ತುಮಕೂರು : 7 ಮತ್ತು 3 ವರ್ಷದ ಪುಟಾಣಿ ಅಕ್ಕ ತಂಗಿಯರು ಕಟ್ಟೆಗೆ ಕಾಲು ಜಾರಿ ಬಿದ್ದು ಮೃತಪಟ್ಟ ದಾರುಣ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಬಳಿಯ ವರಣಸಂದ್ರ ಗ್ರಾಮದಲ್ಲಿ ನವೆಂಬರ್ 18 ರಂದು ಸಂಜೆ ನಡೆದಿದೆ.
ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು 7 ವರ್ಷದ ಕವನ ಮತ್ತು ಮೂರು ವರ್ಷದ ಯೋಕ್ಷಿತಾ ಮೃತಪಟ್ಟ ಪುಟಾಣಿಗಳು. ಮಕ್ಕಳ ತಾಯಿ ಮಂಜುಳಾ ಕಟ್ಟೆಯಲ್ಲಿ ಬಟ್ಟೆ ತೊಳೆಯುವ ಸಂದರ್ಭದಲ್ಲಿ ಕಟ್ಟೆ ಬಳಿ ಮಕ್ಕಳಿಬ್ಬರು ಆಟವಾಡುತ್ತಿದ್ದರು. ಈ ವೇಳೆ ಕಾಲು ಜಾರಿ ಕಟ್ಟೆಯ ಒಳಗೆ ಮಕ್ಕಳು ಬಿದ್ದಿದ್ದಾರೆ. ಇನ್ನು ಗಮನಿಸಿದ ಮಂಜುಳಾ ಕೂಡಾ ಕಟ್ಟೆಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಾ ಕಟ್ಟೆಗೆ ಹಾರಿದ್ದಾರೆ. ಆದರೆ ಅಷ್ಟು ಹೊತ್ತಿಗೆ ಮಕ್ಕಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ತಾಯಿಯನ್ನು ರಕ್ಷಿಸಲಾಗಿದೆ.
ಶಬರಿಮಲೆ ತೀರ್ಥದಲ್ಲಿ ಕೈ ತೊಳೆದ ದೇವಸ್ವಂ ಸಚಿವ : ವರ್ತನೆಯನ್ನು ಸಮರ್ಥಿಸಿಕೊಂಡ ಕೆ ರಾಧಾಕೃಷ್ಣನ್
ಕೇರಳ : ಶಬರಿಮಲೆ ಅಯ್ಯಪ್ಪ ಕ್ಷೇತ್ರದ ವಿಚಾರದಲ್ಲಿ ವಿವಾದ ಸೃಷ್ಟಿಸುವ ಮಂದಿಗೆ ಕಡಿಮೆಯೇನಿಲ್ಲ. ಇದೀಗ ಕೇರಳ ದೇವಸ್ವಂ ಸಚಿವರ ಸರದಿ. ಹಿಂದೂಗಳ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟ ಅವರು ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಗುರಿಯಾಗಿದ್ದಾರೆ.
ವಾರ್ಷಿಕ ಯಾತ್ರೆಗೆ ಶಬರಿಮಲೆ ದೇಗುಲದ ಬಾಗಿಲು ತೆರೆದ ದಿನ ಸಚಿವ ರಾಧಾಕೃಷ್ಣನ್ ಶಬರಿಮಲೆ ಶ್ರೀಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ದೇವಾಲಯದ ಅರ್ಚಕರು ನೆರೆದಿದ್ದ ವಿಐಪಿಗಳಿಗೆ ತೀರ್ಥ ಪ್ರಸಾದ ಹಂಚಿದ್ದಾರೆ. ನಿಂತಿದ್ದ ಎಲ್ಲರೂ ತೀರ್ಥವನ್ನು ಸೇವಿಸಿದ್ರೆ. ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಮಾತ್ರ ಅದನ್ನು ಕೈ ತೊಳೆಯಲು ಬಳಸಿಕೊಂಡಿದ್ದಾರೆ. ತೀರ್ಥವನ್ನು ಸೇವಿಸುವ ಬದಲು ಕೈಗೆ ಒರೆಸಿಕೊಂಡು ಸುಮ್ಮನಾಗಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Discussion about this post