ್ನು ಕಂಡರೆ ದೇವೇಗೌಡರು, ಕುಮಾರಸ್ವಾಮಿ ಉರಿದು ಬೀಳುತ್ತಾರೆ. ಮೋದಿ ಹೆಸರು ಕೇಳಿದರೆ ದಳಪತಿಗಳಿಗೆ ಆಲರ್ಜಿ ಅಂತಹುದರಲ್ಲಿ ಜಿಟಿಡಿ ದೇವೇಗೌಡರನ್ನು ಹೊಗಳಿರುವುದು ಅಚ್ಚರಿಗೆ ಕಾರಣವಾಗಿದೆ.
Discussion about this post