ಬೆಂಗಳೂರು : ದೇಶದಲ್ಲಿ ಕಲ್ಲಿದ್ದಲು ಕೊರತೆಯಾಗಿದೆ ಅನ್ನುವ ಸುದ್ದಿಗಳು ಬಂದಾಗ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವರು, ದೇಶದಲ್ಲಿ ಸಿಕ್ಕಾಪಟ್ಟೆ ಕಲ್ಲಿದ್ದಲು ದಾಸ್ತಾನು ಇದೆ. ಕೊರತೆ ಅನ್ನುವ ಪ್ರಶ್ನೆಯೇ ಇಲ್ಲ ಅಂದಿದ್ದರು. ಆದರೆ ಇದನ್ನು ಅನೇಕ ರಾಜ್ಯಗಳು ಒಪ್ಪಿರಲಿಲ್ಲ. ಆದರೆ ಇದೀಗ ಕೇಂದ್ರ ಸಚಿವರು ಹೇಳಿದ್ದು ಸುಳ್ಳು ಅನ್ನುವುದಕ್ಕೆ ಸಾಕ್ಷಿ ದೊರೆತಿದ್ದು, ಕರ್ನಾಟಕದಲ್ಲಿ ಪವರ್ ಕಟ್ ಪ್ರಾರಂಭವಾಗಿದೆ.
ಮತ್ತೊಂದು ಕಡೆ ಕಲ್ಲಿದ್ದಲು ಕೊರತೆಯಿಂದ ರಾಜ್ಯದ ವಿದ್ಯುತ್ ಉತ್ಪಾದನಾ ಕ್ಷೇತ್ರದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ರಾಜ್ಯ ಹೇಳಿಕೊಂಡು ಬರುತ್ತಿದೆ. ಆದರೆ ಕಳೆದ 2 ತಿಂಗಳಿಗೆ ಹೋಲಿಸಿದರೆ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಶೇ 52ರಷ್ಟು ವಿದ್ಯುತ್ ಉತ್ಪಾದನೆ ಕುಸಿತ ಕಂಡಿದೆ. ರಾಯಚೂರು,ಬಳ್ಳಾರಿ,ಯಲ್ಲಿ ಎರಡು ಉತ್ಪಾದನಾ ಘಟಕಗಳು ಈಗಾಗಲೇ ಸ್ಥಗಿತಗೊಂಡಿದೆ.
ಈ ಕಾರಣದಿಂದಲೇ ಬೆಂಗಳೂರು ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ವಿದ್ಯುತ್ ಕಡಿತ ಪ್ರಾರಂಭಗೊಂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಿರೀಕ್ಷೆಯಂತೆ ಕಗ್ಗತ್ತಲು ಆವರಿಸಲಿದೆ.
ಇನ್ನು ಬೆಂಗಳೂರಿನಲ್ಲಿ ಪವರ್ ಕಟ್ ಕುರಿತಂತೆ ಅಧಿಕೃತ ಪ್ರಕಟಣೆ ಹೊರ ಬಿದ್ದಿದ್ದು, ಎಲ್ಲೆಲ್ಲಿ ಪವರ್ ಅನ್ನುವ ವಿವರ ಇಲ್ಲಿದೆ.
ಮಧ್ಯಾಹ್ನ 1.30 ರಿಂದ 4 pm : ಜೆಪಿ ನಗರ ಮೂರನೇ ಹಂತ, ಬಿಜಿ ರೋಡ್ ಜಯನಗರ, ರಾಘವೇಂದ್ರ ಅಪಾರ್ಟ್ ಮೆಂಟ್, ಕೋರಮಂಗಲ ಮುನೇಶ್ವರ ಟೆಂಪಲ್ ಭಾಗದಲ್ಲಿ ವಿದ್ಯುತ್ ಸರಬರಾಜು ಇರೋದಿಲ್ಲ
ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 : HSR Layout ವಿಭಾಗದ ಪ್ರದೇಶ, ಬಿಕೆ ಸರ್ಕಲ್, ಸೌರಭ್ ನಗರ, ಹೊಸ ರಸ್ತೆ, ಕೋನಪ್ಪ ಅಗ್ರಹಾಕರ ಹಾಗೂ ಕ್ಲಬ್ ರೋಡ್ ಸರ್ಕಲ್ ಪ್ರದೇಶದಲ್ಲಿ ಪವರ್ ಕಟ್
ಬೆಳಗ್ಗೆ 10.30 ರಿಂದ ಸಂಜೆ 5.30ರ ತನಕ : RBI Layout, SBM Colony, Hari Nagar, Eshwara Layout and Shivashakti Nagar in Jayanagar division
Discussion about this post