ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆ ಆಗಸ್ಟ್ ನಲ್ಲಿ ಬರುತ್ತದೆ. ಸಪ್ಟಂಬರ್ ಬರುತ್ತದೆ ಎಂದು ತಜ್ಞರು ಈ ಹಿಂದೆ ಹೇಳ್ತಾ ಇದ್ರು. ಆದರೆ ಕೊರೋನಾ ಸೋಂಕಿನ ಮೂರನೇ ಅಲೆಯ ಎಂಟ್ರಿ ಬಗ್ಗೆ ತಜ್ಞರಲ್ಲಿ ಸ್ಪಷ್ಟ ಉತ್ತರವಿರಲಿಲ್ಲ. ಇರಲು ಸಾಧ್ಯವೂ ಇಲ್ಲ. ಕಾರಣ ಜನರ ವರ್ತನೆಯ ಮೇಲೆ ಕೊರೋನಾ ಸೋಂಕಿನ ಮೂರನೇ ಅಲೆ ನಿರ್ಧಾರವಾಗಲಿದೆ.
ಒಂದು ವೇಳೆ ಜನರೇ ಎಚ್ಚೆತ್ತುಕೊಂಡು ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡು ಲಸಿಕೆ ಹಾಕಿಸಿಕೊಂಡರೆ ಮೂರನೇ ಅಲೆಯನ್ನೇ ತಡೆಯಬಹುದು. ಆದರೆ ಸರ್ಕಾರ ಕಾನೂನು ಮಾಡುವುದೇ ನಾವು ಮುರಿಯಲಿಕ್ಕೆ ಅನ್ನೋ ವರ್ತನೆಯ ನಾಗರಿಕರು ಇರೋ ತನಕ ಸೋಂಕು ನಿಯಂತ್ರಿಸಲು ಸಾಧ್ಯವೇ ಇಲ್ಲ. ಜೊತೆಗೆ ಲಸಿಕೆ ಕುರಿತಂತೆ ಸುಳ್ಳು ಸುದ್ದಿ ಹರಡುವ ನಾಲಿಗೆ ಇರೋ ತನಕ ಸೋಂಕು ನಿಯಂತ್ರಿಸುವುದು ಕನಸಿನ ಮಾತು.
ಈ ನಡುವೆ ಕೊರೋನಾ ಸೋಂಕಿನ ಮೂರನೇ ಅಲೆ ಕುರಿತಂತೆ ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಗುಡ್ ನ್ಯೂಸ್ ಕೊಟ್ಚಿದ್ದು, ಕೊರೋನಾ ಸೋಂಕಿನ ಮೂರನೇ ಅಲೆ ತಡವಾಗಿ ಬರಲಿದೆ ಅಂದಿದ್ದಾರೆ. ಜೊತೆ ಲಸಿಕೆ ಚುಚ್ಚುವ ಕಾರ್ಯಕ್ಕೆ ವೇಗ ಕೊಟ್ಟು, ಜನ ಅಗತ್ಯ ನಿಯಮಗಳನ್ನು ಪಾಲಿಸಿದರೆ ಮೂರನೇ ಅಲೆ ಬಂದು ಹೋಗಿದ್ದು ಗೊತ್ತೇ ಆಗುವುದಿಲ್ಲ ಜೊತೆಗೆ ಮೊದಲ ಮತ್ತು ಎರಡನೇ ಅಲೆಗಳಷ್ಟು ಇದು ಪರಿಣಾಮಕಾರಿಯಾಗಿ ಇರುವುದಿಲ್ಲ ಅಂದಿದ್ದಾರೆ.
3ನೇ ಅಲೆ ಯಾವಾಗ ಬರುತ್ತದೆ ಅನ್ನುವ ಬಗ್ಗೆ ನಿಖರತೆ ಇಲ್ಲ. ಆದರೂ ಸಪ್ಟಂಬರ್ ಅಕ್ಟೋಬರ್ ಹೊತ್ತಿಗೆ ದೇಶಕ್ಕೆ ಹಿಟ್ ಆಗುವ ಸಾಧ್ಯತೆಗಳಿದೆ. ನಾವು ಹೇಗೆ ವರ್ತಿಸುತ್ತೇವೆ ಎಂಬುದರ ಮೇಲೆ ಭವಿಷ್ಯದಲ್ಲಿ ಪ್ರಕರಣಗಳ ಸಂಖ್ಯೆ ನಿರ್ಧಾರವಾಗಲಿದೆ.ಹೆಚ್ಚೆಚ್ಚು ಮಂದಿ ಲಸಿಕೆ ಹಾಕಿಸಿಕೊಂಡು ಕೊರೋನಾ ನಿಯಮಗಳನ್ನು ಪಾಲಿಸಿದರೆ ಕೊರೋನಾ ವಿರುದ್ಧದ ಸಮರ ಯಶಸ್ವಿಯಾಗಲಿದೆ ಅಂದಿದ್ದಾರೆ.
Discussion about this post