ಭುವನೇಶ್ವರ : ಹಳಿ ತಪ್ಪಿದ ಕಾರಣ ಆರು ಬೋಗಿಗಳನ್ನು ಹೊಂದಿದ್ದ ಗೂಡ್ಸ್ ರೈಲು ನದಿಗೆ ಉರುಳಿ ಬಿದ್ದ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಅಂಗುಲ್ – ತಲ್ವಾರ್ ಮಾರ್ಗ ಮಧ್ಯೆ ಈ ಘಟನೆ ನಡೆದಿದ್ದು, ಗೋಧಿ ತುಂಬಿದ್ದ ಬೋಗಿಗಳು ನದಿ ಪಾಲಾಗಿವೆ. ಇದರಿಂದ ಅಪಾರ ಪ್ರಮಾಣದ ಗೋಧಿ ನೀರು ಪಾಲಾಗಿದೆ.
ಇನ್ನು ಇಂಜಿನ್ ರೈಲು ಹಳಿಯಲ್ಲೇ ಉಳಿದ ಕಾರಣ ಚಾಲಕ ಹಾಗೂ ಇತರ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಳಿಯ ತಾಂತ್ರಿಕ ದೋಷವೇ ಘಟನೆ ಕಾರಣ ಎನ್ನಲಾಗಿದೆ.
ಮಂಗಳವಾರ ಮುಂಜಾನೆ 2.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ರೈಲು ಫಿರೋಜ್ ಪುರದಿಂದ ಖುರ್ದಾ ರಸ್ತೆಯತ್ತ ಹೋಗುತ್ತಿತ್ತು ಎಂದು ಗೊತ್ತಾಗಿದೆ. ಇದೀಗ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಘಟನೆ ನಡೆದ ನಂದಿರಾ ಸೇತುವೆ ಹಳಿಗಳನ್ನು ರಿಪೇರಿ ಮಾಡಲಾಗುತ್ತಿದೆ. ಇನ್ನು ಈ ಮಾರ್ಗದಲ್ಲಿ ಸಂಚರಿಸಬೇಕಾಗಿದ್ದ 12 ರೈಲುಗಳನ್ನು ರದ್ದುಗೊಳಿಸಲಾಗಿದ್ದು, 8 ರೈಲುಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ.
In view of the derailment of a goods train between Angul and Talcher Road single line railway section, the train services in Dhenkanal-Sambalpur Rail Section have been affected.
Discussion about this post