ಅವ್ರೇನು ರೈತರಾ ಅಂತಾ ಸಿಎಂ ನಮ್ಮ ಬಗ್ಗೆ ಹೇಳ್ತಾರೆ. ರೈತರ ಕಷ್ಟ ಅವ್ರಿಗೇನು ಗೊತ್ತು ಎಂದು ಕೇಳುತ್ತಾರೆ. ನಮ್ಮನ್ನ ಪ್ರಶ್ನೆ ಮಾಡೋರು ಒಂದು ಲೋಟ ಹಾಲು ಕರೆಯಲಿ. ಒಂದೇ ಒಂದು ಲೋಟ ಹಾಲು ಕರೆಯಲಿ, ಜಾಸ್ತಿ ಬೇಡ ಎಂದರು. ಬರ್ಲಿ ನಮ್ಮ ತೋಟಕ್ಕೆ.
ಹಸು ಕರು ಹಾಕುತ್ತೆ. ಹತ್ತು ದಿನ ಹಸುವಿಗೆ ಏನ್ ಮೇವು ಹಾಕಬೇಕು ಅಂತಾ ಅವ್ರನ್ನ ಕೇಳಿ. ನನಗೆ ರೈತ ಅಂತಾ ಹೇಳಿಕೊಳ್ಳೋಕೆ ಇಷ್ಟ. ರೈತರ ಕಷ್ಟ ಗೊತ್ತಿಲ್ಲ ಅಂತಾ ನಮ್ಗೆ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಂಡ್ಯಕ್ಕೆ ಅಷ್ಟು ಅನುದಾನ ಇಷ್ಟು ಅನುದಾನ ಅನ್ನುವ ದಳಪತಿಗಳ ಮಾತಿಗೆ ತಿರುಗೇಟು ಕೊಟ್ಟ ದರ್ಶನ್ “ಅನುದಾನ, ಅನುದಾನ ಅಂತಾ ಹೇಳುತ್ತಾರೆ, ಆ ಅನುದಾನವನ್ನ ನಮ್ಮ ಕೈಗೆ ಕೊಟ್ಟು ನೋಡಲಿ. ನಾವು ಹೇಗೆ ಮಾಡೋದು ಅನ್ನೋದನ್ನ ತೋರಿಸಿಕೊಡುತ್ತೇವೆ ಅಂದರು.
ಈ ಮೂಲಕ ಮಂಡ್ಯದಲ್ಲಿ ಸುಮಲತಾ ಗೆದ್ರೆ ಅಭಿವೃದ್ಧಿಯನ್ನು ಮಾಡಿ ತೋರಿಸುತ್ತೇವೆ ಅಂದರು.
Discussion about this post