ದೇಶದಲ್ಲಿ ಇದೀಗ ಬಹುತೇಕ ಯುವ ಜನತೆಯನ್ನು ಆಕ್ರೋಶಕ್ಕೆ ಗುರಿ ಮಾಡಿರುವುದು ಮೀಸಲಾತಿ ಅನ್ನುವ ಅವಕಾಶ. ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಮೀಸಲಾತಿ ಇಷ್ಟು ವರ್ಷಗಳವರೆಗೆ ಇದ್ದರೆ ಸಾಕು ಎಂದು ಹೇಳಲಾಗಿತ್ತು. ಆದರೆ ಸಂವಿಧಾನದ ಮೇಲೆ ಮಾತು ಕೊಟ್ಟು ಅಧಿಕಾರಕ್ಕೆ ಬಂದ ರಾಜಕೀಯ ನಾಯಕರು ಅಂಬೇಡ್ಕರ್ ಕನಸುಗಳನ್ನು ಸಾಕಾರಗೊಳಿಸಲೇ ಇಲ್ಲ. ಸಂವಿಧಾನ ಬರೆಯುವ ಹೊತ್ತಿಗೆ ಅವರೊಂದು ಗುರಿ ಇಟ್ಟುಕೊಂಡಿದ್ದರು. ಕೆಳ ವರ್ಗದ ಮಂದಿಯನ್ನು ಇಂತಿಷ್ಟು ವರ್ಷದೊಳಗೆ ಮೇಲೆ ಎತ್ತಲೇ ಬೇಕು. ಸಮಾಜದ ಕಟ್ಟ ಕಡೆಯ ಮನುಷ್ಯ ತುತ್ತ ತುದಿಗೆ ಏರಲೇಬೇಕು. ಅದಕ್ಕಾಗಿ ಅವರು ಮೀಸಲಾತಿ ಅವಕಾಶ ಕೊಟ್ಟಿದ್ದರು.
ಆದರೆ ನಮ್ಮ ರಾಜಕಾರಣಿಗಳು ಕಟ್ಟ ಕಡೆಯ ಮನುಷ್ಯನ ಕಡೆಗೆ ನೋಟವನ್ನೇ ಹರಿಸಲೇ ಇಲ್ಲ. ಇದೀಗ ಕಟ್ಟ ಕಡೆಯ ಮನುಷ್ಯನೇ ಸಿಡಿದೆದ್ದು ಅಭಿವೃದ್ಧಿ ಪಥದ ಕಡೆ ಹೆಜ್ಜೆ ಹಾಕುತ್ತಿದ್ದಾನೆ.
ಆದರೆ ಮೀಸಲಾತಿ ಹಲವು ವರ್ಗದ ಮಂದಿಗೆ ಮುಳ್ಳಾಗಿದೆ ಅನ್ನುವುದು ಸುಳ್ಳಲ್ಲ. ಹೀಗಾಗಿ ಯುವ ಜನತೆ ನಿಧಾನವಾಗಿ ಮೀಸಲಾತಿ ಬಗ್ಗೆ ಸಿಡಿದೇಳುವ ಪರಿಸ್ಥಿತಿ ಬಂದಿದೆ. ಪ್ರತಿಭಾನ್ವಿತರು ಮೀಸಲಾತಿ ಕಾರಣದಿಂದ ಅವಕಾಶ ವಂಚನೆಗೆ ಒಳಗಾಗುತ್ತಿದ್ದಾರೆ. ಹಾಗಾದರೆ ಮೀಸಲಾತಿ ನಿಲ್ಲಿಸಬೇಕಾ……
ಈ ವಿಡಿಯೋ ನೋಡಿ…ಮೀಸಲಾತಿಯ ಅಗತ್ಯ ಮತ್ತು ಅನಿವಾರ್ಯತೆ ಅರ್ಥವಾಗುತ್ತದೆ.
[youtube https://www.youtube.com/watch?v=ZUmI3y7RW4g&w=848&h=480]
Discussion about this post