ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ನಿಧನದ ಹಿನ್ನಲೆಯಲ್ಲಿ ಅವರ ನೆನಪುಗಳನ್ನು ಶಾಶ್ವತವಾಗಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಹೀಗಾಗಿ ಅಭಿಮಾನಿಗಳು ಪುತ್ಥಳಿ ಸ್ಥಾಪನೆಗೆ ಮುಂದಾಗಿದ್ದು, ಸ್ಥಳವನ್ನೂ ಗುರುತು ಮಾಡಿದ್ದಾರೆ.
ಆದರೆ ಇದೀಗ ಪುತ್ಥಳಿ ಸ್ಥಾಪನೆಗೆ ಮುಂದಾಗಿರುವ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಬಂದಿದ್ದು, ಎಲ್ಲೆಂದರಲ್ಲಿ ಪುತ್ಥಳಿ ಸ್ಥಾಪಿಸದಂತೆ BBMP ಮನವಿ ಮಾಡಿದೆ. ಒಂದು ವೇಳೆ ಹೀಗೆ ಸ್ಥಾಪಿಸಿದ್ರೆ ಅದು ಅನಧಿಕೃತವಾಗಲಿದ್ದು, ಪುತ್ಥಳಿ ತೆರವುಗೊಳಿಸುವುದು ಅನಿವಾರ್ಯವಾಗಲಿದೆ. ಈಗಾಗಲೇ ಈ ಸಂಬಂಧ ಹೈಕೋರ್ಟ್ ಆದೇಶವೊಂದನ್ನು ಹೊರಡಿಸಿದ್ದು, ಅನಧಿಕೃತ ಪುತ್ಥಳಿ ತೆರವಿಗೆ ಆದೇಶಿಸಿದೆ. ಹೀಗಾಗಿ ಅನುಮತಿ ಪಡೆಯದೆ ಪುತ್ಥಳಿ ಸ್ಥಾಪಿಸಬೇಡಿ ಅಂದಿದೆ.
ಒಂದು ವೇಳೆ ಸ್ಥಾಪಿಸುವುದಾಗಿದ್ರೆ ಅಗತ್ಯ ಅನುಮತಿಯನ್ನು ಬಿಬಿಎಂಪಿಯಿಂದ ಪಡೆಯಬೇಕಾಗಿದ್ದು, ಬೆಂಗಳೂರು ಸಂಚಾರ ಪೊಲೀಸರು ಕೂಡಾ ಇದಕ್ಕೆ NOC ಕೊಡಬೇಕಾಗುತ್ತದೆ. ಹೀಗಾಗಿ ಫುಟ್ ಪಾತ್, ಸಾರ್ವಜನಿಕರು ಓಡಾಡುವ ಸ್ಥಳ, ವಾಹನ ಸಂಚಾರಕ್ಕೆ ಅಡ್ಡಿಯಾಗೋ ಸ್ಥಳಗಳನ್ನು ಪುತ್ಥಳಿಗೆ ಗುರುತಿಸಬೇಡಿ ಅಂದಿದೆ.
Discussion about this post