ನವದೆಹಲಿ : ರಾಷ್ಟ್ರ ರಾಜಧಾನಿಗೆ ಭೇಟಿ ನೀಡುವ ಪ್ರತಿಯೊಬ್ಬರು ಇಂಡಿಯಾ ಗೇಟ್ ಬಳಿ ತೆರಳುತ್ತಾರೆ, ಅಮರ್ ಜವಾನ್ ಜ್ಯೋತಿಗೆ ನಮಿಸುತ್ತಾರೆ. ಆದರೆ ಇಂದಿನಿಂದ ಇಂಡಿಯಾ ಗೇಟ್ ಬಳಿಯ ಅಮರ್ ಜ್ಯೋತಿ ಉರಿಯೋದಿಲ್ಲ. ಶುಕ್ರವಾರ ಈ ಜ್ಯೋತಿಯನ್ನು ಶಾಂತಗೊಳಿಸಲಾಗುತ್ತಿದೆ.
ಬಾಂಗ್ಲಾ ವಿಮೋಚನೆಗಾಗಿ 1971ರಲ್ಲಿ ಪಾಕ್ ವಿರುದ್ಧ ನಡೆದ ಯುದ್ದದಲ್ಲಿ ಭಾರತ ವಿಜಯ ಪತಾಕೆ ಹಾರಿಸಿತ್ತು. ಈ ಹೋರಾಟದಲ್ಲಿ ಮಡಿದ ಸೈನಿಕರ ನೆನಪಿಗಾಗಿ ಅಮರ್ ಜವಾನ್ ಜ್ಯೋತಿಯನ್ನು ಸ್ಥಾಪಿಸಲಾಗಿತ್ತು. ಆಗಿನ ಪ್ರಧಾನಿ ಇಂದಿರಾ ಗಾಂಧಿ 1971ರಲ್ಲಿ ಇದನ್ನು ಉದ್ಘಾಟಿಸಿದ್ದರು.
ಈ ನಡುವೆ ಅಮರ್ ಜ್ಯೋತಿ ಸ್ಥಳದಿಂದ 400 ಮೀಟರ್ ಅಂತರದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕವಿದ್ದು, ಅಲ್ಲೂ ಜ್ಯೋತಿ ಉರಿಯುತ್ತಿದೆ. ಇದೀಗ ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯೊಂದಿಗೆ ವಿಲೀನ ಮಾಡಲಾಗುತ್ತಿದೆ.
![national war memorial1](https://torrentspree.com/wp-content/uploads/2022/01/national-war-memorial1.jpg)
ಅಂದ ಹಾಗೇ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು 2019ರ ಫೆಬ್ರವರಿ 25 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.
![national war memorial](https://torrentspree.com/wp-content/uploads/2022/01/national-war-memorial.jpg)
Discussion about this post