ಅತ್ಯಾಚಾರದ ಕುರಿತಂತೆ ಇರುವ ಕಾಯ್ದೆಯಿಂದ ಕೆಲವೊಂದು ಸಲ ಪುರುಷರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಒಳ್ಳೆಯ ಉದ್ದೇಶದಿಂದಲೇ ತಂದಿರುವ ಕಾನೂನು ದುರ್ಬಳಕೆಯಾಗುತ್ತಿದೆಯೇ..? rape case if relationship fails
ನವದೆಹಲಿ : ಮಹಿಳೆಯೇ ಇಷ್ಟಪಟ್ಟು ಇಷ್ಟಪಟ್ಟ ಪುರುಷನ ಜೊತೆಗಿದ್ದು ಸಂಬಂಧ ಹಾಳಾದ ಮೇಲೆ ಅತ್ಯಾಚಾರವಾಯ್ತು ( rape case if relationship fails ) ಎಂದು ದೂರು ನೀಡುವ ಹಾಗಿಲ್ಲ ಎಂದು ದೇಶದ ಸರ್ವೋಚ್ಛ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.ಸುಪ್ರೀಂಕೋರ್ಟ್ ನ ಈ ತೀರ್ಪು ಮೈಲಿಗಲ್ಲು ಅನ್ನಿಸಿಕೊಳ್ಳುವ ಸಾಧ್ಯತೆಗಳಿದ್ದು, ಅನ್ಯಾಯಕ್ಕೆ ಒಳಗಾದ ಅನೇಕ ಪುರುಷರಿಗೆ ನ್ಯಾಯ ಸಿಗುವ ಸಾಧ್ಯತೆಗಳಿದೆ.
ಜಾಮೀನು ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಮಾತುಗಳನ್ನು ಹೇಳಿದ್ದು, ಆರೋಪಿ ಅನ್ಸಾರ್ ಮೊಹಮ್ಮದ್ ಎಂಬಾತ ತನ್ನ ವಿರುದ್ಧ ಸಲ್ಲಿಸಲಾಗಿರುವ ಅತ್ಯಾಚಾರ ಆರೋಪದ ಕುರಿತ ನಿರೀಕ್ಷಣಾ ಜಾಮೀನಿನ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಹೇಮಂತ್ ಗುಪ್ತ ಮತ್ತು ನ್ಯಾ. ವಿಕ್ರಮನಾಥ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಇದನ್ನೂ ಓದಿ : minor driving fine : ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಾಯಿಗೆ 25,500 ರೂ ದಂಡ ವಿಧಿಸಿದ ಕೋರ್ಟ್
ಅನ್ಸಾರ್ ಮೊಹಮ್ಮದ್ ಮತ್ತು ದೂರುದಾರ ಮಹಿಳೆ ಪರಸ್ಪರ ಇಷ್ಟಪಟ್ಟು ಜೊತೆಗಿದ್ದರು. 4 ವರ್ಷಗಳ ಜೊತೆಯಾಗಿ ಜೀವನವನ್ನು ನಡೆಸಿದ್ದರು. ಆದರೆ ಸಂಬಂಧ ಹದಗೆಟ್ಟ ಬಳಿಕ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದ ಮಹಿಳೆ ಅತ್ಯಾಚಾರ ಆರೋಪ ಹೊರಿಸಿದ್ದರು. ಈ ವೇಳೆ ನಿರೀಕ್ಷಣಾ ಜಾಮೀನು ಕೋರಿ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ನಿರೀಕ್ಷಣಾ ಜಾಮೀನು ನಿರಾಕರಿಸಲಾಗಿತ್ತು. ಹೀಗಾಗಿ ಅನ್ಸಾರ್ ಮೊಹಮ್ಮದ್ ಸುಪ್ರೀಂಕೋರ್ಟ್ ಕದ ತಟ್ಟಿದ್ದರು.
ಈ ವೇಳೆ ರಾಜಸ್ಥಾನ ಹೈಕೋರ್ಟ್ ತೀರ್ಪನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್, ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಜೊತೆಗೆ ದೂರದಾರ ಮಹಿಳೆ ಇಷ್ಟಪಟ್ಟು ನಾಲ್ಕು ವರ್ಷಗಳ ಕಾಲ ಜೊತೆಗಿದ್ದರು. ಈಗ ಸಂಬಂಧ ಹಾಳಾಗಿದೆ ಅನ್ನುವ ಕಾರಣಕ್ಕೆ ಸೆಕ್ಷನ್ 376 (2)ರ ಪ್ರಕಾರ FIR ದಾಖಲು ಮಾಡಲಾಗದು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಈ ಆದೇಶದ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ನ್ಯಾಯಾಲಯ ಈ ತೀರ್ಪು ಕೇವಲ ನಿರೀಕ್ಷಣಾ ಜಾಮೀನಿಗೆ ಸಂಬಂಧಪಟ್ಟಂತೆ ಮಾತ್ರ. ಹೊರತಾಗಿ ಈ ದೂರಿನ ತನಿಖೆಯನ್ನು ಈ ತೀರ್ಪಿನಿಂದ ಪ್ರಭಾವಶಾಲಿಯಾಗದೆ ಪೊಲೀಸರು ಮುಂದುವರಿಸಬೇಕು ಎಂದು ಸೂಚಿಸಿದೆ.
