ಬೆಂಗಳೂರು : ದೀಪಾವಳಿ ಹಬ್ಬ ಬಂದ್ರೆ ಸಾಕು ಕೆಲವು ಕಂಪನಿಗಳ ವಿರುದ್ಧ ಹಿಂದೂಗಳು ಆಕ್ರೋಶ ಶುರುವಿಟ್ಟುಕೊಳ್ಳುತ್ತಾರೆ. ಅದಕ್ಕೆ ಕಾರಣ ಆ ಕಂಪನಿಗಳು ಹೊರ ತರುವ ಜಾಹೀರಾತು. ಕಳೆದ ಹಲವು ವರ್ಷಗಳಿಂದ ಇದು ಸಂಪ್ರದಾಯ ಅನ್ನುವಂತೆ ನಡೆದುಕೊಂಡು ಬರುತ್ತಿದೆ.
ಮೊನ್ನೆ ಮೊನ್ನೆ ಪ್ಯಾಬ್ ಇಂಡಿಯಾ ಹೀಗೆ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪ ಎದುರಿಸಿ ಕೊನೆಗೆ ತಪ್ಪಾಯ್ತು ಕ್ಷಮಿಸಿ ಅಂದಿದೆ. ಹಿಂದೂಗಳ ಹಬ್ಬ ದೀಪಾವಳಿಗೆ ಉರ್ದು ಲಿಂಕ್ ಮಾಡಿ, ಜೈಷ್ನ್ ಎ ರಿವಾಜ್ ಎಂದು ಕರೆದಿದ್ದ ಪ್ಯಾಬ್ ಇಂಡಿಯಾ, ದೀಪಾವಳಿಯ ಹೊಸ ಬಟ್ಟೆ ಕಲೆಕ್ಷನ್ಗೆ ಉರ್ದುವಿನಲ್ಲಿ ಜೈಷ್ನ್ ಎ ರಿವಾಜ್ ಎಂದು ಹೆಸರಿಟ್ಟಿತ್ತು. ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಟ್ವೀಟ್ ಡಿಲೀಟ್ ಮಾಡಿದ ಸಂಸ್ಥೆ, ಜಾಹೀರಾತು ಹಿಂಪಡೆದಿದೆ.
‘ ಜೈಷ್ನ್ ಎ ರಿವಾಜ್ ‘ ಎಂಬುದು ಕಂಪನಿಯು ದೀಪಾವಳಿ ಬಟ್ಟೆ ಕಲೆಕ್ಷನ್ಗೆ ಇಟ್ಟಿದ್ದ ಹೆಸರಲ್ಲ. ದೀಪಾವಳಿ ಕಲೆಕ್ಷನ್ ‘ಝಿಲ್ ಮಿಲ್ ಸೆ ದಿವಾಲಿ’ ಹೆಸರಲ್ಲಿ ಬಿಡುಗಡೆ ಮಾಡುತ್ತೇವೆ ಅಂದಿದೆ.
How can anyone even think like that? These are totally sick minds!! If you r an atheist, keep it up to u, but don't hurt people! It's about the sentiments.
— Rahul B. (@rbamdale19) April 15, 2021
I personally #BoycottCeat from now. pic.twitter.com/V9xV7fAA8I
ಅಷ್ಟು ಹೊತ್ತಿಗೆ boycott fabindia ಹ್ಯಾಶ್ ಟ್ಯಾಗ್ ವೈರಲ್ ಆಗಿಯಾಗಿತ್ತು. ಸಾಕಷ್ಟು ನಷ್ಟವನ್ನು ಸಂಸ್ಥೆ ಅನುಭವಿಸಿತ್ತು.
ಇದೀಗ ceat tyres ಸರದಿ. ಅಮಿರ್ ಖಾನ್ ಅವರನ್ನು ಬಳಸಿಕೊಂಡು ಜಾಹೀರಾತು ಸಿದ್ದ ಮಾಡಿರುವ ಸಂಸ್ಥೆ ಪಟಾಕಿ ಒಡೆಯಬೇಡಿ ಅನ್ನುವ ಸಂದೇಶವನ್ನು ಸಾರಿದೆ. ಇದೀಗ ಇದು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದು boycott ceat tyres ಅಭಿಯಾನ ಪ್ರಾರಂಭವಾಗಿದೆ.ಈ ಬಗ್ಗೆ ಸಿಯೆಟ್ ಕಂಪನಿಗೆ ಪತ್ರ ಬರೆದಿರುವ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ, ದೀಪಾವಳಿಗೆ ಪಟಾಕಿ ಸಿಡಿಸಬಾರದೆಂಬ ಜಾಹೀರಾತನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಹಾಗೇ ನೋಡಿದರೆ ಸಿಯೆಟ್ ಕಂಪನಿಗೆ ಹಿಂದೂಗಳ ಆಕ್ರೋಶ ತುತ್ತಾಗುತ್ತಿರುವುದು ಹೊಸದೇನಲ್ಲ, ಹಿಂದೊಮ್ಮೆ ಹಿಂದೂ ಧಾರ್ಮಿಕ ಗುರುಗಳನ್ನು ಅವಮಾನ ಮಾಡಿದೆ ಅನ್ನುವ ಟೀಕೆಗೆ ಗುರಿಯಾಗಿತ್ತು.
Discussion about this post