ಮೋದಿ…ಮೋದಿ ಅನ್ನೋರಿಗೆ ಹೊಡೆಯಿರಿ …. ಹೀಗೆಂದು ಕರೆ ಕೊಟ್ಟವರೂ ಬೇರೆ ಯಾರೂ ಅಲ್ಲಾ ….ಸ್ವತಃ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ. ಈ ಒಂದು ಹೇಳಿಕೆ ಹೀಗ ವೈರಲ್ ಆಗಿದೆ.
ಅವರು ಭಾನುವಾರ ಅರಸೀಕೆರೆ ಪಟ್ಟಣದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ಈ ಹೇಳಿಕೆ ಕೊಟ್ಟಿದ್ದಾರೆ. ಇದೊಂದು ಪ್ರಚೋದನಕಾರಿ ಹೇಳಿಕೆ ಅನ್ನುವ ಟೀಕೆ ಕೇಳಿ ಬಂದಿದ್ದು, ಮೋದಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸ್ಪಷ್ಟ ನೆ ನೀಡಿರುವ ಶಿವಲಿಂಗೆಗೌಡರು ಸ್ವಿಸ್ ಬ್ಯಾಂಕ್ ಹಣತಂದು ಎಲ್ಲರ ಖಾತೆಗೆ ಹಣ ಹಾಕ್ತೀವಿ ಎಂದು ಮೋದಿ ಹೇಳಿದ್ದರು, ಯಾರದ್ದಾದರು ಖಾತೆಗೆ 15 ರೂಪಾಯಿ ಹಣ ಬಂತಾ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಚುನಾವಣೆ ಪ್ರಚಾರಕ್ಕೆ ಬಂದಾಗ ನೀವು ಕೇಳ್ಬೇಕು,ಏಯ್ ನಿಲ್ಸಯ್ಯಾ ಎಲ್ಲಯ್ಯಾ ಮೋದಿ ಹೇಳಿದ ದುಡ್ಡು; ಎಲ್ಲಿ ನಿಮ್ಮ ಮೋದಿ ಯಾರ ಖಾತೆಗೆ ಹಣ ಹಾಕಿದ್ದಾರೆ ಎಂದು ಪ್ರಶ್ನಿಸಿ ಎಂದು ಕಾರ್ಯಕರ್ತರಿಗೆ ಹೇಳಿರುವುದಾಗಿ ಗೌಡರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಶಿವಲಿಂಗೇಗೌಡ ಹೇಳಿಕೆಗೆ ಎಲ್ಲ ಕಡೆಗಳಿಂದ ಟೀಕೆಗಳು ವ್ಯಕ್ತವಾಗಿವೆ. ಬಿಜೆಪಿ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಬಹಿರಂಗ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.
ಪಾಪ ಶಿವಲಿಂಗೇಗೌಡರಾದರೂ ಏನು ಮಾಡಲು ಸಾಧ್ಯ. ಮೋದಿ ಹೆಸರನ್ನು ಘೋಷಣೆ ಕೂಗಿದಷ್ಟು ಕುಮಾರಸ್ವಾಮಿ, ದೇವೇಗೌಡರ ಹೆಸರನ್ನು ಕೂಗಿದ್ದಾರೆಯೇ.
ಇನ್ನು 15 ಲಕ್ಷದ ವಿಚಾರಕ್ಕೆ ಬಂದ್ರೆ, ಪ್ರಧಾನಿ ನರೇಂದ್ರ ಮೋದಿ ಎಲ್ಲೂ ಕೂಡಾ 15 ಲಕ್ಷ ಖಾತೆಗೆ ಹಾಕ್ತೀನಿ ಎಂದು ಹೇಳಿಲ್ಲ. ಶಿವಲಿಂಗೇಗೌಡರು 15 ಲಕ್ಷ ಪ್ರಸ್ತಾಪಿಸಿ ಮೋದಿ ಮಾಡಿದ ಭಾಷಣನ್ನು ನೋಡುವುದು ಬೆಟರ್.
ಕಾಂಗ್ರೆಸ್ ಸಿಟ್ಟಿಂಗ್ ಸಂಸದ ಸ್ಥಾನವನ್ನು ಕಸಿದುಕೊಂಡು ದೇವೇಗೌಡರು ಸ್ಪರ್ಧಿಸುವ ಮಟ್ಟಿಗೆ ಬಂದಿದ್ದಾರೆ ಅಂದ ಮೇಲೆ, ಮೋದಿ ಮೋದಿ ಅನ್ನುವ ಘೋಷಣೆ ಜೆಡಿಎಸ್ ನಾಯಕರಿಗೆ ಕಿರಿ ಕಿರಿ ಉಂಟು ಮಾಡುವುದರಲ್ಲಿ ಅನುಮಾನವಿಲ್ಲ.
ಶಿವಲಿಂಗೆಗೌಡರೇ ಒಬ್ಬ ಜನಪ್ರತಿನಿಧಿಯಾಗಿ, ಲಾ ಮೇಕರ್ ಅನ್ನಿಸಿಕೊಂಡವರಾಗಿ ಮೋದಿ ಅಭಿಮಾನಿಗಳಿಗೆ ಹೊಡೆಯಬೇಕು ಅಂತೀರಲ್ಲ, ಏನು ಹೇಳೋಣ. ಮುಂದಿನ ಪೀಳಿಗೆಗೆ ನೀವು ಹೇಳಿಕೊಡುತ್ತಿರುವುದು ಏನನ್ನು ಅನ್ನುವುದಾದರೂ ನಿಮಗೆ ಅರಿವಿದೆಯೇ. ಮತ್ತೆ ಅಂತೀರಿ ಮಂಡ್ಯ, ಹಾಸನ, ತುಮಕೂರು ನಮ್ದೆ ಎಂದು.
Discussion about this post