ಕಾಬೂಲ್ : ಕನ್ನಡದ ಪತ್ರಿಕೆಯೊಂದಕ್ಕೆ ಶಾಂತಿದೂತರಂತೆ ಕಾಣಿಸಿಕೊಂಡಿದ್ದ ತಾಲಿಬಾನಿಗಳು ಇದೀಗ ರಕ್ಕಸರಾಗಿದ್ದಾರೆ. ತಾಲಿಬಾನಿ ಉಗ್ರರ ರಕ್ತದಾಹ ಇನ್ನೂ ಹೆಚ್ಚಾಗಿದ್ದು ಪಂಜ್ಶೀರ್ ಪ್ರಾಂತ್ಯದಲ್ಲಿ ರಕ್ತದ ಕೋಡಿ ಹರಿಸಿದ್ದಾರೆ.
ಈಗಾಗಲೇ ಪತ್ರಕರ್ತರು ಸೇರಿದಂತೆ ಮಹಿಳೆಯರನ್ನು ಕೀಳಾಗಿ ಕಾಣುತ್ತಿರುವ ತಾಲಿಬಾನಿಗಳು ನಾರ್ದನ್ ಅಲಯನ್ಸ್ ಯೋಧರ ಹೋರಾಟವನ್ನು ಎದುರಿಸಿ ಪಂಜ್ಶೀರ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಪಾಕಿಸ್ತಾನದ ಬೆಂಬಲ ಬೇರೆ ಸಿಕ್ಕಿತ್ತು. ಯಾವಾಗ ಪಂಜ್ಶೀರ್ ತಾಲಿಬಾನಿ ವಶವಾಯ್ತೋ ಮನೆ ಮನೆಗೆ ನುಗ್ಗುತ್ತಿರುವ ಉಗ್ರರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡುತ್ತಿದ್ದಾರೆ.
ಹೀಗಾಗಿ ತಾಲಿಬಾನಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜನರು ಗ್ರಾಮಗಳನ್ನು ತೊರೆಯುತ್ತಿದ್ದಾರೆ.ಈ ನಡುವೆ ಇನ್ನು ಹಂಗಾಮಿ ಉಪಾಧ್ಯಕ್ಷ, ನಾರ್ದನ್ ಅಲಯನ್ಸ್ ಮುಖ್ಯಸ್ಥ ಅಮರುಲ್ಲಾ ಸಲೇಹ್ ಸಹೋದರ ರೋಹುಲ್ಲಾ ಸಲೇಹ್ ನನ್ನು ತಾಲಿಬಾನಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
Discussion about this post