ಕುಮಾರಸ್ವಾಮಿ ಸಿಎಂ ಆದ ದಿನದಿಂದಲೂ ಮಾಧ್ಯಮಗಳ ವಿರುದ್ಧ ಕಿಡಿ ಕಾರಲು ಪ್ರಾರಂಭಿಸಿದ್ದರು. ಸಮ್ಮಿಶ್ರ ಸರ್ಕಾರದ ವಿರುದ್ಧ ಜನರು ಹೊಂದಿದ್ದ ಆಕ್ರೋಶವನ್ನು ಮಾಧ್ಯಮಗಳು ಅದರಲ್ಲೂ ದೃಶ್ಯ ಮಾಧ್ಯಮಗಳು ಸುದ್ದಿ ಮಾಡಿದ್ದು ಅವರಿಗೆ ಕಿರಿ ಕಿರಿ ತಂದಿತ್ತು.
ಸಮ್ಮಿಶ್ರ ಸರ್ಕಾರದ ನಡೆ ಕುರಿತಂತೆ ಮಾಧ್ಯಮಗಳು ಯಾವಾಗ ನೆಗೆಟಿವ್ ಅನ್ನಿಸುವ ಸುದ್ದಿಗಳನ್ನು ಪ್ರಸಾರ ಮಾಡಿತೋ ( ಕೆಲವೊಂದು ಸುದ್ದಿಗಳಲ್ಲಿ ಸತ್ಯವಿತ್ತು, ಮತ್ತೆ ಕೆಲವು ಕಪೋಲಕಲ್ಪಿತ ಸುದ್ದಿಗಳಾಗಿತ್ತು ) ಸಿಎಂ ಕುಮಾರಸ್ವಾಮಿ ಮಾಧ್ಯಮಗಳನ್ನು ದೂರವಿಡಲು ಮುಂದಾದರು.
ಮಿಸ್ಟರ್ ರಂಗನಾಥ್..ನನ್ನ ಮೇಲೆ ಗದಾ ಪ್ರಹಾರ ಮಾಡ್ತೀರಾ…ನಾಲಗೆ ಮೇಲೆ ನಿಗಾ ಇರಲಿ…
ಅದರಲ್ಲೂ ಲೋಕಸಭಾ ಚುನಾವಣೆ ಘೋಷಣೆಯಾದ ನಂತರವಂತು ಕುಟುಂಬ ರಾಜಕಾರಣ, ಹಾಸನ, ಮಂಡ್ಯ, ತುಮಕೂರು ಕುರಿತಂತೆ ಸರಣಿ ಕಾರ್ಯಕ್ರಮಗಳು ಪ್ರಸಾರವಾಗಲಾರಂಭಿಸಿತು. ರಾಜ್ಯದ ಬೇರೆ ಕಡೆ ಚುನಾವಣೆ ನಡೆಯುತ್ತಿಲ್ಲ ಅನ್ನುವಂತೆ ಮಾಧ್ಯಮ ಕ್ಯಾಮಾರಗಳು HMT ಕ್ಷೇತ್ರವನ್ನೇ ಫೋಕಸ್ ಮಾಡಿತ್ತು. ಇದು ಉರಿವ ಬೆಂಕಿ ತುಪ್ಪ ಹಾಕಿದಂತಾಗಿತ್ತು.
ಈ ನಡುವೆ ದೃಶ್ಯ ಮಾಧ್ಯಮದ ಚರ್ಚೆಯಲ್ಲಿ ಪಾಲ್ಗೊಳ್ಳಬಾರದು ಎಂದು ಜೆಡಿಎಸ್ ತನ್ನ ನಾಯಕರಿಗೆ ಆದೇಶ ಬೇರೆ ಹೊರಡಿಸಿತು. ಇದರಿಂದ ಮಾಧ್ಯಮ ಮತ್ತು ಕುಮಾರಸ್ವಾಮಿ ನಡುವೆ ಸಣ್ಣ ಮಟ್ಟಿನ ಶೀತಲ ಸಮರ ಶುರುವಾಯ್ತು. ಹಿರಿಯರಾದವರು ಇದನ್ನು ಕೂತು ಬಗೆ ಹರಿಸಿದ್ರೆ ಸರಿ ಹೋಗುತ್ತಿತ್ತು. ಆದರೆ ಆ ಕೆಲಸವನ್ನು ಯಾರೂ ಮಾಡಲಿಲ್ಲ.
ಇಷ್ಟೆಲ್ಲದರ ನಡುವೆ ನಿನ್ನೆ ಅಂದ್ರೆ 06.06.2019 ರಂದು ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ರಂಗನಾಥ್, ಅನಿತಾ ಕುಮಾರಸ್ವಾಮಿಯವರು ಮಾಧ್ಯಮಗಳಿಗೆ ನೀತಿ ಪಾಠ ಹೇಳಿದ ಕುರಿತ ಸುದ್ದಿಯನ್ನು ವಿಮರ್ಶೆ ನಡೆಸುವ ವೇಳೆ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು.
Discussion about this post