ಚಿಲ್ಲರೆ ವ್ಯಾಪಾರಿಯೊಬ್ಬ ಚಿಲ್ಲರೆ ಕೊಟ್ಟು ಬೈಕ್ ಖರೀದಿಸಿ ಇದೀಗ ವೈರಲ್ ಆಗಿದ್ದಾನೆ
ಕೋಲ್ಕತ್ತಾ : ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ವ್ಯಾಪಾರಿಯಾಗಿರುವ ಸುಬ್ರತಾ ಸರ್ಕಾರ್ ಗೆ ಬೈಕ್ ಖರೀದಿಸಬೇಕು ಅನ್ನುವ ಆಸೆಯಿತ್ತು. ಆದರೆ ಅಷ್ಟು ಮೊತ್ತ ಕೊಟ್ಟು ಬೈಕ್ ಖರೀದಿಸುವುದು ಸುಲಭವಿರಲಿಲ್ಲ. ಹೀಗಾಗಿ ಒಂದಿಷ್ಟು ವರ್ಷ ಕಳೆಯಲಿ ಎಂದು ತಮ್ಮ ಆಸೆಯನ್ನು ತಮ್ಮಲ್ಲೇ ಅದುಮಿಟ್ಟುಕೊಂಡಿದ್ದಾರೆ.
ಅಷ್ಟು ಹೊತ್ತಿಗೆ ನೋಟು ನಿಷೇಧವಾಯ್ತು. ಈ ವೇಳೆ ನಾಣ್ಯ ಚಲಾವಣೆ ಹೆಚ್ಚಿದ ಕಾರಣ ನಾಣ್ಯಗಳ ಚಲಾವಣೆ ಹೆಚ್ಚಾಯ್ತು. ಇನ್ನು ಸುಬ್ರತಾ ಅವರು ಚಿಲ್ಲರೆ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ ಕಾರಣ ಗ್ರಾಹಕರು ಅತೀ ಹೆಚ್ಚು ಚಿಲ್ಲರೆಯನ್ನೇ ಕೊಡುತ್ತಿದ್ದರು. ಹೀಗೆ ಸಂಗ್ರಹವಾದ ಚಿಲ್ಲರೆಯಲ್ಲಿ ಎರಡು ರೂಪಾಯಿ ಮುಖಬೆಲೆಯ ನಾಣ್ಯವನ್ನು ಉಳಿತಾಯ ಎಂದು ಕವರ್ ನಲ್ಲಿ ಹಾಕಿ ಇಟ್ಟುಕೊಳ್ಳತೊಡಗಿದರು. ಮುಂದೊಂದು ದಿನ ಏನಾದರೂ ಖರೀದಿಸಬಹುದು ಅನ್ನುವುದು ಅವರ ಇಚ್ಛೆಯಾಗಿತ್ತು. ಆಗ ಇದೇ ಹಣದಲ್ಲಿ ಬೈಕ್ ಖರೀದಿಸುತ್ತೇನೆ ಅನ್ನುವ ಕಲ್ಪನೆ ಅವರಿಗೆ ಇರಲಿಲ್ಲ.
ಹೀಗೆ 2016ರ ನವೆಂಬರ್ ನಿಂದ ಪ್ರಾರಂಭವಾದ ಚಿಲ್ಲರೆ ಸಂಗ್ರಹ ಹಾಗೇ ಸಾಗಿತ್ತು. ಕಳೆದ ತಿಂಗಳು ಬೈಕ್ ಶೋ ರೂಮ್ ಮುಂದೆ ಸಾಗುವಾಗ ನಾನ್ಯಾಕೆ ಬೈಕ್ ಖರೀಸಬಾರದು ಅನ್ನುವ ಹಳೆಯ ಕನಸೊಂದು ಮತ್ತೆ ಚಿಗುರೊಡೆದಿದೆ. ತಡ ಮಾಡಲಿಲ್ಲ 17 ವರ್ಷದ ತನ ಮಗನಿಗೆ ಮನೆಯಲ್ಲಿ ಇಟ್ಟಿದ್ದ ನಾಣ್ಯ ಎಣಿಸಲು ಸೂಚಿಸಿದ್ದಾರೆ.
ಈ ನಡುವೆ ಬೈಕ್ ಶೋ ರೂಮ್ ಮ್ಯಾನೇಜರ್ ಅನ್ನು ಸಂಪರ್ಕಿಸಿ ನಾಣ್ಯ ಕೊಟ್ಟು ಬೈಕ್ ಖರೀದಿಸಬಹುದೇ ಎಂದು ವಿಚಾರಿಸಿದ್ದಾರೆ. ಅವರು ಸರಿ ಅಂದ ಬೆನ್ನಲ್ಲೇ ತಲಾ 10 ಸಾವಿರ ರೂಪಾಯಿಯ 5 ಪ್ಯಾಕೆಟ್ ಮತ್ತು ದೊಡ್ಡ ಗೋಣೆ ಚೀಲದಲ್ಲಿ ನಾಣ್ಯಗಳನ್ನು ತುಂಬಿ ರಿಕ್ಷಾ ಮೂಲಕ ಶೋ ರೂಮ್ ಗೆ ತಲುಪಿಸಿದ್ದಾರೆ.
ಇದಾದ ಬಳಿಕ ಸತತ ಮೂರು ದಿನಗಳ ಕಾಲ 5 ಮಂದಿ ಸಿಬ್ಬಂದಿ ನಾಣ್ಯಗಳನ್ನು ಎಣಿಸಿದ್ದಾರೆ ಒಟ್ಟು 1 ಲಕ್ಷದ 50 ಸಾವಿರ ರೂಪಾಯಿ ನಾಣ್ಯದಲ್ಲೇ ಬಂದಿತ್ತು. ಉಳಿದ ಮೊತ್ತವನ್ನು ಸುಬ್ರತಾ ಕೊಟ್ಟಿದ್ದು, ಇದೇ ಮಂಗಳವಾರ ಬೈಕ್ ಕೀ ಹಸ್ತಾಂತರಿಸಲಾಗಿದೆ.
Discussion about this post