ಪಾಕ್ ಮಹಿಳೆಯರಿಗೆ ಮೂಲಭೂತ ಹಕ್ಕುಗಳೇ ಇಲ್ಲದಂತಾಗಿದೆ. ಅವೆಲ್ಲವನ್ನೂ ಮರೆತ ಖುರೇಷಿ ಭಾರತದ ಬಗ್ಗೆ ಮಾತನಾಡುತ್ತಿರುವುದು ದುರಂತವೇ ಸರಿ
ನವದೆಹಲಿ : ಕರ್ನಾಟಕದಲ್ಲಿ ಪ್ರಾರಂಭವಾದ ಹಿಜಾಬ್ ವಿವಾದ ಪಡೆಯುತ್ತಿರುವ ತಿರುವುಗಳನ್ನು ಗಮನಿಸಿದ್ರೆ, ರಾಜ್ಯ ಗುಪ್ತಚರ ಇಲಾಖೆ ಎಡವಿದೆಯೇ ಅನ್ನುವ ಅನುಮಾನ ಕಾಡಲಾರಂಭಿಸಿದೆ. ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲೇ ಆಳ ಅಗಲವನ್ನು ಗುಪ್ತಚರ ಇಲಾಖೆ ಅರಿಯುತ್ತಿದ್ರೆ ಪರಿಸ್ಥಿತಿ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರಲಿಲ್ಲ. ಪ್ರಕರಣ ಶುರುವಾದ ದಿನವೇ ಪೊಲೀಸ್ ತನಿಖೆ ಆದೇಶ ಕೊಟ್ಟಿರುತ್ತಿದ್ರೆ, ಬಿಜೆಪಿ ನಾಯಕರು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಮೇಯ ಕೂಡಾ ಬರುತ್ತಿರಲಿಲ್ಲ.
ಈ ನಡುವೆ ಹಿಜಾಬ್ ವಿಚಾರದಲ್ಲಿ ಪಾಕಿಸ್ತಾನ ಕೂಡಾ ಮೂಗು ತೂರಿಸಿದ್ದು, ಈ ಸಂಬಂಧ ಟ್ವೀಟ್ ಮಾಡಿರುವ ಪಾಕ್ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ, ಮುಸ್ಲಿಂ ಮಕ್ಕಳನ್ನು ಶಿಕ್ಷಣದಿಂದ ವಂಚಿಸುವುದು, ಮೂಲಭೂತ ಮಾನವ ಹಕ್ಕುಗಳ ಘೋರ ಉಲ್ಲಂಘನೆ ಅಂದಿದ್ದಾರೆ. ಯಾರಿಗಾದ್ರೂ ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಹಿಜಾಬ್ ಧರಿಸಿದ್ದಕ್ಕಾಗಿ ಅವರನ್ನು ಭಯಭೀತಗೊಳಿಸುವುದು ಸಂಪೂರ್ಣ ದಬ್ಬಾಳಿಕೆ ಅಂದಿದ್ದಾರೆ.
ಪಾಕಿಸ್ತಾನವೇ ಸಂಕಷ್ಟದಲ್ಲಿದೆ. ಅಲ್ಲಿ ಮಹಿಳೆಯರಿಗೆ ಸರಿಯಾದ ಶಿಕ್ಷಣ ಕೊಡಲು ಇಮ್ರಾನ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಪಾಕ್ ಮಹಿಳೆಯರಿಗೆ ಮೂಲಭೂತ ಹಕ್ಕುಗಳೇ ಇಲ್ಲದಂತಾಗಿದೆ. ಅವೆಲ್ಲವನ್ನೂ ಮರೆತ ಖುರೇಷಿ ಭಾರತದ ಬಗ್ಗೆ ಮಾತನಾಡುತ್ತಿರುವುದು ದುರಂತವೇ ಸರಿ.
Depriving Muslim girls of an education is a grave violation of fundamental human rights. To deny anyone this fundamental right & terrorise them for wearing a hijab is absolutely oppressive. World must realise this is part of Indian state plan of ghettoisation of Muslims.
— Shah Mahmood Qureshi (@SMQureshiPTI) February 9, 2022
Discussion about this post