ಬೆಂಗಳೂರು : ರಾಜ್ಯದಲ್ಲಿ ಅಕ್ರಮ ದೇವಸ್ಥಾನಗಳ ತೆರವು ವಿಚಾರ ಸದ್ದುಮಾಡುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಅಕ್ರಮವಾಗಿ ನಿರ್ಮಿಸುತ್ತಿರುವ ಮಸೀದಿಯೊಂದನ್ನು ತಕ್ಷಣ ತೆರವುಗೊಳಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿದೆ.
ಬೆಂಗಳೂರಿನ HBR ಲೇಔಟ್ ಬಳಿ ಬಿಬಿಎಂಪಿಯ ಅನುಮತಿಯಿಲ್ಲದೆ ಮಸೀದಿ ನಿರ್ಮಿಸಲಾಗುತ್ತಿತ್ತು. ಈ ಮಸೀದಿ ನಕ್ಷೆಗೆ ಬೆಂಗಳೂರು ಮಹಾನಗರ ಪಾಲಿಕೆಯಿಂದ ಅನುಮೋದನೆಯಲ್ಲೂ ಪಡೆದಿರಲಿಲ್ಲ. ಈ ಸಂಬಂಧ ಸ್ಥಳೀಯ ನಿವಾಸಿ ಸ್ಯಾಮ್ ಫಿಲಿಪ್ ಮತ್ತಿತರರು ಹೈಕೋರ್ಟ್ ಮೆಟ್ಟಿಲೇರಿದ್ದರು. ನಕ್ಷೆ ಪಡೆಯದೇ ಮಸೀದಿ ನಿರ್ಮಾಣಕ್ಕೆ ಆಕ್ಷೇಪ ಎತ್ತಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ನಿರ್ಮಿಸಿರುವ ಮಸೀದಿಯನ್ನು ತೆರವುಗೊಳಿಸಿ ಎಂದು BBMP ಗೆ ಖಡಕ್ಕ್ ಆದೇಶ ನೀಡಿದೆ.
ಹೀಗಾಗಿ ನಿರ್ಮಾಣ ಹಂತದಲ್ಲಿರುವ0 ಮಸೀದಿ ತೆರವುಗೊಳಿಸಲು ಬಿಬಿಎಂಪಿ ಸಿದ್ದತೆ ನಡೆಸಿಕೊಳ್ಳಬೇಕಿದೆ. ಹಾಗಾದ್ರೆ ಹೈಕೋರ್ಟ್ ಆದೇಶ ಜಾರಿಗೆ ಬಿಬಿಎಂಪು ಮುಂದಾಗುತ್ತದೆಯೇ…ಅದೇ ಈಗಿರುವ ಕುತೂಹಲ
Discussion about this post