ತುಮಕೂರು : 7 ಮತ್ತು 3 ವರ್ಷದ ಪುಟಾಣಿ ಅಕ್ಕ ತಂಗಿಯರು ಕಟ್ಟೆಗೆ ಕಾಲು ಜಾರಿ ಬಿದ್ದು ಮೃತಪಟ್ಟ ದಾರುಣ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಬಳಿಯ ವರಣಸಂದ್ರ ಗ್ರಾಮದಲ್ಲಿ ನವೆಂಬರ್ 18 ರಂದು ಸಂಜೆ ನಡೆದಿದೆ.
ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು 7 ವರ್ಷದ ಕವನ ಮತ್ತು ಮೂರು ವರ್ಷದ ಯೋಕ್ಷಿತಾ ಮೃತಪಟ್ಟ ಪುಟಾಣಿಗಳು. ಮಕ್ಕಳ ತಾಯಿ ಮಂಜುಳಾ ಕಟ್ಟೆಯಲ್ಲಿ ಬಟ್ಟೆ ತೊಳೆಯುವ ಸಂದರ್ಭದಲ್ಲಿ ಕಟ್ಟೆ ಬಳಿ ಮಕ್ಕಳಿಬ್ಬರು ಆಟವಾಡುತ್ತಿದ್ದರು. ಈ ವೇಳೆ ಕಾಲು ಜಾರಿ ಕಟ್ಟೆಯ ಒಳಗೆ ಮಕ್ಕಳು ಬಿದ್ದಿದ್ದಾರೆ. ಇನ್ನು ಗಮನಿಸಿದ ಮಂಜುಳಾ ಕೂಡಾ ಕಟ್ಟೆಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಾ ಕಟ್ಟೆಗೆ ಹಾರಿದ್ದಾರೆ. ಆದರೆ ಅಷ್ಟು ಹೊತ್ತಿಗೆ ಮಕ್ಕಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ತಾಯಿಯನ್ನು ರಕ್ಷಿಸಲಾಗಿದೆ.
![breaking news](https://torrentspree.com/wp-content/uploads/2021/10/breaking.jpeg)
ಶಬರಿಮಲೆ ತೀರ್ಥದಲ್ಲಿ ಕೈ ತೊಳೆದ ದೇವಸ್ವಂ ಸಚಿವ : ವರ್ತನೆಯನ್ನು ಸಮರ್ಥಿಸಿಕೊಂಡ ಕೆ ರಾಧಾಕೃಷ್ಣನ್
ಕೇರಳ : ಶಬರಿಮಲೆ ಅಯ್ಯಪ್ಪ ಕ್ಷೇತ್ರದ ವಿಚಾರದಲ್ಲಿ ವಿವಾದ ಸೃಷ್ಟಿಸುವ ಮಂದಿಗೆ ಕಡಿಮೆಯೇನಿಲ್ಲ. ಇದೀಗ ಕೇರಳ ದೇವಸ್ವಂ ಸಚಿವರ ಸರದಿ. ಹಿಂದೂಗಳ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟ ಅವರು ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಗುರಿಯಾಗಿದ್ದಾರೆ.
![kerala devaswom-minister-under-fire-for-using-holy-water-as-sanitiser-kerala-latest-news k-radhakrishnan-on-sabarimala-controversy](https://torrentspree.com/wp-content/uploads/2021/11/kerala-mnister.jpg)
ವಾರ್ಷಿಕ ಯಾತ್ರೆಗೆ ಶಬರಿಮಲೆ ದೇಗುಲದ ಬಾಗಿಲು ತೆರೆದ ದಿನ ಸಚಿವ ರಾಧಾಕೃಷ್ಣನ್ ಶಬರಿಮಲೆ ಶ್ರೀಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ದೇವಾಲಯದ ಅರ್ಚಕರು ನೆರೆದಿದ್ದ ವಿಐಪಿಗಳಿಗೆ ತೀರ್ಥ ಪ್ರಸಾದ ಹಂಚಿದ್ದಾರೆ. ನಿಂತಿದ್ದ ಎಲ್ಲರೂ ತೀರ್ಥವನ್ನು ಸೇವಿಸಿದ್ರೆ. ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಮಾತ್ರ ಅದನ್ನು ಕೈ ತೊಳೆಯಲು ಬಳಸಿಕೊಂಡಿದ್ದಾರೆ. ತೀರ್ಥವನ್ನು ಸೇವಿಸುವ ಬದಲು ಕೈಗೆ ಒರೆಸಿಕೊಂಡು ಸುಮ್ಮನಾಗಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Discussion about this post