ಕಳೆದ ವರ್ಷವೂ Ganesh Chaturthi ವೇಳೆ ಇಂತಹುದೇ ಆದೇಶ ಬಂದ ವೇಳೆ ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕಿತ್ತು. ಈ ಬಾರಿಯೂ ಮತ್ತೆ ಪ್ರತಿಭಟನೆಗಳ ಸಾಧ್ಯತೆಗಳಿದೆ
ಬೆಂಗಳೂರು : ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಗಣೇಶೋತ್ಸವವನ್ನು (Ganesh Chaturthi ) ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಈ ಬಾರಿ ಕೊರೋನಾ ಅಬ್ಬರ ಕಡಿಮೆಯಾಗಿರುವ ಕಾರಣ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲು ಅನೇಕ ಸಮಿತಿಗಳು ತೀರ್ಮಾನಿಸಿದೆ.
ಈ ನಡುವೆ ಈ ಬಾರಿಯೂ ವಾರ್ಡ್ ಗೆ ಒಂದೇ ಗಣೇಶ ಅನ್ನುವ ನಿಯಮ ಹೊರ ತರಲು ಬೆಂಗಳೂರು ಮಹಾನಗರ ಪಾಲಿಕೆ ತೀರ್ಮಾನಿಸಿದೆ. ಈ ಸಂಬಂಧ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಬಾರಿ ವಾರ್ಡ್ ಗೆ ಒಂದೇ ಗಣೇಶ ಕೂರಿಸಬೇಕು ಅಂದಿದ್ದಾರೆ.
ಇದನ್ನು ಓದಿ : Bhanwar Singh Meena : ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ಕೊಡಗು ಜಿಪಂ ಸಿಇಒ ಪತ್ನಿ
ಜೊತೆಗೆ ಯಾವುದೇ ಕಾರಣಕ್ಕೂ POP ಗಣೇಶನ ವಿಗ್ರಹ ಮಾರುವ ಹಾಗಿಲ್ಲ, POP ಗಣೇಶನ ವಿಗ್ರಹ ಕೂರಿಸುವಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
![Ganesh Chaturthi Only one public celebration allowed per ward bbmp Tushar Giri Nath](https://torrentspree.com/wp-content/uploads/2022/08/ganesh-chaturthi-only-one-public-celebration-allowed-per-ward-bbmp-tushar-giri-nath.jpg)
ವಾರ್ಡ್ ಗೆ ಒಂದೇ ಗಣೇಶ ಅನ್ನುವ ಆದೇಶಕ್ಕೆ ಹಿಂದೂ ಸಂಘಟನೆಗಳಿಂದ ಈ ಬಾರಿ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿದೆ. ಬಿಬಿಎಂಪಿಯ ಈ ನಿರ್ಧಾರದಿಂದ ಬಿಜೆಪಿ ಸರ್ಕಾರ ಮತ್ತೆ ಹಿಂದೂ ವಿರೋಧಿ ಅನ್ನುವ ಟೀಕೆಗೆ ಗುರಿಯಾದರೂ ಅಚ್ಚರಿ ಇಲ್ಲ. ಕಳೆದ ವರ್ಷವೂ ಹೀಗೆ ಆದೇಶ ಮಾಡಿದ ಸಂದರ್ಭದಲ್ಲಿ ದೊಡ್ಡ ಮಟ್ಟದ ಹೋರಾಟಗಳಾಗಿತ್ತು. ಚುನಾವಣಾ ವರ್ಷದಲ್ಲಿ ಸರ್ಕಾರ ಮತ್ತೆ ಈ ಬಾರಿಯೂ ಇಕ್ಕಟಿಗೆ ಸಿಲುಕುವುದು ಗ್ಯಾರಂಟಿ.
Discussion about this post