ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರವರು. ಕುಡಿಯಬೇಡಿ, ಕುಡಿದು ದೇಶ ದೇಹ ಹಾಳು ಮಾಡಬೇಡಿ ಅಂದ ದಾರ್ಶನಿಕ. ಆದರೆ ಇಂತಹ ವ್ಯಕ್ತಿಯ ಪ್ರತಿಮೆಯ ಮುಂದೇಯ ಮದ್ಯದಂಗಡಿ ತೆರೆಯಲು ಸರ್ಕಾರ ತೆಗೆಯಲು ಅನುಮತಿ ಕೊಟ್ಟಿದೆ.
ಇದಕ್ಕಿಂದ ದೊಡ್ಡ ವಿಪರ್ಯಾಸ ಮತ್ತೊಂದಿಲ್ಲ. ಸರ್ಕಾರ ಕುಡಿಯಬೇಡಿ ಅನ್ನುತ್ತದೆ, ಮತ್ತೊಂದು ಕಡೆಯಿಂದ ಆದಾಯ ಮೂಲಕ್ಕೆ ಅಬಕಾರಿಯೇ ದೊಡ್ಡ ಸೋರ್ಸ್ ಆಗಿರುವುದರಿಂದ ಕುಡಿಯಲು ಪ್ರೇರೆಪಿಸುತ್ತದೆ.
ಇದೀಗ ಚಿನ್ನಸ್ವಾಮಿ ಕ್ರೀಡಾಂಗಣ ಪಕ್ಕದಲ್ಲಿರುವ ಗಾಂಧಿ ಪಾರ್ಕ್ ಎದುರುಗಡೆಯ ಕಟ್ಟಡದಲ್ಲಿ ಟಾನಿಕ್ ಅನ್ನುವ ಮದ್ಯ ಮಾರಾಟ ಸಂಸ್ಥೆಗೆ ಅನುಮತಿ ನೀಡಲಾಗಿದೆ.
ಏಷ್ಯಾದ ಅತೀ ದೊಡ್ಡ ಮದ್ಯ ಮಾರಾಟ ಸಂಸ್ಥೆ ಇದಾಗಿರಲಿದ್ದು, ಇಡೀ ಮಳಿಗೆಯನ್ನು ಸುತ್ತು ಹಾಕಲು 45 ನಿಮಿಷ ಬೇಕಂತೆ. ಇನ್ನು ವಿದೇಶಿ ದುಬಾರಿ ಮದ್ಯಗಳು ಇಲ್ಲಿ ಲಭ್ಯವಾಗಲಿದ್ದು, ವಿದೇಶಿಯ ಹತ್ತು ಹಲವು ಬ್ರಾಂಡ್ ಗಳು ಒಂದೇ ಸೂರಿನಡಿಯಲ್ಲಿ ಲಭ್ಯವಾಗಿಯೂ ಇದು ಪ್ರಸಿದ್ಧಿ ಪಡೆಯಲಿದೆ.
ಆದರೆ ಸರ್ಕಾರ ಅಂಗಡಿ ತೆರೆಯಲು ಅನುಮತಿ ಕೊಡುವ ಮುನ್ನ ಯೋಚಿಸಬೇಕಿತ್ತು.
ಗಾಂಧಿ ಮಾರ್ಗದಲ್ಲಿ ನಡೆಯುತ್ತಿದ್ದರೆ ಕಣ್ಣಿಗೆ ರಾಚುವ ಈ ಮದ್ಯದಂಗಡಿ ಎದುರಾಗುತ್ತದೆ. ಗಾಂಧಿ ಮಾರ್ಗದಲ್ಲಿ ಸಾಗು ಎಂಬ ಗಾಂಧಿ ವಾದಿಗಳ ಹಿತ ನುಡಿ ಇಲ್ಲಿ ಅಪಹಾಸ್ಯಕ್ಕೀಡಾಗಿದೆ. ವಿಶೇಷ ಎಂದರೆ ಮದ್ಯಪಾನದ ದುಷ್ಪರಿಣಾಮಗಳ ವಿರುದ್ಧ ಸಾಮಾಜಿಕ ಕ್ರಾಂತಿ ಮಾಡಿದ, ಎಲ್ಲಾ ಕೆಡುಕುಗಳ ಮೂಲ ಮದ್ಯಪಾನ ಎಂದು ಸಾರಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪುತ್ಥಳಿ ಸಮೀಪವೇ ಈ ಮದ್ಯದಂಗಡಿ ತಲೆ ಎತ್ತುತ್ತಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈನ್ನಡಿ.
ಪ್ರತಿಮೆಗೂ ಕಣ್ಣು ತೆರೆಯುವ ಭಾಗ್ಯವಿದ್ದರೆ ನಿತ್ಯ ಎಣ್ಣೆ ಬಾಟಲಿಗಳನ್ನೇ ನೋಡಿಕೊಂಡು ಇರಬೇಕಾಗಿತ್ತು.
ಅಧಿಕಾರಿಗಳಿಗಾದರೂ ಬುದ್ದಿ ಬೇಡವ್ವ…. ಪಾಪ ಅಧಿಕಾರಿಗಳು ಗಾಂಧಿಯನ್ನು ಮರೆತು ಅದೆಷ್ಟೋ ವರ್ಷಗಳೇ ಆಗೋಯ್ತು.
Discussion about this post