ಹಿಂದುಗಳು ಹಿಂಸೆಯ ಸ್ವಭಾವದವರು, ರಾಮಾಯಣ ಮತ್ತು ಮಹಾಭಾರತ ಮಹಾ ಕಾವ್ಯಗಳೇ ಇದಕ್ಕೆ ಸಾಕ್ಷಿ. ಬಹಳಷ್ಟು ರಾಜರು ಯುದ್ಧದಲ್ಲಿ ತೊಡಗಿದ್ದರು ಎಂದು ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು, ಹಿಂದುಗಳು ಹಿಂಸಾತ್ಮಕ ಸ್ವಭಾವವುಳ್ಳವರು. ಇದಕ್ಕೆ ಹಲವಾರು ಐತಿಹಾಸಿಕ ಸಾಕ್ಷಿಗಳಿವೆ. ರಾಮಾಯಣ, ಮಹಾಭಾರತ ಮಹಾನ್ ಗ್ರಂಥಗಳಲ್ಲಿ ಈ ಬಗ್ಗೆ ಪೂರಕ ಮಾಹಿತಿಗಳಿವೆ ಎಂದಿದ್ದಾರೆ.
ಭೋಪಾಲ್ನಲ್ಲಿ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಹಿಂದುಗಳು ಹಿಂಸೆಯಲ್ಲಿ ನಂಬಿಕೆಯಲ್ಲಿ ಇಟ್ಟಿಲ್ಲ ಎಂದು ಈ ಹಿಂದೆ ಹೇಳಿದ್ದರು. ಇದಕ್ಕೆ ಕೌಂಟರ್ ಕೊಡಲು ಹೋದ ಯಚೂರಿ ಹಿಂಸೆ ಅಂದ್ರೆ ಹಿಂದುಗಳು, ಹಿಂದುಗಳು ಅಂದ್ರೆ ಹಿಂಸೆ ಅನ್ನುವ ಅರ್ಥ ಹೇಳಿದ್ದಾರೆ. ಆದರೆ ಹಲವು ರಾಜರು, ಹಿಂದುಗಳನ್ನು ಪ್ರತಿಪಾದಿಸುವವರು ಹಿಂಸೆಯಲ್ಲಿ ತೊಡಗಿದ್ದಾರೆ ಎಂದರು.
ಯಚೂರಿ ಹೇಳಿರುವ ಮಾತುಗಳನ್ನು ನಗಬೇಕೋ, ಆಳಬೇಕೋ ಗೊತ್ತಾಗುತ್ತಿಲ್ಲ. ಹಿಂಸೆ ಅನ್ನುವುದಕ್ಕೆ ಧರ್ಮ ಎಲ್ಲಿದೆ, ಜಾತಿ ಎಲ್ಲಿದೆ. ಯೋಧರನ್ನು ಕೊಂದರಲ್ಲ ಅವರು ಯಾವ ಜಾತಿ. ಭಾರತದೊಳಗೆ ಬಾಂಬ್ ಸಿಡಿಸಿದ್ರಲ್ಲ ಅವರು ಯಾವ ಜಾತಿ. ಹಿಂಸೆ ಅನ್ನುವುದು ಕ್ರೂರ ಮನಸ್ಥಿತಿಯೇ ಹೊರತು, ಅದಕ್ಕೆ ಧರ್ಮದ, ಜಾತಿಯ ಬಣ್ಣ ಬೇಕಾಗಿಲ್ಲ.
Discussion about this post